ETV Bharat / state

ಡಿಕೆಶಿ ಮಹಾನಾಯಕ ಅಲ್ಲ, ಸಿಡಿ ಶಿವು: ರಮೇಶ್​ ಜಾರಕಿಹೊಳಿ - Ramesh jarakoholi sarcastic on dks

author img

By ETV Bharat Karnataka Team

Published : Jul 28, 2024, 11:03 PM IST

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಕುರಿತು ಮಾತನಾಡಿದ್ದಾರೆ. ಅವರು ಮಹಾನಾಯಕ ಅಲ್ಲ, ಸಿಡಿ ಶಿವು ಎಂದಿದ್ದಾರೆ.

ramesh-jarakoholi
ಮಾಜಿ ಸಚಿವ ರಮೇಶ್​ ಜಾರಕಿಹೊಳಿ (ETV Bharat)
ಮಾಜಿ ಸಚಿವ ರಮೇಶ್​ ಜಾರಕಿಹೊಳಿ (ETV Bharat)

ಬೆಳಗಾವಿ : ''ಡಿ ಕೆ ಶಿವಕುಮಾರ್ ಮಹಾನಾಯಕ ಅಲ್ಲ, ಆತ ಸಿಡಿ ಶಿವು. ಮಹಾನಾಯಕ ಎಂದರೆ ಅಂಬೇಡ್ಕರ್‌ಗೆ ಅವಮಾನ ಆಗುತ್ತದೆ. ಹೀಗಾಗಿ ನಾನು ಮತ್ತು ಹೆಚ್‌ಡಿಕೆ ಸೇರಿ ದೆಹಲಿಯಲ್ಲಿ ಡಿ ಕೆ ಶಿವಕುಮಾರ್​ಗೆ ಸಿಡಿ ಶಿವು ಎಂದು ಮರು ನಾಮಕರಣ ಮಾಡಿದ್ದೇವೆ'' ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​ನ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುವುದು ಮತ್ತು ಕೆಳಗಿಳಿಯುವುದು ಅವರ ಆಂತರಿಕ ವಿಷಯ. ಆದರೆ, ಕಾಂಗ್ರೆಸ್ ಸರ್ಕಾರ ಬರಲು, ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ‌ ಮೂಲ ಕಾರಣ. ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ನನ್ನ ಪಾತ್ರವೂ ಇದೆ ಎನ್ನುತ್ತಿದ್ದಾರೆ ಎನ್ನುವ ಮೂಲಕ ಡಿಸಿಎಂ ಡಿ. ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗುಡುಗಿದ ರಮೇಶ್ ಜಾರಕಿಹೊಳಿ, ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಕಾಂಗ್ರೆಸ್ ಪಕ್ಷದ ಅಧೋಗತಿ ಆರಂಭ ಎಂದು ಭವಿಷ್ಯ ನುಡಿದರು.

ಮುಡಾ ಹಗರಣ ಖಂಡಿಸಿ ಬಿಜೆಪಿ ಮೈಸೂರು ಚಲೋ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಮುಡಾಗಿಂತಲೂ ದೊಡ್ಡದು ವಾಲ್ಮೀಕಿ ನಿಗಮದ ಹಗರಣ. ಅದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದ್ದಾರೆ. ಹಾಗಾಗಿ, ಬಳ್ಳಾರಿಗೆ ಪಾದಯಾತ್ರೆ ಮಾಡೋದು ಒಳ್ಳೆಯದು. ಆ ಪಾದಯಾತ್ರೆ ಮೈಸೂರಿಗೆ ಸೀಮಿತ ಸರಿಯಲ್ಲ. ರಾಜ್ಯದಲ್ಲಿ ಲಿಂಗಾಯತ, ಮುಸ್ಲಿಂ, ಎಸ್ಸಿ ಸಮುದಾಯದ ನಂತರ ವಾಲ್ಮೀಕಿ ಅತೀ ದೊಡ್ಡ ಸಮುದಾಯ. ಆ ಜನಾಂಗಕ್ಕೆ ಮೋಸ ಮಾಡಿರುವ ಸರ್ಕಾರದ ವಿರುದ್ಧ ಕೂಡಲಸಂಗಮ ಟು ಬಳ್ಳಾರಿ‌ ಪಾದಯಾತ್ರೆಗೆ ದಿಲ್ಲಿ ನಾಯಕರ ಬಳಿ ಅನುಮತಿ ಕೇಳಿದ್ದೇನೆ. ನಾನು ಮತ್ತು ಯತ್ನಾಳ್ ಸೇರಿ ಕೆಲ ಶಾಸಕರು ಈ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದಾರೆ. ಈ ಕಾರಣಕ್ಕೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಾಲ್ಕು ಕಾಳಜಿ ಕೇಂದ್ರ ತೆರೆದು, ಸಂತ್ರಸ್ತರ ಕಾಳಜಿ ಮಾಡಲಾಗುತ್ತದೆ. ಒಳ್ಳೆಯ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿಗಳ ಹೂಳೆತ್ತುವ ಮತ್ತು ಒತ್ತುವರಿ ಸರ್ವೇ ಮಾಡಬೇಕು. ನಾನು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಈಗಿನ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದರು.

