ಕೊಡಗಿಗೆ ಮತ್ತೆ ಸಂಕಷ್ಟ : ಬಿರುಕು ಬಿಟ್ಟ ಬೆಟ್ಟಗಳು, ಜನರ ಬದುಕು ಮೂರಾಬಟ್ಟೆ...!
ಕೊಡಗು : ಭಾರಿ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಬೆಟ್ಟ ಕುಸಿತ ಹಾಗೂ ಬೆಟ್ಟ ಬಿರುಕು ಬಿಟ್ಟಿದ್ದು, ಇದನ್ನು ಅಧ್ಯಯನ ನಡೆಸಿರುವ ಜಿಎಸ್ಐ ವಿಜ್ಞಾನಿಗಳು ಜಿಲ್ಲಾಡಳಿತಕ್ಕೆ 27 ಪುಟುಗಳ ವರದಿಯನ್ನು ಸಲ್ಲಿಸಿದ್ದಾರೆ. ಬೆಟ್ಟಗಳ ಕುಸಿತ ಹಾಗೂ ಬಿರುಕು ಬಿಟ್ಟಿರುವ ಬಗ್ಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಅಧ್ಯಯನದ ಅವಶ್ಯಕತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಬೆಟ್ಟ ಬಿರುಕು ಬಿಟ್ಟಿರುವುದರಿಂದ ಬೆಟ್ಟ ಪ್ರದೇಶದ ವ್ಯಾಪ್ತಿಯಲ್ಲಿನ ಕಟ್ಟಡಗಳನ್ನು ನಿರ್ಮಿಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.