ETV Bharat / health

ವಿಶ್ವ ಹೃದಯ ದಿನ: ಹೃದಯಾಘಾತಕ್ಕೆ ಕಾರಣಗಳೇನು? ಹಾರ್ಟ್​ ಅಟ್ಯಾಕ್​ಗೆ ಯಾವ ಚಿಕಿತ್ಸೆ ನೀಡಲಾಗುತ್ತೆ ಗೊತ್ತಾ? - World Heart Day 2024

author img

By ETV Bharat Karnataka Team

Published : 2 hours ago

World Heart Day 2024: ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಜನರಿಗೆ ಹೃದಯದ ಮಹತ್ವ ತಿಳಿಸಲು ಹಾಗೂ ಹೃದ್ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿಯಲ್ಲಿ ಪ್ರತಿವರ್ಷ ಸೆ.29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.

World Heart Day  World Heart Day 2024  heart attack causes  heart attack treatment
ವಿಶ್ವ ಹೃದಯ ದಿನ (ETV Bharat)

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ವಯಸ್ಸಿನ ಮಿತಿ ಇಲ್ಲದೇ ವಯಸ್ಕರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳು, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರೆ, ಹಲವರಿಗೆ ಹೃದಯದ ಕಾಳಜಿ ಮಹತ್ವದ ಅರಿವಿಲ್ಲ. ಹೃದ್ರೋಗಗಳ ಬಗ್ಗೆ ಜನರಲ್ಲಿ ಅರಿವು ಮತ್ತು ಜ್ಞಾನವು ಕಡಿಮೆ ಇದೆ. ಈ ನಿಟ್ಟಿಯಲ್ಲಿ ಜನರಿಗೆ ಹೃದಯದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು (World Heart Day 2024) ಆಚರಿಸಲಾಗುತ್ತದೆ.

ಅಧ್ಯಯನಗಳ ಪ್ರಕಾರ, ಭಾರತದಲ್ಲಿಯೇ ಅಂದಾಜು 8 ರಿಂದ 10 ಮಿಲಿಯನ್ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಈ ಹೃದಯಾಘಾತವಾದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಳು ಹಾಗೂ ಇದಕ್ಕೆ ನೀಡುವ ಔಷಧಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಹೃದಯಾಘಾತವಾದ ಸಂದರ್ಭದಲ್ಲಿ ಅಥವಾ ಹೃದಯ ಸಂಬಂಧಿ ಕಾಯಿಲೆಗೆ ಯಾವ ರೀತಿಯ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಲಾಗುತ್ತದೆ ಎಂಬುದರ ಕುರಿತು ವೈದ್ಯರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಹೃದಯಾಘಾತವಾಗಲು ಕಾರಣಗಳೇನು?: ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯಾಘಾತ ಸಂಭವಿಸಲಿದೆ. ಇದು ಆಯಾಸ, ಉಸಿರಾಟದ ತೊಂದರೆ ಸೇರಿದಂತೆ ಇತರ ಲಕ್ಷಣಗಳಿಗೆ ಕಾರಣವಾಗುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಹೃದಯಾಘಾತವು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪರಿಧಮನಿ, ಅಪಧಮನಿ ಕಾಯಿಲೆಯ ಪ್ರಮಾಣದಿಂದ ಎನ್ನಲಾಗುತ್ತಿದೆ. ಹೃದಯಾಘಾತವಾದ ಸಂದರ್ಭದಲ್ಲಿ ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಿದರೆ ಬದುಕುಳಿಸುವ ಪ್ರಮಾಣ ಹೆಚ್ಚು ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಸಮಾಲೋಚಕ ಹೃದ್ರೋಗ ವಿಭಾಗದ ಡಾ. ರಾಜ್‌ಪಾಲ್ ಸಿಂಗ್ ಆರ್.ಎಲ್.

