ETV Bharat / sports

ಟಿ20 ವಿಶ್ವಕಪ್ ಗೆಲುವಿಗೆ ರಿಷಭ್​ ಪಂತ್​ ಬುದ್ಧಿವಂತಿಕೆಯೂ ಕಾರಣ: ರೋಹಿತ್ ಶರ್ಮಾ - Rohit Reveals Pant Tactics

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ​ ರಿಷಭ್ ಪಂತ್​ ತೋರಿದ ಬುದ್ಧಿವಂತಿಕೆಯ ಬಗ್ಗೆ ರೋಹಿತ್​ ಶರ್ಮಾ, ಕಪಿಲ್ ಶರ್ಮಾ ಶೋದಲ್ಲಿ ಮಾತನಾಡಿದ್ದಾರೆ.

author img

By ETV Bharat Sports Team

Published : 2 hours ago

ರೋಹಿತ್​ ಶರ್ಮಾ ಮತ್ತು ರಿಷಭ್​ ಪಂತ್​
ರೋಹಿತ್​ ಶರ್ಮಾ ಮತ್ತು ರಿಷಭ್​ ಪಂತ್​ (AP)

ಹೈದರಾಬಾದ್​: 2024 ಟೀಂ​ ಇಂಡಿಯಾ ಪಾಲಿಗೆ ಅದೃಷ್ಟದ ವರ್ಷ. ಏಕೆಂದರೆ, ಅಮೆರಿಕ ಮತ್ತು ವೆಸ್ಟ್​ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಪಂದ್ಯದ ಕೊನೆಯಲ್ಲಿ ಅದ್ಬುತ ಪ್ರದರ್ಶನ ತೋರಿದ ರೋಹಿತ್ ಶರ್ಮಾ​ ಪಡೆ, ಅಂತಿಮವಾಗಿ 7 ರನ್​ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಇದರೊಂದಿಗೆ 17 ವರ್ಷಗಳ ನಂತರ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು.

ಇದೆಲ್ಲವೂ ನಡೆದು 3 ತಿಂಗಳುಗಳೇ ಕಳೆದವು. ಆದ್ರೆ ಇತ್ತೀಚೆಗೆ ರೋಹಿತ್​ ಶರ್ಮಾ ಅವರು ಕಾರ್ಯಕ್ರಮವೊಂದರಲ್ಲಿ ಫೈನಲ್​ ಪಂದ್ಯದಲ್ಲಿ ರಿಷಭ್​ ಪಂತ್​ ತೋರಿದ ಬುದ್ದಿವಂತಿಕೆ ಕೂಡ ಪಂದ್ಯದ ಗೆಲುವಿಗೆ ಕಾರಣ ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 30 ರನ್‌ಗಳು ಅಗತ್ಯವಿದ್ದಾಗ ವೇಗಿಗಳಾದ ಬುಮ್ರಾ, ಹಾರ್ದಿಕ್ ಮತ್ತು ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದ್ದರು. ಬುಮ್ರಾ ರನ್ ನೀಡುವುದನ್ನು ನಿರ್ಬಂಧಿಸಿದರೆ, ಹಾರ್ದಿಕ್ ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಆದರೆ, ಅವರ ಜೊತೆಗೆ ತಂಡದ ಯಶಸ್ಸಿಗೆ ಮತ್ತೊಂದು ಬಲವಾದ ಕಾರಣವಿದೆ ಎಂದು ಶರ್ಮಾ ಬಹಿರಂಗಪಡಿಸಿದ್ದಾರೆ. ಪಂದ್ಯದ ಮೇಲಿನ ಭರವಸೆಗಳು ಕ್ಷೀಣಿಸುತ್ತಿರುವಾಗ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರ ಬುದ್ಧಿವಂತಿಕೆ ಪಂದ್ಯದ ಗತಿ ಬದಲಿಸಿತು ಎಂದರು.

