thumbnail

By

Published : Jan 23, 2021, 7:43 AM IST

ETV Bharat / Videos

ಹಾಡಹಗಲೇ ಮುತ್ತೂಟ್ ಫೈನಾನ್ಸ್ ದರೋಡೆ: ಸಿಬ್ಬಂದಿ ಕಟ್ಟಿಹಾಕಿ 7 ಕೋಟಿ ನಗದು, ಚಿನ್ನಾಭರಣ ಲೂಟಿ!

ಆನೇಕಲ್/ಹೊಸೂರು: ಹಾಡಹಗಲೇ ಮುತ್ತೂಟ್ ಫೈನಾನ್ಸ್​​​ನಲ್ಲಿ ದರೋಡೆ ನಡೆದಿದ್ದು, 7 ಕೋಟಿ ರೂ. ನಗದು ಹಾಗು ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ನಿನ್ನೆ ಬೆಳಗ್ಗೆ ಸುಮಾರು 9 ಗಂಟೆಗೆ‌ ಹೊಸೂರಿನ ಮುತ್ತೂಟ್ ಫೈನಾನ್ಸ್ ಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್​​​, ಮ್ಯಾನೇಜರ್ ಹಾಗು ಸಿಬ್ಬಂದಿಯನ್ನು ಕಟ್ಟಿಹಾಕಿ ನಗದು ಮತ್ತು ಚಿನ್ನ ದೋಚಿ ಪರಾರಾಗಿದ್ದಾರೆ. 6 ಮಂದಿ ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ದರೋಡೆಯ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ. ಅಲ್ಲದೇ ಮುತ್ತೂಟ್ ಫೈನಾನ್ಸ್​​​ನ ಓರ್ವ ಮ್ಯಾನೇಜರ್​​ ಅವರ ಫೋನ್ ಆನೇಕಲ್ ಭಾಗದ ಭಕ್ತಿಪುರದಲ್ಲಿ ಸಿಕ್ಕಿದ್ದು, ದರೋಡೆಕೋರರು ಭಕ್ತಿಪುರದ ಬಳಿ ಮೊಬೈಲ್ ಮತ್ತು ಕೆಲ ಖಾಲಿ ಬ್ಯಾಗ್ ಎಸೆದು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಮ್ಯಾನೇಜರ್​ನ ಜಿಪಿಎಸ್ ಲೊಕೇಷನ್ ಪತ್ತೆ ಮಾಡಿದಾಗ ಭಕ್ತಿಪುರದ ಕಡೆ ಲೊಕೇಷನ್ ಸಿಕ್ಕಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ‌ ನೀಡಿ, ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.