ಹೃದಯ ವೈಫಲ್ಯಕ್ಕೆ ಯಾವೆಲ್ಲಾ ಔಷಧಗಳು ಲಭ್ಯವಿದೆ?: ಹೃದಯಾಘಾತವನ್ನು ಔಷಧಗಳ ಮೂಲಕವೂ ತಡೆಯಬಹುದಾಗಿದೆ. ಸಾಮಾನ್ಯವಾಗಿ ಸೂಚಿಸಲಾದ ಔಷಧಗಳಲ್ಲಿ ಆಂಜಿಯೋಟೆನ್ಸಿನ್- ಪರಿವರ್ತಿಸುವ ಕಿಣ್ವ (ACE) ಪ್ರತಿರೋಧಕಗಳು ಮತ್ತು ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು (ARBs) ಸೇರಿವೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಮತ್ತು ಹೃದಯದ ಕೆಲಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತರ ಅಗತ್ಯ ಔಷಧಗಳಲ್ಲಿ ಪ್ರಮುಖವಾಗಿ, ಬೀಟಾ- ಬ್ಲಾಕರ್‌ಗಳು ಸೇರಿವೆ. ಇದು ಹೃದಯ ಬಡಿತವನ್ನು ಕಡಿಮೆ ಮಾಡುವ ಜೊತೆಗೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.

ಇತ್ತೀಚೆಗೆ, ಡಪಾಗ್ಲಿಫ್ಲೋಜಿನ್‌ನಂತಹ ಸೋಡಿಯಂ- ಗ್ಲೂಕೋಸ್ ಸಹ-ಟ್ರಾನ್ಸ್‌ಪೋರ್ಟರ್ 2 (SGLT2) ಪ್ರತಿರೋಧಕಗಳ ಪರಿಚಯದಿಂದಾಗಿ, ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯ ವೈಫಲ್ಯದ ರೋಗಿಗಳಿಗೆ, ವಿಶೇಷವಾಗಿ ಮಧುಮೇಹ ಹೊಂದಿರುವವರಿಗೆ ಉತ್ತಮ ಫಲಿತಾಂಶ ನೀಡುತ್ತಿದೆ. ಮತ್ತೊಂದು ನವೀನ ಔಷಧವೆಂದರೆ, ವೆರಿಸಿಗ್ವಾಟ್, ಕರಗಬಲ್ಲ ಗ್ವಾನಿಲೇಟ್ ಸೈಕ್ಲೇಸ್ ಸ್ಟಿಮ್ಯುಲೇಟರ್, ದೀರ್ಘಕಾಲದ ಹೃದಯ ವೈಫಲ್ಯ ಹೊಂದಿರುವವರಿಗೆ ಸಂಜೀವಿನಿಯಾಗಿದೆ. ARNI (ಆಂಜಿಯೋಟೆನ್ಸಿನ್ ರಿಸೆಪ್ಟರ್-ನೆಪ್ರಿಲಿಸಿನ್ ಇನ್ಹಿಬಿಟರ್) ಔಷಧಗಳು ಹೃದಯಾಘಾತವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಾವು ಸಂಭಿಸುವ ಅಪಾಯವೂ ಕಡಿಮೆಯಾಗಲಿದೆ.

ಹೃದಯ ವೈಫಲ್ಯದ ಚಿಕಿತ್ಸೆ ಹೆಚ್ಚಿಸುವ ವೈದ್ಯಕೀಯ ಸಾಧನಗಳು: ಔಷಧಗಳ ಜೊತೆಗೆ, ವಿವಿಧ ವೈದ್ಯಕೀಯ ಸಾಧನಗಳು ಹೃದಯಾಘಾತವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಪೇಸ್‌ಮೇಕರ್‌ಗಳು ಮತ್ತು ಅಳವಡಿಸಬಹುದಾದ ಕಾರ್ಡಿಯೋವರ್ಟರ್- ಡಿಫಿಬ್ರಿಲೇಟರ್‌ಗಳನ್ನು (ICDs) ಸಾಮಾನ್ಯವಾಗಿ ಅಸಹಜ ಹೃದಯದ ಲಯವನ್ನು ನಿರ್ವಹಿಸಲು ಹಾಗೂ ಹಠಾತ್ ಹೃದಯದ ಮರಣವನ್ನು ತಡೆಯಲು ಬಳಸಲಾಗುತ್ತದೆ.