ಕ್ಲಾಸೆನ್ ಮತ್ತು ಮಿಲ್ಲರ್ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿ ಪಂದ್ಯ ಮುಗಿಸಲು ಮುಂದಾಗಿದ್ದರು. ಈ ವೇಳೆ ಎದುರಾಳಿ ತಂಡದ ಗೆಲುವಿಗೆ 24 ಎಸೆತಗಳಲ್ಲಿ 26 ರನ್ ಬೇಕಿತ್ತು. ನಾವು ತುಂಬಾ ಗೊಂದಲಕ್ಕೀಡಾಗಿದ್ದೆವು. ಫೀಲ್ಡಿಂಗ್​ ಸೆಟ್​ ಮಾಡಲು ಮತ್ತು ತಂತ್ರ ರೂಪಿಸಲು ನಮಗೆ ಸ್ವಲ್ಪ ಸಮಯದ ಅವಶ್ಯಕತೆ ಇತ್ತು. ಒಂದೆಡೆ ಮ್ಯಾಚ್​ ವೇಗದಿಂದ ಸಾಗುತ್ತಿತ್ತು. ಇಂತಹ ಸಮಯದಲ್ಲಿ ರಿಷಭ್​ ಪಂತ್​ ಬುದ್ದಿವಂತಿಕೆ ತೋರಿ ವಿರಾಮ ಸಿಗುವಂತೆ ಮಾಡಿದರು. ಅವರು ಮೊಣಕಾಲಿನ ಗಾಯವೆಂದು ಮೈದಾನದಲ್ಲಿ ಕುಳಿತರು. ಇದರಿಂದಾಗಿ ನಮಗೆ ನಾಲ್ಕೈದು ನಿಮಿಷ ಸಮಯ ಸಿಕ್ಕಿತು. ಆ ಸಮಯವನ್ನು ನಾವು ಚೆನ್ನಾಗಿ ಬಳಸಿಕೊಂಡು ಗೆಲುವಿಗೆ ತಂತ್ರ ರೂಪಿಸಿದೆವು.

ಆದರೆ ಪಂದ್ಯದ ಯಶಸ್ಸಿಗೆ ಇದೊಂದೇ ಕಾರಣ ಎಂದು ನಾನು ಹೇಳುತ್ತಿಲ್ಲ. ಆದರೆ ಖಂಡಿತವಾಗಿಯೂ ನಮ್ಮ ಗೆಲುವಿನಲ್ಲಿ ಅದೂ ಕೂಡ ಒಂದು ಎಂದು ಹಿಟ್‌ಮ್ಯಾನ್ ಬಹಿರಂಗಪಡಿಸಿದರು.

ಇದನ್ನೂ ಓದಿ: ಮೊದಲ ಟೆಸ್ಟ್​ನಲ್ಲಿ ಶೂನ್ಯಕ್ಕೆ ಔಟ್​, ನಂತರ ಮ್ಯಾಚ್​ನಲ್ಲಿ ಅತಿ ಹೆಚ್ಚು ರನ್ ​ಗಳಿಸಿ ವಿಶ್ವದಾಖಲೆ ನಿರ್ಮಿಸಿದ ಬ್ಯಾಟರ್​! - Cricketer Scored Most Runs in Test

ಹೈದರಾಬಾದ್​: 2024 ಟೀಂ​ ಇಂಡಿಯಾ ಪಾಲಿಗೆ ಅದೃಷ್ಟದ ವರ್ಷ. ಏಕೆಂದರೆ, ಅಮೆರಿಕ ಮತ್ತು ವೆಸ್ಟ್​ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಪಂದ್ಯದ ಕೊನೆಯಲ್ಲಿ ಅದ್ಬುತ ಪ್ರದರ್ಶನ ತೋರಿದ ರೋಹಿತ್ ಶರ್ಮಾ​ ಪಡೆ, ಅಂತಿಮವಾಗಿ 7 ರನ್​ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಇದರೊಂದಿಗೆ 17 ವರ್ಷಗಳ ನಂತರ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು.

