ETV Bharat / sitara

ಮೈಸೂರಿನಿಂದ ಕೇರಳದತ್ತ ದರ್ಶನ್ ಅ್ಯಂಡ್ ಟೀಮ್ ಸವಾರಿ

3 ದಿನಗಳ ಹಿಂದೆ ಚಾಮರಾಜನಗರದ ಬಂಡೀಪುರಕ್ಕೆ ಭೇಟಿ ನೀಡಿದ್ದ ದರ್ಶನ್ ಮತ್ತೆ ಅಲ್ಲಿಂದ ಬೈಕ್​​​ನಲ್ಲೇ ಕೇರಳಕ್ಕೆ ಪ್ರವಾಸ ತೆರಳಿದ್ದಾರೆ. ದರ್ಶನ್​ಗೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ ಹಾಗೂ ಇನ್ನಿತರರು ಜೊತೆಯಾಗಿದ್ದಾರೆ.

author img

By

Published : Dec 19, 2020, 1:11 PM IST

Darshan and team
ಕೇರಳಕ್ಕೆ ಟ್ರಿಪ್ ಹೊರಟ ದರ್ಶನ್

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಕೆಲವು ದಿನಗಳಿಂದ ಟ್ರಿಪ್ ಮೂಡ್​​ನಲ್ಲಿದ್ದಾರೆ. ಇತ್ತೀಚೆಗಷ್ಟೇ ಕೊಡಗಿನ ಸುಂದರ ತಾಣಗಳಿಗೆ ಟ್ರಿಪ್ ಹೋಗಿಬಂದಿದ್ದ ನಟ ದರ್ಶನ್ ಹಾಗೂ ತಂಡ 3 ದಿನಗಳ ಹಿಂದೆ ಮತ್ತೆ ಬೈಕ್​​​ನಲ್ಲಿ ಚಾಮರಾಜನಗರದ ಬಂಡೀಪುರಕ್ಕೆ ಟ್ರಿಪ್ ಹೊರಟಿತ್ತು. ಅಲ್ಲಿಂದ ಕೂಡಾ ಅವರ ಟ್ರಿಪ್ ಮತ್ತೆ ಮುಂದುವರೆದಿದೆ.

ಕೇರಳಕ್ಕೆ ಟ್ರಿಪ್ ಹೊರಟ ದರ್ಶನ್ ಟೀಂ

ಇದನ್ನೂ ಓದಿ: ಅವರನ್ನೆಲ್ಲಾ ಶಕೀಲಾ ಕರೆಸಲಿಲ್ಲ ಎಂದರೆ ಮತ್ತ್ಯಾರು ಕರೆಸುತ್ತಾರೆ....?

ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಚಿಂತನೆಗೆ ಒತ್ತು ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡೀಪುರ ಭೇಟಿ ನಂತರ ಮೈಸೂರಿನ ತಿ. ‌ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರಂನಲ್ಲಿ ಸ್ನೇಹಿತರೊಂದಿಗೆ ತಂಗಿದ್ದರು. ಅಲ್ಲಿಂದ ಮತ್ತೆ ಎಲ್ಲರೂ ಕೇರಳಕ್ಕೆ ಟ್ರಿಪ್ ಹೊರಟಿದ್ದಾರೆ. ದರ್ಶನ್ ತಮ್ಮ ಸ್ನೇಹಿತರೊಂದಿಗೆ ಫಾರಂಹೌಸ್​​ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ಫಾರ್ಮ್​ಹೌಸ್ ಬಳಿ ಜಮಾಯಿಸಿದ್ದಾರೆ. ದರ್ಶನ್ ಕೂಡಾ ಅಭಿಮಾನಿಗಳಿಗೆ ನಿರಾಸೆ ಮಾಡದೆ ಹೊರ ಬಂದು ಎಲ್ಲರನ್ನೂ ಮಾತನಾಡಿಸಿದ್ದಾರೆ. ದರ್ಶನ್​​​​​​​​​​​​​ ಬೈಕ್ ರೈಡ್​​​ಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ನಿರ್ಮಾಪಕ ಉಮಾಪತಿ ಸೇರಿ 20 ಮಂದಿ ಗೆಳೆಯರು ಸಾಥ್ ನೀಡಿದ್ದಾರೆ. ಸಿನಿಮಾ ಜಂಜಾಟಗಳಿಂದ ಕೆಲವು ದಿನಗಳ ಕಾಲ ದೂರ ಉಳಿದಿರುವ ದರ್ಶನ್ ಪ್ರವಾಸ ಹೋದ ಕಡೆಯೆಲ್ಲಾ ಸಸಿಗಳನ್ನು ನೆಟ್ಟು ನೀರೆರೆಯುತ್ತಿದ್ದಾರೆ ಎನ್ನಲಾಗಿದೆ.

