ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಪೊಲೀಸರು 9ನೇ ಆರೋಪಿಯಾಗಿರುವ ಆರ್.ಆರ್.ನಗರದ ನಿವಾಸಿ ಧನರಾಜ್, ಎ-3 ಪವನ್ ಸೇರಿದಂತೆ ಮೂವರು ಆರೋಪಿಗಳನ್ನ ದರ್ಶನ್ ಅವರ ಮನೆಗೆ ಕರೆದೊಯ್ದು ಒಂದು ಗಂಟೆ ಕಾಲ ಮಹಜರು ನಡೆಸಿದರು.
Published : Jun 18, 2024, 7:20 PM IST
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೂವರು ಆರೋಪಿಗಳನ್ನು ದರ್ಶನ್ ಮನೆಗೆ ಕರೆತಂದು ಮಹಜರು - renukaswamy murder case
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಇಂದು ಪೊಲೀಸರು 9ನೇ ಆರೋಪಿಯಾಗಿರುವ ಆರ್.ಆರ್. ನಗರದ ನಿವಾಸಿ ಧನರಾಜ್, 3ನೇ ಆರೋಪಿ ಪವನ್ ಸೇರಿದಂತೆ ಮೂವರನ್ನು ದರ್ಶನ್ ಮನೆಗೆ ಕರೆದೊಯ್ದು ಒಂದು ಗಂಟೆ ಕಾಲ ಮಹಜರು ನಡೆಸಿದರು.
ಮೂವರು ಆರೋಪಿಗಳನ್ನು ದರ್ಶನ್ ಮನೆಗೆ ಕರೆತಂದು ಮಹಜರು (ETV Bharat)
ಧನರಾಜ್ ಸೇರಿದಂತೆ ಆರೋಪಿಗಳು ಕೃತ್ಯದ ದಿನ ಬಳಸಿದ್ದ ಮೂರು ದ್ವಿಚಕ್ರವಾಹಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳಿಕ ಧನರಾಜ್ನನ್ನು ಪಟ್ಟಣಗೆರೆಯ ಶೆಡ್ಗೆ ಕರೆದೊಯ್ದು ಮಹಜರಿಗೆ ಒಳಪಡಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.