ಕೊರೊನಾ ಸಂಕಷ್ಟ ಕಳೆಯಲೆಂದು ಪ್ರಾರ್ಥಿಸಿ ಕೊಪ್ಪಳದಲ್ಲಿ ಗಣಪತಿ ಹೋಮ
ಕೊಪ್ಪಳ: ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ಸಂಕಷ್ಟ ಕಳೆದು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ಗಣಪತಿ ಹೋಮ ನಡೆಸಲಾಯಿತು. ನಗರದ ವಾರಕಾರ ಓಣಿಯಲ್ಲಿನ ಶ್ರೀ ವಿಜಯ ವಿನಾಯಕ ಯುವಕ ಮಂಡಳಿ ವತಿಯಿಂದ ಗಣಪತಿ ಹೋಮವನ್ನು ನೇರವೆರಿಸಲಾಯಿತು. ಹೋಮದ ಬಳಿಕ ಗಣೇಶ ಮೂರ್ತಿ ಪ್ರತಿಸ್ಥಾಪಿಸಿ ಪೂಜಿಸಲಾಯಿತು.