ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಹೊಸಬರ ಆಗಮನ ಮುಂದುವರೆದಿದೆ. ಈ ಪೈಕಿ ಕೆಲವರನ್ನಷ್ಟೇ ಚಿತ್ರರಂಗ ಕೈ ಹಿಡಿಯುತ್ತದೆ. ಇಲ್ಲಿ ಪ್ರತಿಭೆ, ಶ್ರಮ, ಏಕಾಗ್ರತೆಯ ಜೊತೆಗೆ ಅದೃಷ್ಟವೂ ಬೇಕು. ಹೀಗೆ ಹೊಸಬರ ಶ್ರಮ ಅಡಗಿರುವ ಹೊಸ ಚಿತ್ರವೇ 'ಬ್ಯಾಕ್ ಬೆಂಚರ್ಸ್'. ಬಣ್ಣಗಳ ಹಬ್ಬದ ಸಂದರ್ಭದಲ್ಲಿ ಬಣ್ಣದ ಹಾಡೊಂದು ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ.
ಬಿ.ಆರ್.ರಾಜಶೇಖರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಯುವ ನಟ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಮಾನ್ಯ ಗೌಡ, ಕುಂಕುಮ್, ಅನುಷಾ ಸುರೇಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಹೋಳಿ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿನಿಮಾದಿಂದ ಸುಮಧುರ ಹಾಡೊಂದು ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ. ಹೃದಯಶಿವ ಬರೆದಿರುವ ಈ ಹಾಡು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಕಂಠಸಿರಿಯಲ್ಲಿ ಮೂಡಿಬಂದಿದೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ:ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಂಗನಾ ಹಳೇ ವಿಡಿಯೋ ವೈರಲ್ - Kangana Ranaut