ಕರ್ನಾಟಕ

karnataka

ETV Bharat / bharat

ಹತ್ರಾಸ್ ಕಾಲ್ತುಳಿತದ ಸತ್ಸಂಗ ಸ್ಥಳ ಸ್ಮಶಾನವಾಗಿ ಪರಿವರ್ತನೆ: ಭದ್ರತಾ ಲೋಪವೇ ಅವಘಡಕ್ಕೆ ಕಾರಣವಾಯ್ತೇ? - Hathras Stampede

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಿಂದಾಗಿ ಸುಮಾರು 87 ಭಕ್ತರು ಮೃತಪಟ್ಟಿದ್ದಾರೆ.

By ETV Bharat Karnataka Team

Published : Jul 2, 2024, 8:45 PM IST

hathras-stampede
ಹತ್ರಾಸ್ ಕಾಲ್ತುಳಿತ (ETV Bharat)

ಹತ್ರಾಸ್ (ಉತ್ತರ ಪ್ರದೇಶ) : ಸಂತ ಭೋಲೆ ಬಾಬಾರ ಮಹಿಮೆ ಸರಾಗವಾಗಿ ನಡೆಯುತ್ತಿತ್ತು. ಬಾಬಾ ವೇದಿಕೆಯ ಮೇಲೆ ಕುಳಿತು ಭಕ್ತರಿಗೆ ಉಪದೇಶ ನೀಡುತ್ತಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಅಲ್ಲಿಗೆ ಆಗಮಿಸಿದ್ದರು. ಇದೇ ವೇಳೆ, ಸತ್ಸಂಗ ಸ್ಥಳದಿಂದ ಹೊರಬರುವ ಧಾವಂತದಲ್ಲಿ ಕಾಲ್ತುಳಿತ ಉಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಸ್ಥಳದಲ್ಲಿನ ಶಾಖ ಮತ್ತು ತೇವಾಂಶದಿಂದ ಬೇಸತ್ತ ಜನರು ಇದ್ದಕ್ಕಿದ್ದಂತೆ ಹೊರಾಂಗಣಕ್ಕೆ ಹೋಗಲು ಎದ್ದಿದ್ದಾರೆ. ನಿರ್ಗಮನ ದ್ವಾರ ಕಿರಿದಾಗಿದ್ದರಿಂದ ಅಲ್ಲಿ ಜಾಮ್ ಆಗಿದೆ. ಬಹಳಷ್ಟು ಜನರು ಒಂದೇ ಬಾರಿಗೆ ಹೊರಡಲು ಪ್ರಯತ್ನಿಸಿದ್ದಾರೆ. ಪರಿಣಾಮವಾಗಿ ಕಾಲ್ತುಳಿತ ಉಂಟಾಗಿದೆ. ಅಲ್ಲಿಂದ ಹೊರಬರಲು ಜನರು ಒಬ್ಬರ ನಂತರ ಒಬ್ಬರು ಪೈಪೋಟಿ ಆರಂಭಿಸಿದ್ದಾರೆ. ದಾರಿ ಕಂಡವರು ನಿರ್ಗಮನ ದ್ವಾರದ ಬಳಿಗೆ ಹೋಗಿದ್ದಾರೆ. ಅಲ್ಲಿ ಬಿದ್ದವರಿಗೆ ಮತ್ತೆ ಮೇಲೇಳಲಾಗಿಲ್ಲ. ಈ ಅವ್ಯವಸ್ಥೆಯಲ್ಲಿ 87 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಕಾಲ್ತುಳಿತ ಎಷ್ಟು ಭಯಾನಕವಾಗಿತ್ತು ಎಂದರೆ ಸಾವಿನ ಸಂಖ್ಯೆ 100ಕ್ಕಿಂತ ಹೆಚ್ಚಿರಬಹುದು. ಏಕೆಂದರೆ, ನೂರಾರು ಜನರು ಸತ್ಸಂಗದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮಹಿಳಾ ಭಕ್ತರ ಸಂಖ್ಯೆಯೇ ಅಧಿಕವಾಗಿತ್ತು. ಗುಂಪಿನಲ್ಲಿ ಮಕ್ಕಳು ಮತ್ತು ವೃದ್ಧರೂ ಇದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರಿದ್ದಾರೆ. ಮಕ್ಕಳು, ವೃದ್ಧರೂ ಪ್ರಾಣ ಕಳೆದುಕೊಂಡಿದ್ದಾರೆ.