ಇದೆಲ್ಲವೂ ನಡೆದು 3 ತಿಂಗಳುಗಳೇ ಕಳೆದವು. ಆದ್ರೆ ಇತ್ತೀಚೆಗೆ ರೋಹಿತ್​ ಶರ್ಮಾ ಅವರು ಕಾರ್ಯಕ್ರಮವೊಂದರಲ್ಲಿ ಫೈನಲ್​ ಪಂದ್ಯದಲ್ಲಿ ರಿಷಭ್​ ಪಂತ್​ ತೋರಿದ ಬುದ್ದಿವಂತಿಕೆ ಕೂಡ ಪಂದ್ಯದ ಗೆಲುವಿಗೆ ಕಾರಣ ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 30 ರನ್‌ಗಳು ಅಗತ್ಯವಿದ್ದಾಗ ವೇಗಿಗಳಾದ ಬುಮ್ರಾ, ಹಾರ್ದಿಕ್ ಮತ್ತು ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದ್ದರು. ಬುಮ್ರಾ ರನ್ ನೀಡುವುದನ್ನು ನಿರ್ಬಂಧಿಸಿದರೆ, ಹಾರ್ದಿಕ್ ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಆದರೆ, ಅವರ ಜೊತೆಗೆ ತಂಡದ ಯಶಸ್ಸಿಗೆ ಮತ್ತೊಂದು ಬಲವಾದ ಕಾರಣವಿದೆ ಎಂದು ಶರ್ಮಾ ಬಹಿರಂಗಪಡಿಸಿದ್ದಾರೆ. ಪಂದ್ಯದ ಮೇಲಿನ ಭರವಸೆಗಳು ಕ್ಷೀಣಿಸುತ್ತಿರುವಾಗ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರ ಬುದ್ಧಿವಂತಿಕೆ ಪಂದ್ಯದ ಗತಿ ಬದಲಿಸಿತು ಎಂದರು.

ಕ್ಲಾಸೆನ್ ಮತ್ತು ಮಿಲ್ಲರ್ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿ ಪಂದ್ಯ ಮುಗಿಸಲು ಮುಂದಾಗಿದ್ದರು. ಈ ವೇಳೆ ಎದುರಾಳಿ ತಂಡದ ಗೆಲುವಿಗೆ 24 ಎಸೆತಗಳಲ್ಲಿ 26 ರನ್ ಬೇಕಿತ್ತು. ನಾವು ತುಂಬಾ ಗೊಂದಲಕ್ಕೀಡಾಗಿದ್ದೆವು. ಫೀಲ್ಡಿಂಗ್​ ಸೆಟ್​ ಮಾಡಲು ಮತ್ತು ತಂತ್ರ ರೂಪಿಸಲು ನಮಗೆ ಸ್ವಲ್ಪ ಸಮಯದ ಅವಶ್ಯಕತೆ ಇತ್ತು. ಒಂದೆಡೆ ಮ್ಯಾಚ್​ ವೇಗದಿಂದ ಸಾಗುತ್ತಿತ್ತು. ಇಂತಹ ಸಮಯದಲ್ಲಿ ರಿಷಭ್​ ಪಂತ್​ ಬುದ್ದಿವಂತಿಕೆ ತೋರಿ ವಿರಾಮ ಸಿಗುವಂತೆ ಮಾಡಿದರು. ಅವರು ಮೊಣಕಾಲಿನ ಗಾಯವೆಂದು ಮೈದಾನದಲ್ಲಿ ಕುಳಿತರು. ಇದರಿಂದಾಗಿ ನಮಗೆ ನಾಲ್ಕೈದು ನಿಮಿಷ ಸಮಯ ಸಿಕ್ಕಿತು. ಆ ಸಮಯವನ್ನು ನಾವು ಚೆನ್ನಾಗಿ ಬಳಸಿಕೊಂಡು ಗೆಲುವಿಗೆ ತಂತ್ರ ರೂಪಿಸಿದೆವು.

ಆದರೆ ಪಂದ್ಯದ ಯಶಸ್ಸಿಗೆ ಇದೊಂದೇ ಕಾರಣ ಎಂದು ನಾನು ಹೇಳುತ್ತಿಲ್ಲ. ಆದರೆ ಖಂಡಿತವಾಗಿಯೂ ನಮ್ಮ ಗೆಲುವಿನಲ್ಲಿ ಅದೂ ಕೂಡ ಒಂದು ಎಂದು ಹಿಟ್‌ಮ್ಯಾನ್ ಬಹಿರಂಗಪಡಿಸಿದರು.

ಇದನ್ನೂ ಓದಿ: ಮೊದಲ ಟೆಸ್ಟ್​ನಲ್ಲಿ ಶೂನ್ಯಕ್ಕೆ ಔಟ್​, ನಂತರ ಮ್ಯಾಚ್​ನಲ್ಲಿ ಅತಿ ಹೆಚ್ಚು ರನ್ ​ಗಳಿಸಿ ವಿಶ್ವದಾಖಲೆ ನಿರ್ಮಿಸಿದ ಬ್ಯಾಟರ್​! - Cricketer Scored Most Runs in Test

ETV Bharat Logo

Copyright © 2024 Ushodaya Enterprises Pvt. Ltd., All Rights Reserved.