ಸಪ್ತಗಿರಿ ರೈಸ್ ಮಿಲ್ಗೆ ಆಹಾರ ಮತ್ತು ನಾಗರಿಕ ಖಾತೆ ಸಚಿವ ಗೋಪಾಲಯ್ಯ ಭೇಟಿ!
ತುಮಕೂರು: ನಗರದ ವಸಂತನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಅತಿದೊಡ್ಡ ಸಪ್ತಗಿರಿ ರೈಸ್ ಮಿಲ್ಗೆ ಇಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಗೋಪಾಲಯ್ಯ ಭೇಟಿ ನೀಡಿ, ಅಲ್ಲಿನ ಉನ್ನತ ತಂತ್ರಜ್ಞಾನವನ್ನು ಪರಿಶೀಲನೆ ನಡೆಸಿದರು. ರೈಸ್ ಮಿಲ್ ಮಾಲೀಕ ಶ್ರೀಧರ್ ಬಾಬು ಎಂಬುವರು ಉನ್ನತ ತಂತ್ರಜ್ಞಾನದ ಮೂಲಕ ಅಕ್ಕಿಯನ್ನು ಮಾಡುತ್ತಿರುವ ಕುರಿತು ಮಾಹಿತಿ ಪಡೆದರು.