ಈ ಚುನಾವಣೆಯಲ್ಲಿ ನ್ಯೂಟ್ರಲ್ ಆಗಿರುವೆ.. ಸಂಸದೆ ಸುಮಲತಾ ಅಂಬಿ
ಬೆಂಗಳೂರು:ಕೆಲಸ ಮಾಡಲೆಂದು ಜನರು ಮತ ನೀಡಿ ಗೆಲ್ಲಿಸಿದ್ದಾರೆ ಎಂಬುದು ನನ್ನ ಭಾವನೆ. ಹಾಗಾಗಿ ನಾನು ಕೆಆರ್ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ,ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಹೋಗುವುದಿಲ್ಲ. ಈ ಚುನಾವಣೆಯಲ್ಲಿ ನಾನು ನ್ಯೂಟ್ರಲ್ ಆಗಿ ಇರ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಎಸ್.ನಾರಯಣ್ ಪುತ್ರ ಅಭಿನಯಿಸಲಿರುವ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅವರು, ಯಾರಿಗೂ ಹರ್ಟ್ ಮಾಡದೆ ನ್ಯೂಟ್ರಲ್ ಆಗಿರುವೆ ಅಂತಾ ಹೇಳಿದರು.