ಸಪ್ತನದಿಗಳ ಉಗಮ ಸ್ಥಾನದಲ್ಲಿ ಮಳೆ ಆಗುತ್ತಿದೆ. ಹೀಗಾಗಿ ಪ್ರವಾಹ ನಿಯಂತ್ರಣಕ್ಕೆ ತಾಲೂಕಾಡಳಿತ ಸಜ್ಜುಗೊಂಡಿದೆ‌. ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಸಿ ಮಹ್ಮದ್ ರೋಷನ್ ಭೇಟಿ ನೀಡಲಿದ್ದಾರೆ. ಸಂತ್ರಸ್ತರಿಗೆ ಊಟ, ಔಷಧಿ, ಜಾನುವಾರುಗಳಿಗೆ ಮೇವು ಎಲ್ಲವನ್ನೂ ಕೊಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡುತ್ತಿದ್ದೆವು. ಈಗಿನ ಸರ್ಕಾರ ಪರಿಹಾರ ನಿಲ್ಲಿಸಿದೆ. ನಾನು ಪ್ರತಿಪಕ್ಷ ಸದಸ್ಯನಾಗಿ ಸರ್ಕಾರದ ಬಗ್ಗೆ ಟೀಕೆ ಮಾಡಲ್ಲ. ಸಂತ್ರಸ್ತರ ಸಮಸ್ಯೆ ಇತ್ಯರ್ಥ ಮಾಡಬೇಕಿದೆ. ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆದ್ದಿದೆ: ರಮೇಶ್ ಜಾರಕಿಹೊಳಿ - Valmiki Corporation scam

ಮಾಜಿ ಸಚಿವ ರಮೇಶ್​ ಜಾರಕಿಹೊಳಿ (ETV Bharat)

ಬೆಳಗಾವಿ : ''ಡಿ ಕೆ ಶಿವಕುಮಾರ್ ಮಹಾನಾಯಕ ಅಲ್ಲ, ಆತ ಸಿಡಿ ಶಿವು. ಮಹಾನಾಯಕ ಎಂದರೆ ಅಂಬೇಡ್ಕರ್‌ಗೆ ಅವಮಾನ ಆಗುತ್ತದೆ. ಹೀಗಾಗಿ ನಾನು ಮತ್ತು ಹೆಚ್‌ಡಿಕೆ ಸೇರಿ ದೆಹಲಿಯಲ್ಲಿ ಡಿ ಕೆ ಶಿವಕುಮಾರ್​ಗೆ ಸಿಡಿ ಶಿವು ಎಂದು ಮರು ನಾಮಕರಣ ಮಾಡಿದ್ದೇವೆ'' ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​ನ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುವುದು ಮತ್ತು ಕೆಳಗಿಳಿಯುವುದು ಅವರ ಆಂತರಿಕ ವಿಷಯ. ಆದರೆ, ಕಾಂಗ್ರೆಸ್ ಸರ್ಕಾರ ಬರಲು, ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ‌ ಮೂಲ ಕಾರಣ. ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ನನ್ನ ಪಾತ್ರವೂ ಇದೆ ಎನ್ನುತ್ತಿದ್ದಾರೆ ಎನ್ನುವ ಮೂಲಕ ಡಿಸಿಎಂ ಡಿ. ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗುಡುಗಿದ ರಮೇಶ್ ಜಾರಕಿಹೊಳಿ, ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಕಾಂಗ್ರೆಸ್ ಪಕ್ಷದ ಅಧೋಗತಿ ಆರಂಭ ಎಂದು ಭವಿಷ್ಯ ನುಡಿದರು.

