ಕರ್ನಾಟಕ

karnataka

ಸಾಗರ: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

By

Published : Apr 29, 2021, 8:20 AM IST

ವ್ಯಕ್ತಿಯೊಬ್ಬರು ಸಾಗರ ಆಸ್ಪತ್ರೆ ಆವರಣದಲ್ಲಿರುವ ಬಾವಿಗೆ ಬಿದ್ದಿದ್ದು ರಕ್ಷಣೆ ಮಾಡಲಾಗಿದೆ.

protection-of-a-person-who-accidentally-fell-into-a-well
ರಕ್ಷಣೆ

ಶಿವಮೊಗ್ಗ:ಸಾಗರ ಆಸ್ಪತ್ರೆ ಆವರಣದಲ್ಲಿರುವಬಾವಿಗೆಆಕಸ್ಮಿಕವಾಗಿ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿ‌ಶಾಮಕ ದಳದವರು ರಕ್ಷಣೆ ಮಾಡಿದರು.

ಶಿರಾಳಕೊಪ್ಪದ ಆನಂದ(35) ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಈತ ಸಾಗರ ಆಸ್ಪತ್ರೆ ಆವರಣದಲ್ಲಿರುವಬಾವಿಗೆ ಬಿದ್ದಿದ್ದಾನೆ. ಇಲ್ಲಿನ ಸಿಬ್ಬಂದಿ ರವಿ ಎಂಬಾತ ಬಾವಿ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಆನಂದ ರಕ್ಷಣೆಗಾಗಿ ಕಿರುಚಿದ್ದಾನೆ. ಈ ವೇಳೆ ಬಾವಿಗೆ ಇಣುಕಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ವ್ಯಕ್ತಿಯ ರಕ್ಷಣೆ

ಕೂಡಲೇ ರವಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಬಾವಿಯಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details