ಕರ್ನಾಟಕ

karnataka

ETV Bharat / snippets

ಡಿಕೆಶಿ ಭೇಟಿಯಾದ ರೋಷನ್ ಬೇಗ್: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಕೇಸ್ ವಾಪಸ್‌ಗೆ ಮನವಿ

By ETV Bharat Karnataka Team

Published : 19 hours ago

ROSHAN BAIG DELEGATION MET DCM
ಡಿಸಿಎಂ ಭೇಟಿಯಾದ ರೋಷನ್ ಬೇಗ್ ನಿಯೋಗ (ETV Bharat)

ಬೆಂಗಳೂರು:ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ರೋಷನ್ ಬೇಗ್ ನೇತೃತ್ವದ ನಿಯೋಗ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣ ವಾಪಸ್‌ ಪಡೆಯುವಂತೆ ಮನವಿ ಸಲ್ಲಿಸಿದರು.

ಸದಾಶಿವನಗರ ನಿವಾಸದಲ್ಲಿ ಇಂದು ಭೇಟಿಯಾದ ಮಾಜಿ ಸಚಿವ ರೋಷನ್ ಬೇಗ್ ನೇತೃತ್ವದ ನಿಯೋಗ, ಹುಬ್ಬಳ್ಳಿ ಪ್ರಕರಣದಂತೆ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿದರು.

ಹಲವು ಅಮಾಯಕರ‌ ಮೇಲೆ ಕೇಸ್ ಹಾಕಲಾಗಿದೆ. ತಪ್ಪು‌ ಮಾಡದಿದ್ರೂ‌ ಅವರನ್ನು ಜೈಲಿಗೆ ಕಳಿಸಲಾಗಿದೆ. ನಿಜವಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಿ. ಆದರೆ, ಅಮಾಯಕರ ಮೇಲಿನ‌ ಕೇಸ್ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.

ಐಎಂಎ ಪ್ರಕರಣದ ಬಳಿಕ ಕಾಂಗ್ರೆಸ್​ನಿಂದ ದೂರ ಉಳಿದಿದ್ದ ರೋಷನ್ ಬೇಗ್ ಇದೀಗ ಡಿಕೆಶಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿತು. ಸಿದ್ದರಾಮಯ್ಯ ಹಾಗೂ ಕೆ.ಸಿ.ವೇಣುಗೋಪಾಲ್ ವಿರುದ್ಧ ಮಾತನಾಡಿದ ಬಳಿಕ ಪಕ್ಷದಿಂದ ಅವರು ಉಚ್ಛಾಟನೆಗೊಂಡಿದ್ದರು.

ABOUT THE AUTHOR

...view details