ಗ್ರೇಟರ್ ನೋಯ್ಡಾ: ಚೀನಾದ ವುಹಾನ್ ನಗರದಿಂದ ಶುರವಾದ ಮಾರಣಾಂತಿಕ ಕೊರೊನಾ ವೈರಾಣು ಸೋಂಕು ದೇಶಿಯ ವಾಹನೋದ್ಯಮದ ಮೇಲೂ ತನ್ನ ಕಬಂಧಬಾಹು ಹರಡಲಿದೆ ಎಂಬ ಆತಂಕವನ್ನು ಭಾರತೀಯ ವಾಹನ ಉದ್ಯಮಿಗಳನ್ನು ಕಾಡುತ್ತಿದೆ.
ಭಾರತೀಯ ವಾಹನಗಳ ತಯಾರಿಕ ಸಂಘಟನೆ (ಸಿಯಾಮ್), ಮುಂದಿನ ಎರಡು ದಿನಗಳಲ್ಲಿ ಚೀನಾದಿಂದ ಘಟಕ ಸರಬರಾಜಿನಲ್ಲಿ ಅಡೆತಡೆಗಳು ಉಂಟಾಗಬಹುದೇ ಎಂಬುದನ್ನು ತಿಳಿಯಲು ತನ್ನ ಸದಸ್ಯರಿಂದ ಮಾಹಿತಿ ಮತ್ತು ದತ್ತಾಂಶ ಸಂಗ್ರಹಿಸಲಿದೆ.
'ಇದರ ಬಗ್ಗೆ ಪ್ರತಿಕ್ರಿಯಿಸಲು ಇನ್ನೂ ಸ್ವಲ್ಪ ಸಮಯ ಬೇಕಿದೆ. ನಾನು ಹೇಳಬಹುದಾದ ಏಕೈಕ ವಿಷಯವೆಂದರೆ ಎದುರಾಗಲಿರುವ ಆತಂಕಗಳು ಏನೇನು ಎಂಬುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಇಂದು ಚೀನಾ (ಮಾರುಕಟ್ಟೆ) ತನ್ನ ಚೀನಿ ಹೊಸ ವರ್ಷದ ರಜಾದಿನಗಳಿಗೆ ತೆರೆದುಕೊಳ್ಳಬೇಕಿದ್ದ ದಿನ ಎಂದು ಸಿಯಾಮ್ ಮಹಾನಿರ್ದೇಶಕ ರಾಜೇಶ್ ಮೆನನ್ ಸುದ್ದಿಗಾರರಿಗೆ ತಿಳಿಸಿದರು.
ಮಾರಣಾಂತಿಕ ವೈರಸ್ ಹರಡಲು ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ ಪ್ರಾಂತ್ಯ ಒಂದು ಪ್ರಮುಖ ಆಟೋ-ಹಬ್ ತಾಣವಾಗಿದೆ. ಚೀನಾ ಬಹುತೇಕ ತನ್ನ ಸಾಗರೋತ್ತರ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ. ಸಹಜವಾಗಿಯೇ ಭಾರತದ ವಾಹನೋದ್ಯಮ ಕಳವಳಕ್ಕೆ ಇದುವೇ ಮೂಲ ಕಾರಣವಾಗಿದೆ.
ಪ್ರಭಾವ ಬೀರುವ ನಿಖರ ಸ್ವರೂಪ ಮತ್ತು ಸಂಭವನೀಯ ಪರಿಣಾಮಗಳ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತದೆ. ಆತಂಕಗಳು ಇವೆ ಎಂಬುದು ನಮಗೆ ಸ್ಪಷ್ಟವಾಗಿದೆ. ಸಮಸ್ಯೆ ಎಷ್ಟರ ಮಟ್ಟಿಗೆ ಇರುತ್ತದೆ, ಮುಂದಿನ ದಿನಗಳಲ್ಲಿ ನಾವು ತಿಳಿದುಕೊಳ್ಳುತ್ತೇವೆ ಎಂದರು.