ಬೆಂಗಳೂರು: ಕುರಿ ಹಾಗೂ ಮೇಕೆಗಳನ್ನು ಕದ್ದು ಹೊರ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಂಧನೂರಿನ ಪರಶುರಾಮ, ಅಮರೇಶ್, ರಮೇಶ್, ಹುಲುಗಪ್ಪ, ವೆಂಕಟೇಶ್ ಹಾಗೂ ಈರಣ್ಣ ಬಂಧಿತರು. ಇವರಿಂದ 2.43 ಲಕ್ಷ ನಗದು, 29 ಕುರಿ ಹಾಗೂ ಮೇಕೆಗಳು ಹಾಗು ಕೃತ್ಯಕ್ಕೆ ಬಳಸುತ್ತಿದ್ದ 1 ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಹೊರವಲಯದ ಗ್ರಾಮಗಳಲ್ಲಿ ರೈತರು ಸಾಕಿರುವ ಕುರಿ, ಮೇಕೆಗಳನ್ನು ಕದ್ದೊಯ್ಯುತ್ತಿದ್ದ ಆರೋಪಿಗಳು ಅವುಗಳನ್ನು ಕೊಪ್ಪಳ, ಹೊಸಪೇಟೆ, ಬಳ್ಳಾರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಸೆಪ್ಟೆಂಬರ್ 15ರಂದು ರಾತ್ರಿ ದೊಡ್ಡಜಾಲದ ರೈತರೊಬ್ಬರ ಮನೆ ಬಳಿ ಬಂದಿದ್ದ ಆರೋಪಿಗಳು, 15 ಮೇಕೆಗಳನ್ನು ಕದ್ದಿದ್ದರು. ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಭದ್ರತೆಗಿದ್ದ ಕಚೇರಿಯಲ್ಲೇ ಕಳ್ಳತನ; ಸೆಕ್ಯುರಿಟಿ ಗಾರ್ಡ್ ಸೆರೆ