ಕನ್ನಡ ರಂಗಭೂಮಿಯನ್ನ ಮತ್ತಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ : ಬಿ ಸುರೇಶ್
ಬೆಂಗಳೂರು : ರಂಗಭೂಮಿ ಚಟುವಟಿಕೆಗಳಲ್ಲಿ ನಿರತರಾಗಿರುವ ಪ್ರತಿಯೊಬ್ಬರಿಗೂ ಇಂದು ಅವಿಸ್ಮರಣೀಯ ದಿನ. ಯಾಕೆಂದರೆ, ಮಾರ್ಚ್ 27 ವಿಶ್ವ ರಂಗಭೂಮಿ ದಿನ ಎಂದು ಇಡೀ ದೇಶದ ಎಲ್ಲಾ ಕಲಾವಿದರೂ ಆಚರಣೆ ಮಾಡ್ತಾರೆ. ಆದರೆ, ಈ ವರ್ಷದ ವಿಶ್ವ ರಂಗಭೂಮಿ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್ನಿಂದಾಗಿ ಎಲ್ಲಾ ರಂಗಭೂಮಿ ಕಲಾವಿದರೂ ವಿಡಿಯೋ ಸಂದೇಶದ ಮೂಲಕ ವಿಶ್ವ ರಂಗಭೂಮಿ ದಿನ ಆಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ರಂಗಭೂಮಿ ಕಲಾವಿದ, ನಿರ್ದೇಶಕ, ನಿರ್ಮಾಪಕ ಬಿ ಸುರೇಶ್, ವಿಶ್ವ ರಂಗಭೂಮಿಯ ಎಲ್ಲಾ ಕಲಾವಿದರಿಗೆ ಶುಭ ಹಾರೈಯಿಸಿದ್ದಾರೆ.