ETV Bharat / bharat

ರಾಧಾ-ಕೃಷ್ಣರ ಮೂರ್ತಿ ಕದ್ದ ಕಳ್ಳನಿಗೆ ಸಂಕಷ್ಟ: ದೇಗುಲದೆದುರು ವಿಗ್ರಹ ತಂದಿಟ್ಟ - Radha Krishna Idol Theft Case

author img

By ETV Bharat Karnataka Team

Published : 2 hours ago

ಕಳ್ಳನೊಬ್ಬ ದೇವಸ್ಥಾನದಿಂದ ದೇವರ ವಿಗ್ರಹವನ್ನು ಕದ್ದೊಯ್ದಿದ್ದ. ಬಳಿಕ ಆತನ ಕುಟುಂಬದಲ್ಲಿ ಎದುರಾದ ಸಮಸ್ಯೆಗಳಿಂದ ಬೇಸತ್ತು, ತನ್ನ ತಪ್ಪಿನ ಅರಿವಾಗಿ ವಿಗ್ರಹವನ್ನು ತಪ್ಪೊಪ್ಪಿಗೆ ಪತ್ರ ಸಮೇತ ದೇವಸ್ಥಾನಕ್ಕೆ ಮರಳಿಸಿದ್ದಾನೆ.

ದೇವರ ಮೂರ್ತಿ ಕದ್ದು ಸಂಕಷ್ಟಗಳಿಗೆ ಸಿಲುಕಿದ ಕಳ್ಳ
ದೇವರ ಮೂರ್ತಿ ಕದ್ದು ಸಂಕಷ್ಟಗಳಿಗೆ ಸಿಲುಕಿದ ಕಳ್ಳ (ETV Bharat)

ಪ್ರಯಾಗ್‌ರಾಜ್(ಉತ್ತರ ಪ್ರದೇಶ): 'ಸಂಕಟ ಬಂದಾಗ ವೆಂಕಟರಮಣ' ಎನ್ನುತ್ತೇವೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ದೇವರ ಮೊರೆ ಹೋಗುತ್ತೇವೆ. ದುರಿತಗಳನ್ನು ಪರಿಹರಿಸು ಎಂದು ಬೇಡುತ್ತೇವೆ. ಆದರೆ, ಇಲ್ಲೊಬ್ಬ ಕಳ್ಳ ದೇವಸ್ಥಾನದಲ್ಲಿನ ದೇವರನ್ನೇ ಕದ್ದಿದ್ದ. ಬಳಿಕವೇ ನೋಡಿ ಆತನಿಗೆ ಸಮಸ್ಯೆ ಶುರುವಾಗಿದ್ದು. ಹಲವು ಸಂಕಷ್ಟಗಳಿಗೆ ಸಿಲುಕಿದ ಆತ, ತಾನು ಮಾಡಿದ ತಪ್ಪಿನ ಅರಿವಾಗಿ ದೇವರ ವಿಗ್ರಹವನ್ನು ದೇವಸ್ಥಾನಕ್ಕೆ ಮರಳಿಸಿದ್ದಾನೆ. ಜೊತೆಗೆ, ಕ್ಷಮಾಪಣಾ ಪತ್ರವನ್ನೂ ಬರೆದಿದ್ದಾನೆ.

ಹೌದು, ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಜಿಲ್ಲೆಯಲ್ಲಿ. ದೇವರ ವಿಗ್ರಹ ಕದ್ದ ಕಳ್ಳ, ಕಷ್ಟಗಳಿಗೆ ತುತ್ತಾಗಿ ​​ವಿಗ್ರಹವನ್ನು ಮರಳಿ ದೇವಸ್ಥಾನದಲ್ಲಿ ತಂದಿಟ್ಟಿದ್ದಾನೆ. ಜೊತೆಗೆ, ತನ್ನನ್ನು ಕ್ಷಮಿಸಿ ಎಂದು ಕೋರಿದ್ದಾನೆ. ಆದರೆ, ವಿಗ್ರಹ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆ ಕಾರ್ಯ ನಡೆಸಿದ್ದಾರೆ.