ಬೈವೆಂಟ್ರಿಕ್ಯುಲರ್ ಪೇಸ್‌ಮೇಕರ್‌ಗಳು ಹೃದಯ ಸಂಕೋಚನಗಳ ಸಮನ್ವಯವನ್ನು ಸುಧಾರಿಸುತ್ತದೆ. ಹೃದಯವು ರಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಹಾಯ ಮಾಡಲು ಎಡ ಕುಹರದ ಸಹಾಯಕ ಸಾಧನಗಳನ್ನು (LVADs) ಅಳವಡಿಸಬಹುದು. ಈ ಸಾಧನಗಳು ಹೃದಯ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಉಪಯುಕ್ತವಾಗಿವೆ. ಇನ್ನು, ಹೃದಯ ಕಸಿ, ಅಂತಿಮ ಹಂತದ ಹೃದಯ ವೈಫಲ್ಯ, ಜನ್ಮಜಾತ ಹೃದಯ ಕಾಯಿಲೆ ಮತ್ತು ತೀವ್ರ ಪರಿಧಮನಿಯ ಕಾಯಿಲೆ ಇರುವ ರೋಗಿಗಳಿಗೆ ಜೀವಸೆಲೆಯನ್ನು ನೀಡುತ್ತವೆ.

ಹೃದಯ ವೈಫಲ್ಯದ ಆರೈಕೆಯಲ್ಲಿನ ಸವಾಲುಗಳೇನು?: ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ಹೃದಯ ವೈಫಲ್ಯದ ಚಿಕಿತ್ಸೆಗಳಿಗೆ ಸುಧಾರಿತ ತಂತ್ರಜ್ಞಾನ ಅಳವಡಿಕೆ ಪ್ರಯತ್ನ ನಡೆಯುತ್ತಲೇ ಇದೆ. ಜೆನೆರಿಕ್ ಔಷಧಿಗಳ ಲಭ್ಯತೆಯು ಅನೇಕ ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ. ಹೆಚ್ಚುವರಿಯಾಗಿ, ರೋಗಿಗಳ ಶಿಕ್ಷಣ, ಹೃದಯ ಪುನರ್ವಸತಿ ಮತ್ತು ಆರೋಗ್ಯ ನೀತಿ ಸುಧಾರಣೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳು ಹೃದಯ ವೈಫಲ್ಯ ನಿರ್ವಹಣೆಯಲ್ಲಿ ಫಲಿತಾಂಶಗಳನ್ನು ಸುಧಾರಿಸಲು ನಿರ್ಣಾಯಕವಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ವಯಸ್ಸಿನ ಮಿತಿ ಇಲ್ಲದೇ ವಯಸ್ಕರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳು, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರೆ, ಹಲವರಿಗೆ ಹೃದಯದ ಕಾಳಜಿ ಮಹತ್ವದ ಅರಿವಿಲ್ಲ. ಹೃದ್ರೋಗಗಳ ಬಗ್ಗೆ ಜನರಲ್ಲಿ ಅರಿವು ಮತ್ತು ಜ್ಞಾನವು ಕಡಿಮೆ ಇದೆ. ಈ ನಿಟ್ಟಿಯಲ್ಲಿ ಜನರಿಗೆ ಹೃದಯದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು (World Heart Day 2024) ಆಚರಿಸಲಾಗುತ್ತದೆ.

