ಕರ್ನಾಟಕ

karnataka

ಎಲ್‌ಎಸಿ ಬಳಿ ಹಠಾತ್ ಪ್ರವಾಹ, ಟಿ - 72 ಟ್ಯಾಂಕ್ ಅಪಘಾತ: ಐವರು ಸೈನಿಕರ ಸಾವು - INDIAN ARMY LADAKH

By ETV Bharat Karnataka Team

Published : Jun 29, 2024, 11:59 AM IST

ಇಂದು (ಶನಿವಾರ) ಬೆಳಗ್ಗೆ ನಡೆದ ಟಿ-72 ಟ್ಯಾಂಕ್ ಅಪಘಾತದಲ್ಲಿ ಐವರು ಸೈನಿಕರು ಸಾವನ್ನಪ್ಪಿರುವ ಘಟನೆ ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದ ಮಂದಿರ್ ಮೋರ್‌ನಲ್ಲಿರುವ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ಸಂಭವಿಸಿದೆ.

SOLDIERS KILLED LADAKH ACCIDENT  INDIAN ARMY  ARMY SOLDIERS TANK ACCIDENT  INDIAN ARMY LADAKH
ಎಲ್‌ಎಸಿ ಬಳಿ ಹಠಾತ್ ಪ್ರವಾಹ, ಟಿ-72 ಟ್ಯಾಂಕ್ ಅಪಘಾತ: ಐವರು ಸೈನಿಕರು ಸಾವು (ANI)

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಭಾರತೀಯ ಸೇನೆಯ ಯೋಧರು ದೊಡ್ಡ ಅಪಘಾತಕ್ಕೀಡಾಗಿದ್ದಾರೆ. ಲಡಾಖ್ ಪ್ರದೇಶದ ದೌಲತ್ ಬೇಗ್ ಓಲ್ಡಿಯಲ್ಲಿರುವ ಮಂದಿರ ಮೋರ್‌ನಲ್ಲಿನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ - ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಅವರ ಟಿ-72 ಟ್ಯಾಂಕ್ ಅಪಘಾತಕ್ಕೀಡಾಗಿ ಇಂದು (ಶನಿವಾರ) ಬೆಳಗ್ಗೆ ಕಿರಿಯ ಆಯೋಗದ ಅಧಿಕಾರಿ (ಜೆಸಿಒ) ಸೇರಿದಂತೆ ಐವರು ಯೋಧರು ಮೃತಪಟ್ಟಿದ್ದಾರೆ.

ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಸೇನಾ ಯೋಧರು ನದಿಯನ್ನು ಟ್ಯಾಂಕ್ ದಾಟುವ ಅಭ್ಯಾಸ ನಡೆಸುತ್ತಿದ್ದರು. ಈ ಸಮಯದಲ್ಲಿ, ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಯಿತು. ಇದರಿಂದಾಗಿ ಐವರು ಸೇನಾ ಯೋಧರು ಕೊಚ್ಚಿಹೋಗಿದ್ದಾರೆ. ದೌಲತ್ ಬೇಗ್ ಓಲ್ಡಿ ಪ್ರದೇಶವು ಕಾರಕೋರಂ ಶ್ರೇಣಿಯಲ್ಲಿದ್ದು, ಇಲ್ಲಿ ಸೇನಾ ನೆಲೆ ಇದೆ.

ಲಡಾಖ್‌ನ ಎಲ್‌ಎಸಿ ಬಳಿ ಹಠಾತ್ ಪ್ರವಾಹದಲ್ಲಿ ಐವರು ಸೇನಾ ಯೋಧರು ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನಾ ಟ್ಯಾಂಕ್ ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿದ್ದರಿಂದ ಸೈನಿಕರು ಕೊಚ್ಚಿ ಹೋಗಿದ್ದಾರೆ.

ಸೇನಾ ಅಧಿಕಾರಿಗಳ ಹೇಳಿಕೆ:ಸೇನಾ ಅಧಿಕಾರಿಗಳ ಪ್ರಕಾರ, ನದಿಯನ್ನು ಟ್ಯಾಂಕ್ ದಾಟುವ ಅಭ್ಯಾಸ ನಡೆಸುತ್ತಿತ್ತು. ಅಂದ್ರೆ ಇಂದು ಬೆಳಗ್ಗೆ 3 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ನದಿ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ಈ ಅವಘಡ ಸಂಭವಿಸಿದೆ. ಎಲ್ಲ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೌಲತ್ ಬೇಗ್ ಓಲ್ಡಿಯಲ್ಲಿ ಅಪಘಾತಕ್ಕೀಡಾದ ಟ್ಯಾಂಕ್ ಭಾರತೀಯ ಸೇನೆಯ T-72 ಟ್ಯಾಂಕ್ ಆಗಿತ್ತು. ಭಾರತದಲ್ಲಿ 24,00 ಟಿ-72 ಟ್ಯಾಂಕ್‌ಗಳಿವೆ. ಭಾರತೀಯ ಸೇನೆಯು ಈ ಟ್ಯಾಂಕ್‌ಗಳನ್ನು ಬಹಳ ಹಿಂದಿನಿಂದಲೂ ಬಳಸುತ್ತಿದೆ. ಅಪಘಾತದ ಸಮಯದಲ್ಲಿ ಇತರ ಟ್ಯಾಂಕ್‌ಗಳು ಸಹ ಅಲ್ಲಿದ್ದವು.

ಇದನ್ನೂ ಓದಿ:ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಕಾರುಗಳ ಮಧ್ಯೆ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವು - 7 Died in horrific road accident

ABOUT THE AUTHOR

...view details