ಪ್ರಕರಣದ ಪೂರ್ಣ ವಿವರ: ಪ್ರಯಾಗ್​ರಾಜ್​ ಜಿಲ್ಲೆಯ ಶೃಂಗವರ್‌ಪುರ ಧಾಮ್ ಬಳಿಯ ರಾಧಾ-ಕೃಷ್ಣ ದೇವಸ್ಥಾನದಲ್ಲಿನ 150 ವರ್ಷಗಳಷ್ಟು ಹಳೆಯದಾದ ರಾಧಾ-ಕೃಷ್ಣನ ವಿಗ್ರಹವನ್ನು ಕಳ್ಳನೊಬ್ಬ ಸೆಪ್ಟೆಂಬರ್ 23ರಂದು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಕದ್ದೊಯ್ದಿದ್ದ. ಮರುದಿನ ಬೆಳಗ್ಗೆ ನಿತ್ಯ ಪೂಜೆಯ ವೇಳೆ ಅರ್ಚಕರು ವಿಗ್ರಹ ಇಲ್ಲದ್ದನ್ನು ಕಂಡಿದ್ದಾರೆ. ಬಳಿಕ ಅವರು, ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಗ್ರಹದ ಪತ್ತೆಗೆ ಹುಡುಕಾಡುತ್ತಿದ್ದರು.

ಈ ಮಧ್ಯೆ, ಅಕ್ಟೋಬರ್​​ 2ರಂದು ದೇವಸ್ಥಾನದ ಹೊರಗೆ ಬಟ್ಟೆಯಲ್ಲಿ ಸುತ್ತಿಟ್ಟು ವಿಗ್ರಹ ಮರಳಿಸಲಾಗಿದೆ. ಅದರ ಜೊತೆಗೆ ಕ್ಷಮಾಪಣೆ ಪತ್ರವೂ ಇದೆ. ಇದನ್ನು ಕಂಡ ಅರ್ಚಕರಿಗೆ ಸಂತಸದ ಜೊತೆಗೆ ಅಚ್ಚರಿಯೂ ಉಂಟಾಯಿತು. ಬಳಿಕ ವಿಗ್ರಹ ಮರಳಿ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತ್ರದಲ್ಲಿ ಏನಿದೆ?: ದೇವಾಲಯದ ಅರ್ಚಕರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, "ಮಹಾರಾಜ್ ಜೀ ಪ್ರಣಾಮ್. ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ಅಜ್ಞಾನದಿಂದ ದೇವಸ್ಥಾನದಲ್ಲಿದ್ದ ರಾಧಾ-ಕೃಷ್ಣರ ವಿಗ್ರಹವನ್ನು ಕದ್ದಿದ್ದೇನೆ. ಆ ದಿನದಿಂದಲೂ ನಾನು ದುಃಸ್ವಪ್ನಗಳನ್ನು ಎದುರಿಸುತ್ತಿದ್ದೇನೆ. ಜೊತೆಗೆ ಅಂದಿನಿಂದ ನನ್ನ ಮಗನ ಆರೋಗ್ಯವೂ ಹದಗೆಡಲು ಪ್ರಾರಂಭಿಸಿದೆ. ನಾನು ಮಾಡಿದ ತಪ್ಪಿನ ಅರಿವಾಗಿ ವಿಗ್ರಹವನ್ನು ಮರಳಿಸುತ್ತಿದ್ದೇನೆ. ನನ್ನ ತಪ್ಪುಗಳನ್ನು ಕ್ಷಮಿಸಿ. ಮರಳಿ ದೇವರನ್ನು ಪ್ರತಿಷ್ಠಾಪಿಸಿ" ಎಂದು ಕೋರಿದ್ದಾನೆ.

