ಮೆಸ್​ಗೆ ನುಗ್ಗಿ ದರೋಡೆಗೆ ಯತ್ನ; ಲೂಟಿ ಮಾಡಿದ್ದ ಬಾಟಲಿಗೆ ಹಣ ಕೊಟ್ಟು ಹೊರಟುಹೋದ ಕಳ್ಳ! - VARIETY THIEF ROBBERY

By ETV Bharat Karnataka Team

Published : Jul 27, 2024, 1:46 PM IST

thumbnail
ಲೂಟಿ ಮಾಡಿದ್ದ ನೀರಿನ ಬಾಟಲ್​ ಹಣ ಕೊಟ್ಟು ಹೊರಟುಹೋದ ಕಳ್ಳ! (ETV Bharat)

ರಂಗಾರೆಡ್ಡಿ (ತೆಲಂಗಾಣ): ಜಿಲ್ಲೆಯ ಮಹೇಶ್ವರಂನಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಅಚ್ಚರಿ ಮೂಡಿಸಿದೆ. ಜುಲೈ 18 ರಂದು ಮಹೇಶ್ವರಂ ಪೊಲೀಸ್​ ಠಾಣಾ ವ್ಯಾಪ್ತಿಯ ಎಂಆರ್‌ಒ ಕಚೇರಿ ಬಳಿಯ ವಿನಾಯಕ ಮೆಸ್‌ಗೆ ಕಳ್ಳನೊಬ್ಬ ನುಗ್ಗಿದ್ದ. ಈ ಮೇನ್​ ಡೋರ್​ ಅನ್ನು ಮುರಿದು ಒಳಗೆ ಪ್ರವೇಶಿಸಿದ್ದ. ಶಂಕಿತ ವ್ಯಕ್ತಿ ತಡರಾತ್ರಿ ಕೌಂಟರ್‌ಗಳಲ್ಲಿ ಹಣಕ್ಕಾಗಿ ತಡಕಾಡಿದ್ದ. ನಂತರ ಇಡೀ ಮೆಸ್​ ಅನ್ನು ಹುಡುಕಿದ್ರು ಸಹ ಆತನಿಗೆ ಒಂದು ನಯಾ ಪೈಸೆ ಕೂಡ ಸಿಕ್ಕಿರಲಿಲ್ಲ.   

ಸಿಸಿಟಿವಿ ಕ್ಯಾಮೆರಾ ಮುಂದೆ ಬಂದು ಸನ್ನೆ ಮಾಡುವ ಮೂಲಕ ಕಳ್ಳ ತನ್ನ ಗೋಳು ಹೇಳಿಕೊಂಡಿದ್ದಾನೆ. ‘ಇಲ್ಲಿ ಒಂದು ರೂಪಾಯಿಯೂ ಇಲ್ಲ. ಇದೆಂಥ ಮೆಸ್​ ಅಂತಾ ಬೈದುಕೊಂಡಿದ್ದಾನೆ. ಎಲ್ಲವನ್ನು ತಡಕಾಡಿದ ಬಳಿಕ ಬಾಯಾರಿಕೆಯಾಗುತ್ತಿದೆ ಎಂದು ಅಲ್ಲೇ ಇದ್ದ ಫ್ರಿಡ್ಜ್​ನಲ್ಲಿದ್ದ ನೀರಿನ ಬಾಟಲಿ ತೆಗೆದು ನೀರು ಕುಡಿದಿದ್ದಾನೆ. ಬಳಿಕ ಅದರ ಹಣವನ್ನು ಕೊಡುವುದಾಗಿ ಹೇಳಿ ಬಾಟಲಿಯ ಹಣ 20 ರೂಪಾಯಿಯನ್ನು ಅಲ್ಲೇ ಇಟ್ಟು ಹೊರಟು ಹೋಗಿದ್ದಾನೆ.  

ಮೆಸ್​ನಲ್ಲಿ ಕಳ್ಳನಿಗೆ ಏನೂ ಸಿಗದಿದ್ದಾಗ ಕ್ಲೋಸ್ಡ್ ಸರ್ಕಿಟ್ ಟೆಲಿವಿಷನ್ ಕ್ಯಾಮೆರಾದತ್ತ ತಿರುಗಿ ನಿರಾಸೆಯಿಂದ ಕೈಮುಗಿದು ‘ಲೂಟಿ’ ಮಾಡಿದ್ದ ನೀರಿನ ಬಾಟಲಿಗೆ ಹಣ ಕೊಟ್ಟು ಹೊರಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಹೇಶ್ವರಂ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.  

ಓದಿ:  ಪೊಲೀಸರ ಮೇಲೆ ದಾಳಿಗೆ ಯತ್ನ, ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಇನ್ಸ್​ಪೆಕ್ಟರ್​ - Shoot Out

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.