ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಭರ್ಜರಿ ರೋಡ್ ಶೋ
ಕಾರವಾರ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಇವತ್ತು ಕಾರವಾರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕರಾವಳಿಯಲ್ಲಿ ಯುವಕರಿಗೆ ಉದ್ಯೋಗ ನೀಡದ ಅನಂತಕುಮಾರ ಹೆಗಡೆ ಕೈಗೆ ಕತ್ತಿ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಕೇಸರಿ ಬಾವುಟ ಹಿಡಿಯುವುದು ಹಾಗೂ ನಾಮ ಹಾಕಿಕೊಳ್ಳುವುದೇ ಧರ್ಮದ ರಕ್ಷಣೆಯಲ್ಲ. ಹಿಂದೂ ಧರ್ಮದಲ್ಲೇ ಜಾತಿ ಪದ್ಧತಿ ಇದೆ. ಧರ್ಮದ ರಕ್ಷಣೆ ಎಂದು ಹೇಳುವವರು ಕಾಶಿಯಲ್ಲಿ ಹಿಂದೂಗಳ ಸ್ವಾಮೀಜಿ ಸನ್ಯಾಸಿಗಳನ್ನು ಸೇರಿಸಿ ಜಾತಿ ಪದ್ಧತಿ ನಿರ್ಮೂಲನೆ ಮಾಡಲಿ ಎಂದು ಸವಾಲೆಸೆದರು.