ಮುಡಾ ಹಗರಣ ಖಂಡಿಸಿ ಬಿಜೆಪಿ ಮೈಸೂರು ಚಲೋ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಮುಡಾಗಿಂತಲೂ ದೊಡ್ಡದು ವಾಲ್ಮೀಕಿ ನಿಗಮದ ಹಗರಣ. ಅದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದ್ದಾರೆ. ಹಾಗಾಗಿ, ಬಳ್ಳಾರಿಗೆ ಪಾದಯಾತ್ರೆ ಮಾಡೋದು ಒಳ್ಳೆಯದು. ಆ ಪಾದಯಾತ್ರೆ ಮೈಸೂರಿಗೆ ಸೀಮಿತ ಸರಿಯಲ್ಲ. ರಾಜ್ಯದಲ್ಲಿ ಲಿಂಗಾಯತ, ಮುಸ್ಲಿಂ, ಎಸ್ಸಿ ಸಮುದಾಯದ ನಂತರ ವಾಲ್ಮೀಕಿ ಅತೀ ದೊಡ್ಡ ಸಮುದಾಯ. ಆ ಜನಾಂಗಕ್ಕೆ ಮೋಸ ಮಾಡಿರುವ ಸರ್ಕಾರದ ವಿರುದ್ಧ ಕೂಡಲಸಂಗಮ ಟು ಬಳ್ಳಾರಿ‌ ಪಾದಯಾತ್ರೆಗೆ ದಿಲ್ಲಿ ನಾಯಕರ ಬಳಿ ಅನುಮತಿ ಕೇಳಿದ್ದೇನೆ. ನಾನು ಮತ್ತು ಯತ್ನಾಳ್ ಸೇರಿ ಕೆಲ ಶಾಸಕರು ಈ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದಾರೆ. ಈ ಕಾರಣಕ್ಕೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಾಲ್ಕು ಕಾಳಜಿ ಕೇಂದ್ರ ತೆರೆದು, ಸಂತ್ರಸ್ತರ ಕಾಳಜಿ ಮಾಡಲಾಗುತ್ತದೆ. ಒಳ್ಳೆಯ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿಗಳ ಹೂಳೆತ್ತುವ ಮತ್ತು ಒತ್ತುವರಿ ಸರ್ವೇ ಮಾಡಬೇಕು. ನಾನು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಈಗಿನ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದರು.

ಸಪ್ತನದಿಗಳ ಉಗಮ ಸ್ಥಾನದಲ್ಲಿ ಮಳೆ ಆಗುತ್ತಿದೆ. ಹೀಗಾಗಿ ಪ್ರವಾಹ ನಿಯಂತ್ರಣಕ್ಕೆ ತಾಲೂಕಾಡಳಿತ ಸಜ್ಜುಗೊಂಡಿದೆ‌. ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಸಿ ಮಹ್ಮದ್ ರೋಷನ್ ಭೇಟಿ ನೀಡಲಿದ್ದಾರೆ. ಸಂತ್ರಸ್ತರಿಗೆ ಊಟ, ಔಷಧಿ, ಜಾನುವಾರುಗಳಿಗೆ ಮೇವು ಎಲ್ಲವನ್ನೂ ಕೊಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡುತ್ತಿದ್ದೆವು. ಈಗಿನ ಸರ್ಕಾರ ಪರಿಹಾರ ನಿಲ್ಲಿಸಿದೆ. ನಾನು ಪ್ರತಿಪಕ್ಷ ಸದಸ್ಯನಾಗಿ ಸರ್ಕಾರದ ಬಗ್ಗೆ ಟೀಕೆ ಮಾಡಲ್ಲ. ಸಂತ್ರಸ್ತರ ಸಮಸ್ಯೆ ಇತ್ಯರ್ಥ ಮಾಡಬೇಕಿದೆ. ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆದ್ದಿದೆ: ರಮೇಶ್ ಜಾರಕಿಹೊಳಿ - Valmiki Corporation scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.