ರಾಣೆಬೆನ್ನೂರು: ಭಜನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
ರಾಣೆಬೆನ್ನೂರು (ಹಾವೇರಿ) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಣೆಬೆನ್ನೂರು ತಾಲೂಕಿನ ಮಾಕನೂರು ಕ್ರಾಸ್ ಬಳಿ ಪ್ರತಿಭಟಿಸಲಾಯಿತು. ಹೆದ್ದಾರಿ ಬಳಿ ಜಮಾಯಿಸಿದ ನೂರಾರು ರೈತರು, ರಸ್ತೆಯಲ್ಲಿ ಕುಳಿತು ಭಜನೆ ಮಾಡುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ರವಿಂದ್ರಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಕನೂರು ಗ್ರಾಮದ ಕರಿಯಮ್ಮ ಭಜನಾ ಮಂಡಳಿ ಪಾಲ್ಗೊಂಡಿತ್ತು.