ದಾವಣಗೆರೆ, ಬಾಗಲಕೋಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
ದಾವಣಗೆರೆ/ ಬಾಗಲಕೋಟೆ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇಂದು ದಾವಣಗೆರೆಯಲ್ಲಿ ಪ್ರೇರಣಾ ಯುವ ಸಂಸ್ಥೆಯಿಂದ ಬುಲೆಟ್ ಬೈಕ್ ರ್ಯಾಲಿ ನಡೆಯಿತು. ಬಾಗಲಕೋಟೆಯ ನಗರದ ಬಸವ ವೖತ್ತದಲ್ಲಿ ಮಾಧವ ಸೇವಾ ಕೇಂದ್ರ ವತಿಯಿಂದ 20ನೇ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ. ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಹುತಾತ್ಮರಾದ ಯೋಧರ ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದರೂ, ಕೆಲ ಕುಟುಂಬದವರಿಗೆ ಇನ್ನೂ ಸರಿಯಾಗಿ ಸೌಲಭ್ಯ ಸಿಕ್ಕಿಲ್ಲ.ಈ ಬಗ್ಗೆ ಗಮನ ಹರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿ,ಜಯ ಘೋಷಣೆ ಹಾಕುವ ಮೂಲಕ ನಮನ ಸಲ್ಲಿಸಿದರು.
Last Updated : Jul 26, 2019, 10:30 PM IST