ಭವಿಷ್ಯವನ್ನೇ ಕಟ್ಟಿಕೊಳ್ತೀವಿ;ಎಕ್ಸಾಂ ಕಟ್ಟೋಕಾಗಲ್ವಾ?ವಿದ್ಯಾರ್ಥಿಗಳಿಗೆ ಸೆಲೆಬ್ರಿಟಿಗಳ ಧೈರ್ಯದ ಮಾತು
ಕನ್ನಡ ಚಿತ್ರರಂಗದ ಸಂಭಾಷಣೆಗಾರ ಮಾಸ್ತಿ ಮಂಜು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಜತೆಗೆ ಅನುತ್ತೀರ್ಣರಾದ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಜೀವನದಲ್ಲಿ ಪರೀಕ್ಷೆ ಫಲಿತಾಂಶಗಳು ಬರ್ತಾನೇ ಇರುತ್ತವೆ. ಅದರೆ, ಬದುಕು ಒಂದೇ. ನಾವು ನಮ್ಮ ಭವಿಷ್ಯವನ್ನೇ ಕಟ್ಟಿಕೊಳ್ತೀವಿ.ಅಂತಾದ್ರಲ್ಲಿ ಎಕ್ಸಾಂ ಕಟ್ಟೋಕಾಗಲ್ವಾ?ಅಲ್ಲದೇ ನೀವು ಯಾರಿಗೂ ಕಮ್ಮಿ ಇಲ್ಲ ಎಂದು ಸ್ಥೈರ್ಯ ತುಂಬಿದ್ದಾರೆ. ಅದೇ ರೀತಿ, 'ಕವಲು ದಾರಿ' ಖ್ಯಾತಿಯ ನಟ ರಿಷಿ ಕೂಡ ಫೇಲಾದ ಹಾಗೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.