ಅಧ್ಯಯನಗಳ ಪ್ರಕಾರ, ಭಾರತದಲ್ಲಿಯೇ ಅಂದಾಜು 8 ರಿಂದ 10 ಮಿಲಿಯನ್ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಈ ಹೃದಯಾಘಾತವಾದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಳು ಹಾಗೂ ಇದಕ್ಕೆ ನೀಡುವ ಔಷಧಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಹೃದಯಾಘಾತವಾದ ಸಂದರ್ಭದಲ್ಲಿ ಅಥವಾ ಹೃದಯ ಸಂಬಂಧಿ ಕಾಯಿಲೆಗೆ ಯಾವ ರೀತಿಯ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಲಾಗುತ್ತದೆ ಎಂಬುದರ ಕುರಿತು ವೈದ್ಯರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಹೃದಯಾಘಾತವಾಗಲು ಕಾರಣಗಳೇನು?: ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯಾಘಾತ ಸಂಭವಿಸಲಿದೆ. ಇದು ಆಯಾಸ, ಉಸಿರಾಟದ ತೊಂದರೆ ಸೇರಿದಂತೆ ಇತರ ಲಕ್ಷಣಗಳಿಗೆ ಕಾರಣವಾಗುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಹೃದಯಾಘಾತವು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪರಿಧಮನಿ, ಅಪಧಮನಿ ಕಾಯಿಲೆಯ ಪ್ರಮಾಣದಿಂದ ಎನ್ನಲಾಗುತ್ತಿದೆ. ಹೃದಯಾಘಾತವಾದ ಸಂದರ್ಭದಲ್ಲಿ ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಿದರೆ ಬದುಕುಳಿಸುವ ಪ್ರಮಾಣ ಹೆಚ್ಚು ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಸಮಾಲೋಚಕ ಹೃದ್ರೋಗ ವಿಭಾಗದ ಡಾ. ರಾಜ್‌ಪಾಲ್ ಸಿಂಗ್ ಆರ್.ಎಲ್.

ಹೃದಯ ವೈಫಲ್ಯಕ್ಕೆ ಯಾವೆಲ್ಲಾ ಔಷಧಗಳು ಲಭ್ಯವಿದೆ?: ಹೃದಯಾಘಾತವನ್ನು ಔಷಧಗಳ ಮೂಲಕವೂ ತಡೆಯಬಹುದಾಗಿದೆ. ಸಾಮಾನ್ಯವಾಗಿ ಸೂಚಿಸಲಾದ ಔಷಧಗಳಲ್ಲಿ ಆಂಜಿಯೋಟೆನ್ಸಿನ್- ಪರಿವರ್ತಿಸುವ ಕಿಣ್ವ (ACE) ಪ್ರತಿರೋಧಕಗಳು ಮತ್ತು ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು (ARBs) ಸೇರಿವೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಮತ್ತು ಹೃದಯದ ಕೆಲಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತರ ಅಗತ್ಯ ಔಷಧಗಳಲ್ಲಿ ಪ್ರಮುಖವಾಗಿ, ಬೀಟಾ- ಬ್ಲಾಕರ್‌ಗಳು ಸೇರಿವೆ. ಇದು ಹೃದಯ ಬಡಿತವನ್ನು ಕಡಿಮೆ ಮಾಡುವ ಜೊತೆಗೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.

ಇತ್ತೀಚೆಗೆ, ಡಪಾಗ್ಲಿಫ್ಲೋಜಿನ್‌ನಂತಹ ಸೋಡಿಯಂ- ಗ್ಲೂಕೋಸ್ ಸಹ-ಟ್ರಾನ್ಸ್‌ಪೋರ್ಟರ್ 2 (SGLT2) ಪ್ರತಿರೋಧಕಗಳ ಪರಿಚಯದಿಂದಾಗಿ, ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯ ವೈಫಲ್ಯದ ರೋಗಿಗಳಿಗೆ, ವಿಶೇಷವಾಗಿ ಮಧುಮೇಹ ಹೊಂದಿರುವವರಿಗೆ ಉತ್ತಮ ಫಲಿತಾಂಶ ನೀಡುತ್ತಿದೆ. ಮತ್ತೊಂದು ನವೀನ ಔಷಧವೆಂದರೆ, ವೆರಿಸಿಗ್ವಾಟ್, ಕರಗಬಲ್ಲ ಗ್ವಾನಿಲೇಟ್ ಸೈಕ್ಲೇಸ್ ಸ್ಟಿಮ್ಯುಲೇಟರ್, ದೀರ್ಘಕಾಲದ ಹೃದಯ ವೈಫಲ್ಯ ಹೊಂದಿರುವವರಿಗೆ ಸಂಜೀವಿನಿಯಾಗಿದೆ. ARNI (ಆಂಜಿಯೋಟೆನ್ಸಿನ್ ರಿಸೆಪ್ಟರ್-ನೆಪ್ರಿಲಿಸಿನ್ ಇನ್ಹಿಬಿಟರ್) ಔಷಧಗಳು ಹೃದಯಾಘಾತವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಾವು ಸಂಭಿಸುವ ಅಪಾಯವೂ ಕಡಿಮೆಯಾಗಲಿದೆ.

