ಅಯೋಧ್ಯೆಯ ಹನುಮಾನ್ ದೇವಸ್ಥಾನದಲ್ಲಿ ಸೂಪರ್​ಸ್ಟಾರ್​ ರಜನಿಕಾಂತ್ ಪ್ರಾರ್ಥನೆ: ವಿಡಿಯೋ

By

Published : Aug 20, 2023, 5:10 PM IST

Updated : Aug 20, 2023, 5:44 PM IST

thumbnail

ಜೈಲರ್​ ಯಶಸ್ಸಿನ ಖುಷಿಯಲ್ಲಿರುವ ಸೂಪರ್​ ಸ್ಟಾರ್​ ರಜನಿಕಾಂತ್​ ಇಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​​ ಅವರನ್ನು ಭೇಟಿಯಾದ ನಂತರ ಇಂದು ಅಯೋಧ್ಯೆ ತಲುಪಿದ್ದಾರೆ. ಪತ್ನಿ ಲತಾ ಅವರು ರಜನಿಗೆ ಸಾಥ್​ ನೀಡಿದ್ದಾರೆ. ರಜನಿ ದಂಪತಿ ಅಯೋಧ್ಯೆಯ ಮಧ್ಯಭಾಗದಲ್ಲಿರುವ 10ನೇ ಶತಮಾನದ ಹನುಮಾನ್​ ಗರ್ಹಿಯಲ್ಲಿ (Hanuman Garhi) ಪ್ರಾರ್ಥನೆ ಸಲ್ಲಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ರಜನಿಕಾಂತ್​​ ಮತ್ತು ಲತಾ ದಂಪತಿ ಹನುಮಾನ್​​ ಗರ್ಹಿಯಲ್ಲಿ ಜನಸಮೂಹದ ನಡುವೆ ಆಶೀರ್ವಾದ ಪಡೆಯುತ್ತಿದ್ದಾರೆ. ಹನುಮಾನ್​​ ಗರ್ಹಿ ಬಳಿಕ ರಾಮ ಮಂದಿರದ ರಾಮ್​ ಲಲ್ಲಾಗೆ ನಮನ ಸಲ್ಲಿಸಲಿದ್ದಾರೆ. 

ಇಂದು ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಅವರನ್ನು ಭೇಟಿಯಾಗಿದ್ದ ರಜನಿಕಾಂತ್, ಶನಿವಾರದಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್​ ಪಟೇಲ್​​ ಅವರನ್ನು ಭೇಟಿ ಮಾಡಿದ್ದರು. ಶುಕ್ರವಾರ ಲಕ್ನೋದ ಥಿಯೇಟರ್​ನಲ್ಲಿ ಆಯೋಜನೆಗೊಂಡಿದ್ದ ಜೈಲರ್​ ಸ್ಪೆಶಲ್​ ಸ್ಕ್ರೀನಿಂಗ್​ನಲ್ಲಿ ಡಿಸಿಎಂ ಕೇಶವ್​ ಪ್ರಸಾದ್​​ ಮೌರ್ಯ ಸೇರಿದಂತೆ ಗಣ್ಯರೊಂದಿಗೆ ಭಾಗಿಯಾಗಿದ್ದರು.  

ಇದನ್ನೂ ಓದಿ: ಅಖಿಲೇಶ್​ ಯಾದವ್ ಅಪ್ಪಿಕೊಂಡ ರಜನಿಕಾಂತ್‌: ಭೇಟಿ ಬಗ್ಗೆ 'ತಲೈವಾ' ಹೇಳಿದ್ದೇನು?

Last Updated : Aug 20, 2023, 5:44 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.