ಈ ಬಗ್ಗೆ ಹೇಳಿಕೆ ನೀಡಿರುವ ದೇವಸ್ಥಾನದ ಅರ್ಚಕರು, "ವಿಗ್ರಹ ಕಳುವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. 150 ವರ್ಷಗಳಷ್ಟು ಹಳೆಯ ವಿಗ್ರಹ ಇದಾಗಿತ್ತು. ದೇವರನ್ನು ಕದ್ದ ಬಳಿಕ ಕಳ್ಳ ಮತ್ತು ಆತನ ಕುಟುಂಬದಲ್ಲಿ ಕೆಟ್ಟ ಗಳಿಗೆ ಆರಂಭವಾಗಿದೆ. ಹೀಗಾಗಿ, ನೊಂದು ಆತನೇ ವಾಪಸ್ ತಂದು ದೇವಸ್ಥಾನದಲ್ಲಿ ಇಟ್ಟಿದ್ದಾನೆ. ಕಳ್ಳನಿಗೆ ದೇವರು ತಕ್ಕ ಪಾಠ ಕಲಿಸಿದ್ದಾನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್ - Tirupati Laddu Row

ಪ್ರಯಾಗ್‌ರಾಜ್(ಉತ್ತರ ಪ್ರದೇಶ): 'ಸಂಕಟ ಬಂದಾಗ ವೆಂಕಟರಮಣ' ಎನ್ನುತ್ತೇವೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ದೇವರ ಮೊರೆ ಹೋಗುತ್ತೇವೆ. ದುರಿತಗಳನ್ನು ಪರಿಹರಿಸು ಎಂದು ಬೇಡುತ್ತೇವೆ. ಆದರೆ, ಇಲ್ಲೊಬ್ಬ ಕಳ್ಳ ದೇವಸ್ಥಾನದಲ್ಲಿನ ದೇವರನ್ನೇ ಕದ್ದಿದ್ದ. ಬಳಿಕವೇ ನೋಡಿ ಆತನಿಗೆ ಸಮಸ್ಯೆ ಶುರುವಾಗಿದ್ದು. ಹಲವು ಸಂಕಷ್ಟಗಳಿಗೆ ಸಿಲುಕಿದ ಆತ, ತಾನು ಮಾಡಿದ ತಪ್ಪಿನ ಅರಿವಾಗಿ ದೇವರ ವಿಗ್ರಹವನ್ನು ದೇವಸ್ಥಾನಕ್ಕೆ ಮರಳಿಸಿದ್ದಾನೆ. ಜೊತೆಗೆ, ಕ್ಷಮಾಪಣಾ ಪತ್ರವನ್ನೂ ಬರೆದಿದ್ದಾನೆ.

ಹೌದು, ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಜಿಲ್ಲೆಯಲ್ಲಿ. ದೇವರ ವಿಗ್ರಹ ಕದ್ದ ಕಳ್ಳ, ಕಷ್ಟಗಳಿಗೆ ತುತ್ತಾಗಿ ​​ವಿಗ್ರಹವನ್ನು ಮರಳಿ ದೇವಸ್ಥಾನದಲ್ಲಿ ತಂದಿಟ್ಟಿದ್ದಾನೆ. ಜೊತೆಗೆ, ತನ್ನನ್ನು ಕ್ಷಮಿಸಿ ಎಂದು ಕೋರಿದ್ದಾನೆ. ಆದರೆ, ವಿಗ್ರಹ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆ ಕಾರ್ಯ ನಡೆಸಿದ್ದಾರೆ.

ಪ್ರಕರಣದ ಪೂರ್ಣ ವಿವರ: ಪ್ರಯಾಗ್​ರಾಜ್​ ಜಿಲ್ಲೆಯ ಶೃಂಗವರ್‌ಪುರ ಧಾಮ್ ಬಳಿಯ ರಾಧಾ-ಕೃಷ್ಣ ದೇವಸ್ಥಾನದಲ್ಲಿನ 150 ವರ್ಷಗಳಷ್ಟು ಹಳೆಯದಾದ ರಾಧಾ-ಕೃಷ್ಣನ ವಿಗ್ರಹವನ್ನು ಕಳ್ಳನೊಬ್ಬ ಸೆಪ್ಟೆಂಬರ್ 23ರಂದು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಕದ್ದೊಯ್ದಿದ್ದ. ಮರುದಿನ ಬೆಳಗ್ಗೆ ನಿತ್ಯ ಪೂಜೆಯ ವೇಳೆ ಅರ್ಚಕರು ವಿಗ್ರಹ ಇಲ್ಲದ್ದನ್ನು ಕಂಡಿದ್ದಾರೆ. ಬಳಿಕ ಅವರು, ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಗ್ರಹದ ಪತ್ತೆಗೆ ಹುಡುಕಾಡುತ್ತಿದ್ದರು.

