ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಬಗೆಯ ಸಿನಿಮಾಗಳು ಸೆಟ್ಟೇರುತ್ತವೆ. ಟ್ರೇಲರ್, ಟೀಸರ್, ಗ್ಲಿಂಪ್ಸ್ ಬಿಡುಗಡೆ ಆಗೋದು ಹೊಸತೇನಲ್ಲ. ಆದ್ರೆ ಬಿಡುಗಡೆ ಆದ ಕೆಲವೇ ಕೆಲವು ಸಿನಿಮಾಗಳ ಟೀಸರ್, ಟ್ರೇಲರ್ಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶ ಕಾಣುತ್ತವೆ. ಅದರಂತೆ ಇದೀಗ ಸಿನಿಪ್ರಿಯರ ಗಮನ ಸೆಳೆದಿರುವ ಟೀಸರ್ ''ವೃತ್ತ''. ವೃತ್ತ ಅಂದ ತಕ್ಷಣ ಒಂದು ಸರ್ಕಲ್ನಲ್ಲಿ ನಡೆಯೋ ಸ್ಟೋರಿ ಇರಬೇಕು ಅಂತಾ ಅನಿಸೋದು ಸಹಜ. ಆದ್ರೆ ಈ ವೃತ್ತ ಸಿನಿಮಾದ ಕಾನ್ಸೆಪ್ಟ್ ಬೇರೇನೆ ಇದೆ.
ಸಿನಿಮಾ ಕಂಪ್ಲೀಟ್ ಮಾಡಿ ಟೀಸರ್ ಬಿಡುಗಡೆ ಮಾಡಿರೋ ವೃತ್ತ ತಂಡಕ್ಕೆ ನಟ ನಿನಾಸಂ ಸತೀಶ್ ಅವರ ಸಾಥ್ ಸಿಕ್ಕಿದೆ. ಸಿನಿಮಾ ಟೀಸರ್, ಟ್ರೇಲರ್ ನೋಡಿ ಚಿತ್ರವನ್ನು ತಮ್ಮದೇ ಬ್ಯಾನರ್ ಅಡಿಯಲ್ಲಿ ಪ್ರೆಸೆಂಟ್ ಮಾಡೋದಕ್ಕೆ ಸತೀಶ್ ನಿರ್ಧಾರ ಮಾಡಿದ್ದಾರೆ. ಟೀಸರ್ ಲಾಂಚ್ಗೆ ಬಂದು ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.
ನಟ ನೀನಾಸಂ ಸತೀಶ್ ಮಾತನಾಡಿ, ಹೊಸ ತಂಡವಾದ್ರು ಸಹ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡೆ ಬಂದಿದ್ದಾರೆ ಅನ್ನೋದು ಟೀಸರ್ ನೋಡಿದ್ರೆ ತಿಳಿಯುತ್ತದೆ. ಹೊಸಬರ ಸಿನಿಮಾ ಅನ್ನೋ ಕಾರಣಕ್ಕೆ ಬಂದಿಲ್ಲ. ಸಿನಿಮಾ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಸಪೋರ್ಟ್ ಮಾಡುತ್ತಿದ್ದೇನೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಟ್ರೇಲರ್ ಲಾಂಚ್ ಮಾಡಿ ಇದೇ ವರ್ಷಾಂತ್ಯದಲ್ಲಿ ತೆರೆಗೆ ಬರೋ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದ ತಾರಾಗಣದಲ್ಲಿ ನಾಯಕನಾಗಿ ಮಾಹಿರ್ ಮೊಹಿದ್ದೀನ್, ಚೈತ್ರಾ ಜೆ ಆಚಾರ್, ಹತಿಣಿ ಸುಂದರ ರಾಜನ್ ಅಭಿನಯಿಸಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ತಿರೋ ಮಾಹಿರ್ ಸಾಕಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಮಾಹಿರ್ ಅಭಿನಯ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಅದ್ಬುತ ಕಲಾವಿದನಾಗಿ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಎಲ್ಲಾ ಭರವಸೆಗಳಿವೆ.
ನಂತರ ಮಾತನಾಡಿದ ನಾಯಕ ಮಾಹಿರ್, ನಟನೆ ನನ್ನ ಬಹುದಿನಗಳ ಕನಸು. ನಾಟಕಗಳ ಮೂಲಕ ನನಸು ಮಾಡಿಕೊಳ್ಳುತ್ತಿದ್ದೆ. ಇದೀಗ ವೃತ್ತ ಸಿನಿಮಾ ಮೂಲಕ ದೊಡ್ಡ ಪರದೆಗೆ ಬರುತ್ತಿರೋದು ಮತ್ತಷ್ಟು ಖುಷಿಕೊಟ್ಟಿದೆ ಎಂದರು.
ನಿರ್ದೇಶಕ ಲಿಖಿತ್ ಮಾತನಾಡಿ, ಹೊಸ ಸಿನಿಮಾಗೆ ಸತೀಶ್ ಅವರ ಸಪೋರ್ಟ್ ಸಿಕ್ಕಿರೋದು ಖುಷಿ ತಂದಿದೆ. ಕಿರು ಚಿತ್ರಗಳನ್ನು ಮಾಡುತ್ತಿದ್ದ ತಂಡವಿಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿಗಿದ್ದೇವೆ ಎಂದರು.
ಇದನ್ನೂ ಓದಿ: ''ನನ್ನ ಮೊದಲ ಅಡ್ವೆಂಚರ್ ಕಥೆಯ ಸಿನಿಮಾವಿದು'': ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ - Paru Parvathy movie
ವೃತ್ತ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಲಿಖಿತ್ ಕುಮಾರ್ ಎಸ್ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಕಾಲಿಡುತ್ತಿದ್ದಾರೆ. ಚಿತ್ರವನ್ನು ಲಕ್ಷ್ಯ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಟಿ ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ವಿಶೇಷ ಅಂದ್ರೆ ನಾಯಕ ಒಬ್ಬನ ಸುತ್ತಲೇ ಕಥೆ ಕೇಂದ್ರೀಕೃತವಾಗಿರುತ್ತದೆ. ಚಿತ್ರಕ್ಕೆ ಸಿಂಕ್ರೋನೈಸ್ ಮಾಡಿದ ಧ್ವನಿಯನ್ನು ಬಳಸಲಾಗಿದೆ. ಸಿನಿಮಾಗೆ ಯೋಗೀಶ್ ಗೌಡ ಚಿತ್ರಕಥೆ ಬರೆದಿದ್ದು, ಸುರೇಶ್ ಆರ್ಮುಗಂ ಸಂಕಲನ, ಶಂಕರ್ ರಾಮನ್ ಅವರ ಸಂಭಾಷಣೆ, ಗೌತಮ್ ಕೃಷ್ಣ ಅವರ ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್ ಎಸ್ ಅವರ ಸಂಗೀತ ಇದೆ. ಬಹುತೇಕ ಹೊಸಬರೇ ಕೂಡಿ ಮಾಡಿರೋ ಚಿತ್ರ ಇದಾಗಿದ್ದು, ಟೆಕ್ನಿಕಲಿ ಸ್ಟ್ರಾಂಗ್ ಆಗಿ ಮೂಡಿ ಬರುತ್ತಿರೋದು ವಿಶೇಷ.