ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಸದ್ಯ ದೂರು ನೀಡಲು ಬರಬೇಡಿ. ಏನೇ ಇದ್ದರು ಸಹಾಯವಾಣಿ ಮೂಲಕ ತಿಳಿಸಿ ಎಂದಿದ್ದಾರೆ.
ಈಗಾಗಲೇ ಲೋಕಾಯುಕ್ತ ಕಚೇರಿಯಲ್ಲಿ ಕೊರೊನಾ ಪತ್ತೆ ಹಚ್ಚುವ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಸೋಂಕು ಇರುವ ಸಿಬ್ಬಂದಿ ಪತ್ತೆಯಾದರೆ ಅವರು ರಜೆ ಪಡೆದುಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತದಲ್ಲಿ ನಡೆಯುವ ವಿಚಾರಣೆಗಳನ್ನು ಮುಂದೂಡಿಕೆ ಮಾಡಲು ನಿರ್ಧಾರ ಮಾಡಿ, ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವುದನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಅಗತ್ಯ ದಾಖಲೆಗಳನ್ನ ಲೋಕಾಯುಕ್ತ ಇನ್ ವಾರ್ಡ್ನಲ್ಲಿ ಕೊಡಲು ತಿಳಿಸಲಾಗಿದೆ. ಸದ್ಯ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ನಡೆಸುವ ವೈಯಕ್ತಿಕ ವಿಚಾರಣೆ ಸಹ ಮುಂದೂಡಿಕೆ ಮಾಡಿದ್ದು, ತೀರಾ ಅಗತ್ಯವಿರುವ ಕೇಸ್ಗಳ ವಿಚಾರಣೆ ಮಾತ್ರ ನಡೆಯಲಿದೆ.