ಸತ್ಸಂಗ ಸ್ಥಳದ ಗೇಟಿನಲ್ಲೇ ಚೆಲ್ಲಾಪಿಲ್ಲಿಯಾಗಿದ್ದ ಮೃತ ದೇಹಗಳು : ಸತ್ಸಂಗ ವೇದಿಕೆಯ ಗೇಟಿನ ಹೊರಗೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಉಸಿರಾಡುತ್ತಿದ್ದ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ, ಸಾಕಷ್ಟು ಸಂತ್ರಸ್ತರು ಅಲ್ಲಿಗೆ ತಲುಪಿದ್ದರಿಂದ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಬಹುತೇಕರು ಆಸ್ಪತ್ರೆ ತಲುಪುವಷ್ಟರಲ್ಲಿ ಗೇಟಿನಲ್ಲೇ ಸಾವನ್ನಪ್ಪಿದ್ದಾರೆ.

ಆಸ್ಪತ್ರೆ ಗೇಟ್‌ನಲ್ಲಿ ಪ್ರಾಣ ಬಿಟ್ಟ ಭಕ್ತರು : ಜನರಿಗೆ ಸ್ಟ್ರೆಚರ್‌ಗಳು ಸಹ ಸಿಕ್ಕಿಲ್ಲ. ದೇಹವು ಹೊರಗೆ ನೆಲದ ಮೇಲೆ ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿವೆ. ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಆದರೆ, ಈ ವೇಳೆ ಅವರಿಗೆ ಯಾರೂ ಹೆಗಲು ಕೊಡಲು ಬಂದಿಲ್ಲ. ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದೇ ಈ ಕಾಲ್ತುಳಿತಕ್ಕೆ ಕಾರಣ ಎಂಬುದಾಗಿ ತಿಳಿದು ಬಂದಿದೆ.

ಸೂಕ್ತ ಭದ್ರತಾ ವ್ಯವಸ್ಥೆ ಇರಲಿಲ್ಲ :ಕಾಲ್ತುಳಿತದಲ್ಲಿ ಆಡಳಿತದ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸೂಕ್ತ ಭದ್ರತಾ ವ್ಯವಸ್ಥೆ ಇರಲಿಲ್ಲ. ಜಾಗದ ಸಾಮರ್ಥ್ಯಕ್ಕಿಂತ ಹೆಚ್ಚು ಭಕ್ತರು ಜಮಾಯಿಸಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸತ್ಸಂಗ ಮುಗಿದ ನಂತರ, ಹೊರಹೋಗುವ ಆತುರದಲ್ಲಿ ನೂಕುನುಗ್ಗಲು ಉಂಟಾಗಿದೆ. ಸ್ವಲ್ಪ ಸಮಯದ ನಂತರ ಪರಿಸ್ಥಿತಿ ಹದಗೆಟ್ಟಿದೆ. ನಂತರ ಜನರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಆಡಳಿತ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದ ಕುಟುಂಬಸ್ಥರು: ಕಾಲ್ತುಳಿತದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಬಹಳ ದಿನಗಳಿಂದ ಯಾವುದೇ ಪರಿಹಾರ ಕಾರ್ಯ ಆರಂಭವಾಗಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ :ಭಾರತದಲ್ಲಿನ ದೇವಾಲಯಗಳಲ್ಲಿ ನಡೆದ ಪ್ರಮುಖ ಕಾಲ್ತುಳಿತ ದುರಂತಗಳ ಒಂದು ನೋಟ - Stampedes

ABOUT THE AUTHOR

...view details