ಬಾಗಲಕೋಟೆಯಲ್ಲಿ ದಸರಾ ಸಂಭ್ರಮ: ಕ್ರೀಡಾ ಇಲಾಖೆಯಿಂದ ಸೈಕ್ಲಿಂಗ್ ಸ್ಪರ್ಧೆ
ಬಾಗಲಕೋಟೆ: ದಸರಾ ಹಬ್ಬದ ನಿಮಿತ್ತ ನಗರದಲ್ಲಿ ಕ್ರೀಡಾ ಇಲಾಖೆಯಿಂದ ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನವನಗರದ ಯುನಿಟ್ ಎರಡರಲ್ಲಿ ಸುಮಾರು ಎರಡು ಕೀಲೋಮೀಟರ್ವರೆಗೆ ಅತಿ ವೇಗದ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಸೈಕ್ಲಿಂಗ್ ಸ್ಪರ್ಧೆಗೆ ಚಾಲನೆ ನೀಡಿದರು. ಮೈಸೂರು ದಸರಾದಲ್ಲಿ ನಡೆಯುವ ಸ್ಪರ್ಧೆಗೆ 20 ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 17 ವಿದ್ಯಾರ್ಥಿನಿಯರು ಹಾಗೂ 21 ವಿದ್ಯಾರ್ಥಿಗಳು ಭಾಗವಹಿಸಿದ್ದು, ಯಾರು ಕಡಿಮೆ ಅವಧಿ, ಮಾರ್ಕ್ ಮಾಡಿರುವ ಸ್ಥಳವನ್ನು ಮುಟ್ಟುತ್ತಾರೋ ಅವರಿಗೆ ಪ್ರಥಮ ಬಹುಮಾನ ನೀಡಿ ಮೈಸೂರು ದಸರಾದಲ್ಲಿ ನಡೆಯುವ ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂದು ಕ್ರೀಡಾಧಿಕಾರಿ ಮೇಲಿನಮನಿ ತಿಳಿಸಿದ್ದಾರೆ. ಜಿಲ್ಲೆಯು ಸೈಕ್ಲಿಂಗ್ ಕ್ರೀಡೆಗೆ ಹೆಸರುವಾಸಿ ಆಗಿದ್ದು, ಸರಕಾರದಿಂದ ಪ್ರೋತ್ಸಾಹ ದೂರಕುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ದೂರಕಿದೆ ಎಂದು ಹಿರಿಯ ಕ್ರೀಡಾಪಟು ವೆಂಕಣ್ಣ ಎಂಟೆತ್ತು ಎಂಬುವರು ತಿಳಿಸಿದ್ದಾರೆ.