ಹೃದಯ ವೈಫಲ್ಯದ ಚಿಕಿತ್ಸೆ ಹೆಚ್ಚಿಸುವ ವೈದ್ಯಕೀಯ ಸಾಧನಗಳು: ಔಷಧಗಳ ಜೊತೆಗೆ, ವಿವಿಧ ವೈದ್ಯಕೀಯ ಸಾಧನಗಳು ಹೃದಯಾಘಾತವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಪೇಸ್‌ಮೇಕರ್‌ಗಳು ಮತ್ತು ಅಳವಡಿಸಬಹುದಾದ ಕಾರ್ಡಿಯೋವರ್ಟರ್- ಡಿಫಿಬ್ರಿಲೇಟರ್‌ಗಳನ್ನು (ICDs) ಸಾಮಾನ್ಯವಾಗಿ ಅಸಹಜ ಹೃದಯದ ಲಯವನ್ನು ನಿರ್ವಹಿಸಲು ಹಾಗೂ ಹಠಾತ್ ಹೃದಯದ ಮರಣವನ್ನು ತಡೆಯಲು ಬಳಸಲಾಗುತ್ತದೆ.

ಬೈವೆಂಟ್ರಿಕ್ಯುಲರ್ ಪೇಸ್‌ಮೇಕರ್‌ಗಳು ಹೃದಯ ಸಂಕೋಚನಗಳ ಸಮನ್ವಯವನ್ನು ಸುಧಾರಿಸುತ್ತದೆ. ಹೃದಯವು ರಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಹಾಯ ಮಾಡಲು ಎಡ ಕುಹರದ ಸಹಾಯಕ ಸಾಧನಗಳನ್ನು (LVADs) ಅಳವಡಿಸಬಹುದು. ಈ ಸಾಧನಗಳು ಹೃದಯ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಉಪಯುಕ್ತವಾಗಿವೆ. ಇನ್ನು, ಹೃದಯ ಕಸಿ, ಅಂತಿಮ ಹಂತದ ಹೃದಯ ವೈಫಲ್ಯ, ಜನ್ಮಜಾತ ಹೃದಯ ಕಾಯಿಲೆ ಮತ್ತು ತೀವ್ರ ಪರಿಧಮನಿಯ ಕಾಯಿಲೆ ಇರುವ ರೋಗಿಗಳಿಗೆ ಜೀವಸೆಲೆಯನ್ನು ನೀಡುತ್ತವೆ.

ಹೃದಯ ವೈಫಲ್ಯದ ಆರೈಕೆಯಲ್ಲಿನ ಸವಾಲುಗಳೇನು?: ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ಹೃದಯ ವೈಫಲ್ಯದ ಚಿಕಿತ್ಸೆಗಳಿಗೆ ಸುಧಾರಿತ ತಂತ್ರಜ್ಞಾನ ಅಳವಡಿಕೆ ಪ್ರಯತ್ನ ನಡೆಯುತ್ತಲೇ ಇದೆ. ಜೆನೆರಿಕ್ ಔಷಧಿಗಳ ಲಭ್ಯತೆಯು ಅನೇಕ ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ. ಹೆಚ್ಚುವರಿಯಾಗಿ, ರೋಗಿಗಳ ಶಿಕ್ಷಣ, ಹೃದಯ ಪುನರ್ವಸತಿ ಮತ್ತು ಆರೋಗ್ಯ ನೀತಿ ಸುಧಾರಣೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳು ಹೃದಯ ವೈಫಲ್ಯ ನಿರ್ವಹಣೆಯಲ್ಲಿ ಫಲಿತಾಂಶಗಳನ್ನು ಸುಧಾರಿಸಲು ನಿರ್ಣಾಯಕವಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.