ಶ್ರೀಶೈಲಕ್ಕೆ ತೆರಳಿದ್ದ ಭಕ್ತರು ವಾಪಸ್ : 14 ದಿನ ಹೊರಗೆ ಹೋಗದಂತೆ ಆದೇಶ
ಕೊರೊನಾ ವೈರಸ್ ಭೀತಿಯಿಂದ ದೇವಸ್ಥಾನಗಳು ಬಾಗಿಲು ಮುಚ್ಚಿವೆ. ಇತ್ತ ತೆಲಂಗಾಣದ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆಂದು ಪಾದಯಾತ್ರೆ ಮೂಲಕ ತೆರಳಿದ್ದ ಭಕ್ತರಿಗೆ ಕೊರೊನಾ ದೇವರ ದರ್ಶನವಿಲ್ಲದಂತೆ ಮಾಡಿದೆ. ಅಥಣಿ ತಾಲೂಕಿನಿಂದ ತೆರಳಿದ್ದ ಸಾವಿರಕ್ಕೂ ಹೆಚ್ಚು ಭಕ್ತರು ಮರಳಿ ಗ್ರಾಮಕ್ಕೆ ಆಗಮಿಸುತ್ತಿದ್ದು, ಇದರಿಂದ ಗ್ರಾಮದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಆವರಿಸಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಬಂದ ಭಕ್ತರನ್ನು ಪ್ರತ್ಯೇಕವಾಗಿರಿಸಿ ಪರೀಕ್ಷೆ ನಡೆಸಿ ಅವರನ್ನು 14 ದಿನದ ಮಟ್ಟಿಗೆ ಹೊರಗೆ ಹೋಗದಂತೆ ಆದೇಶ ನೀಡಿದ್ದಾರೆ.