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಕೆಲವು ದಿನಗಳಿಂದ ಟ್ರಿಪ್ ಮೂಡ್​​ನಲ್ಲಿದ್ದಾರೆ. ಇತ್ತೀಚೆಗಷ್ಟೇ ಕೊಡಗಿನ ಸುಂದರ ತಾಣಗಳಿಗೆ ಟ್ರಿಪ್ ಹೋಗಿಬಂದಿದ್ದ ನಟ ದರ್ಶನ್ ಹಾಗೂ ತಂಡ 3 ದಿನಗಳ ಹಿಂದೆ ಮತ್ತೆ ಬೈಕ್​​​ನಲ್ಲಿ ಚಾಮರಾಜನಗರದ ಬಂಡೀಪುರಕ್ಕೆ ಟ್ರಿಪ್ ಹೊರಟಿತ್ತು. ಅಲ್ಲಿಂದ ಕೂಡಾ ಅವರ ಟ್ರಿಪ್ ಮತ್ತೆ ಮುಂದುವರೆದಿದೆ.

ಕೇರಳಕ್ಕೆ ಟ್ರಿಪ್ ಹೊರಟ ದರ್ಶನ್ ಟೀಂ

ಇದನ್ನೂ ಓದಿ: ಅವರನ್ನೆಲ್ಲಾ ಶಕೀಲಾ ಕರೆಸಲಿಲ್ಲ ಎಂದರೆ ಮತ್ತ್ಯಾರು ಕರೆಸುತ್ತಾರೆ....?

ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಚಿಂತನೆಗೆ ಒತ್ತು ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡೀಪುರ ಭೇಟಿ ನಂತರ ಮೈಸೂರಿನ ತಿ. ‌ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರಂನಲ್ಲಿ ಸ್ನೇಹಿತರೊಂದಿಗೆ ತಂಗಿದ್ದರು. ಅಲ್ಲಿಂದ ಮತ್ತೆ ಎಲ್ಲರೂ ಕೇರಳಕ್ಕೆ ಟ್ರಿಪ್ ಹೊರಟಿದ್ದಾರೆ. ದರ್ಶನ್ ತಮ್ಮ ಸ್ನೇಹಿತರೊಂದಿಗೆ ಫಾರಂಹೌಸ್​​ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ಫಾರ್ಮ್​ಹೌಸ್ ಬಳಿ ಜಮಾಯಿಸಿದ್ದಾರೆ. ದರ್ಶನ್ ಕೂಡಾ ಅಭಿಮಾನಿಗಳಿಗೆ ನಿರಾಸೆ ಮಾಡದೆ ಹೊರ ಬಂದು ಎಲ್ಲರನ್ನೂ ಮಾತನಾಡಿಸಿದ್ದಾರೆ. ದರ್ಶನ್​​​​​​​​​​​​​ ಬೈಕ್ ರೈಡ್​​​ಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ನಿರ್ಮಾಪಕ ಉಮಾಪತಿ ಸೇರಿ 20 ಮಂದಿ ಗೆಳೆಯರು ಸಾಥ್ ನೀಡಿದ್ದಾರೆ. ಸಿನಿಮಾ ಜಂಜಾಟಗಳಿಂದ ಕೆಲವು ದಿನಗಳ ಕಾಲ ದೂರ ಉಳಿದಿರುವ ದರ್ಶನ್ ಪ್ರವಾಸ ಹೋದ ಕಡೆಯೆಲ್ಲಾ ಸಸಿಗಳನ್ನು ನೆಟ್ಟು ನೀರೆರೆಯುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.