thumbnail

ವಿಡಿಯೋ: ತುಂಬಿ ಹರಿಯುವ ನದಿಯಲ್ಲಿ ಶವ ಹೊತ್ತು ಸಾಗಿ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು

By

Published : Dec 3, 2021, 8:57 AM IST

ತಮಿಳುನಾಡು: ಕಳೆದ ತಿಂಗಳಿನಿಂದ ತಮಿಳುನಾಡಿನಲ್ಲಿ ವರುಣಾರ್ಭಟ ಹೆಚ್ಚಾಗಿದೆ. ಮಳೆ ಅವಾಂತರಕ್ಕೆ ಪ್ರವಾಹ ಸೃಷ್ಟಿಯಾಗಿ ಅನೇಕ ಸೇತುವೆಗಳು ಕೊಚ್ಚಿ ಹೋಗಿವೆ. ಇಲ್ಲಿನ ವಿರುಧುನಗರ ಜಿಲ್ಲೆಯ ಉಳಕ್ಕುಡಿ ಗ್ರಾಮದಲ್ಲಿ ಹರಿಯುವ ಕಿರುತುಮಲ್ ನದಿಗೆ ಇದುವರೆಗೆ ಸೇತುವೆ ನಿರ್ಮಿಸಿಲ್ಲ. ಡಿಸೆಂಬರ್​ 1ರಂದು ಮಳೆ ಹೆಚ್ಚಾಗಿದ್ದು ನದಿ ತುಂಬಿ ಹರಿಯುತ್ತಿತ್ತು. ಇಂತಹ ಸಮಯದಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶವ ಹೊತ್ತುಕೊಂಡು ನದಿ ದಾಟಿ ಅಂತ್ಯಕ್ರಿಯೆ ನಡೆಸಿದರು. ಅಂತ್ಯಕ್ರಿಯೆ ನಡೆಸಿದ ಬಳಿಕ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್​ ಇಲಾಖೆ ಮತ್ತು ಜಿಲ್ಲಾಡಳಿತ ಪರಿಸ್ಥಿತಿ ಆಲಿಸಿ ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಿಸುವ ಭರವಸೆ ಕೊಟ್ಟರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.