ಈ ಮಧ್ಯೆ, ಅಕ್ಟೋಬರ್​​ 2ರಂದು ದೇವಸ್ಥಾನದ ಹೊರಗೆ ಬಟ್ಟೆಯಲ್ಲಿ ಸುತ್ತಿಟ್ಟು ವಿಗ್ರಹ ಮರಳಿಸಲಾಗಿದೆ. ಅದರ ಜೊತೆಗೆ ಕ್ಷಮಾಪಣೆ ಪತ್ರವೂ ಇದೆ. ಇದನ್ನು ಕಂಡ ಅರ್ಚಕರಿಗೆ ಸಂತಸದ ಜೊತೆಗೆ ಅಚ್ಚರಿಯೂ ಉಂಟಾಯಿತು. ಬಳಿಕ ವಿಗ್ರಹ ಮರಳಿ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತ್ರದಲ್ಲಿ ಏನಿದೆ?: ದೇವಾಲಯದ ಅರ್ಚಕರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, "ಮಹಾರಾಜ್ ಜೀ ಪ್ರಣಾಮ್. ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ಅಜ್ಞಾನದಿಂದ ದೇವಸ್ಥಾನದಲ್ಲಿದ್ದ ರಾಧಾ-ಕೃಷ್ಣರ ವಿಗ್ರಹವನ್ನು ಕದ್ದಿದ್ದೇನೆ. ಆ ದಿನದಿಂದಲೂ ನಾನು ದುಃಸ್ವಪ್ನಗಳನ್ನು ಎದುರಿಸುತ್ತಿದ್ದೇನೆ. ಜೊತೆಗೆ ಅಂದಿನಿಂದ ನನ್ನ ಮಗನ ಆರೋಗ್ಯವೂ ಹದಗೆಡಲು ಪ್ರಾರಂಭಿಸಿದೆ. ನಾನು ಮಾಡಿದ ತಪ್ಪಿನ ಅರಿವಾಗಿ ವಿಗ್ರಹವನ್ನು ಮರಳಿಸುತ್ತಿದ್ದೇನೆ. ನನ್ನ ತಪ್ಪುಗಳನ್ನು ಕ್ಷಮಿಸಿ. ಮರಳಿ ದೇವರನ್ನು ಪ್ರತಿಷ್ಠಾಪಿಸಿ" ಎಂದು ಕೋರಿದ್ದಾನೆ.

ಈ ಬಗ್ಗೆ ಹೇಳಿಕೆ ನೀಡಿರುವ ದೇವಸ್ಥಾನದ ಅರ್ಚಕರು, "ವಿಗ್ರಹ ಕಳುವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. 150 ವರ್ಷಗಳಷ್ಟು ಹಳೆಯ ವಿಗ್ರಹ ಇದಾಗಿತ್ತು. ದೇವರನ್ನು ಕದ್ದ ಬಳಿಕ ಕಳ್ಳ ಮತ್ತು ಆತನ ಕುಟುಂಬದಲ್ಲಿ ಕೆಟ್ಟ ಗಳಿಗೆ ಆರಂಭವಾಗಿದೆ. ಹೀಗಾಗಿ, ನೊಂದು ಆತನೇ ವಾಪಸ್ ತಂದು ದೇವಸ್ಥಾನದಲ್ಲಿ ಇಟ್ಟಿದ್ದಾನೆ. ಕಳ್ಳನಿಗೆ ದೇವರು ತಕ್ಕ ಪಾಠ ಕಲಿಸಿದ್ದಾನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್ - Tirupati Laddu Row

ETV Bharat Logo

Copyright © 2024 Ushodaya Enterprises Pvt. Ltd., All Rights Reserved.