ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಕೆಲವು ದಿನಗಳಿಂದ ಟ್ರಿಪ್ ಮೂಡ್ನಲ್ಲಿದ್ದಾರೆ. ಇತ್ತೀಚೆಗಷ್ಟೇ ಕೊಡಗಿನ ಸುಂದರ ತಾಣಗಳಿಗೆ ಟ್ರಿಪ್ ಹೋಗಿಬಂದಿದ್ದ ನಟ ದರ್ಶನ್ ಹಾಗೂ ತಂಡ 3 ದಿನಗಳ ಹಿಂದೆ ಮತ್ತೆ ಬೈಕ್ನಲ್ಲಿ ಚಾಮರಾಜನಗರದ ಬಂಡೀಪುರಕ್ಕೆ ಟ್ರಿಪ್ ಹೊರಟಿತ್ತು. ಅಲ್ಲಿಂದ ಕೂಡಾ ಅವರ ಟ್ರಿಪ್ ಮತ್ತೆ ಮುಂದುವರೆದಿದೆ.
ಇದನ್ನೂ ಓದಿ: ಅವರನ್ನೆಲ್ಲಾ ಶಕೀಲಾ ಕರೆಸಲಿಲ್ಲ ಎಂದರೆ ಮತ್ತ್ಯಾರು ಕರೆಸುತ್ತಾರೆ....?
ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಚಿಂತನೆಗೆ ಒತ್ತು ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡೀಪುರ ಭೇಟಿ ನಂತರ ಮೈಸೂರಿನ ತಿ. ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರಂನಲ್ಲಿ ಸ್ನೇಹಿತರೊಂದಿಗೆ ತಂಗಿದ್ದರು. ಅಲ್ಲಿಂದ ಮತ್ತೆ ಎಲ್ಲರೂ ಕೇರಳಕ್ಕೆ ಟ್ರಿಪ್ ಹೊರಟಿದ್ದಾರೆ. ದರ್ಶನ್ ತಮ್ಮ ಸ್ನೇಹಿತರೊಂದಿಗೆ ಫಾರಂಹೌಸ್ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ಫಾರ್ಮ್ಹೌಸ್ ಬಳಿ ಜಮಾಯಿಸಿದ್ದಾರೆ. ದರ್ಶನ್ ಕೂಡಾ ಅಭಿಮಾನಿಗಳಿಗೆ ನಿರಾಸೆ ಮಾಡದೆ ಹೊರ ಬಂದು ಎಲ್ಲರನ್ನೂ ಮಾತನಾಡಿಸಿದ್ದಾರೆ. ದರ್ಶನ್ ಬೈಕ್ ರೈಡ್ಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ನಿರ್ಮಾಪಕ ಉಮಾಪತಿ ಸೇರಿ 20 ಮಂದಿ ಗೆಳೆಯರು ಸಾಥ್ ನೀಡಿದ್ದಾರೆ. ಸಿನಿಮಾ ಜಂಜಾಟಗಳಿಂದ ಕೆಲವು ದಿನಗಳ ಕಾಲ ದೂರ ಉಳಿದಿರುವ ದರ್ಶನ್ ಪ್ರವಾಸ ಹೋದ ಕಡೆಯೆಲ್ಲಾ ಸಸಿಗಳನ್ನು ನೆಟ್ಟು ನೀರೆರೆಯುತ್ತಿದ್ದಾರೆ ಎನ್ನಲಾಗಿದೆ.