ಕರ್ನಾಟಕ

karnataka

ಟಿ20 ವರ್ಲ್ಡ್​ಕಪ್​ ಚಾಂಪಿಯನ್​ ಆಗಿ ಇತಿಹಾಸ ಬರೆದ ಟೀಂ ಇಂಡಿಯಾ! - INDIA CREATES HISTORY

By ETV Bharat Karnataka Team

Published : Jun 30, 2024, 2:03 AM IST

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತೀಯ ತಂಡದ ಸಾಂಘಿಕ ಹೋರಾಟ ಎದ್ದು ಕಂಡಿತು. ರಾಹುಲ್ ದ್ರಾವಿಡ್​ ಮಾರ್ಗದರ್ಶನ, ರೋಹಿತ್​ ನಾಯಕತ್ವ. ಕೊನೆ ಪಂದ್ಯದಲ್ಲಿ ಕೊಹ್ಲಿ ಪುಟಿದೆದ್ದಿದ್ದು ಗಮನ ಸೆಳೆಯಿತು. ಇನ್ನು ಬುಮ್ರಾ, ಅರ್ಷದೀಪ್​, ಅಕ್ಷರ್​ ಪಟೇಲ್​, ಹಾರ್ದಿಕ್ ಪಾಂಡ್ಯ ಹೀಗೆ ಪ್ರತಿಯೊಬ್ಬರು ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

india-creates-history-becomes-t20-world-champions
ಟಿ20 ವರ್ಲ್ಡ್​ ಕಪ್​ ಚಾಂಪಿಯನ್​ ಆಗಿ ಇತಿಹಾಸ ಬರೆದ ಟೀಂ ಇಂಡಿಯಾ! (AP)

ಬಾರ್ಬಡೋಸ್: ಹದಿನೇಳು ವರ್ಷಗಳು - ಮೂವರು ನಾಯಕರು ಮತ್ತು ಒಂದು ಶತಕೋಟಿಗೂ ಹೆಚ್ಚು ಜನರ ಪ್ರಾರ್ಥನೆಗಳ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತವು T20 ವಿಶ್ವಕಪ್ ಎಂಬ ಪ್ರಶಸ್ತಿಯ ಗರಿಯನ್ನು ತನ್ನ ಕಿರೀಟಕ್ಕೆ ಸಿಕ್ಕಿಸಿಕೊಂಡಿದೆ.

ಇದೊಂದು ಅವಿಸ್ಮರಣೀಯ ಕ್ಷಣವಾಗಿತ್ತು. ಟೀಂ ಇಂಡಿಯಾದ ಪ್ರತಿಯೊಬ್ಬರೂ ನೀಡಿದ ಅಸೈನ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ್ದು ಕಂಡು ಬಂತು. ಫೈನಲ್‌ನಲ್ಲಿ ವಿರಾಟ್ ಕೊಹ್ಲಿ, ಸೆಮಿಫೈನಲ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಅದ್ಬುತ ಪ್ರದರ್ಶನ ತೋರಿಸುವ ಮೂಲಕ ತಂಡದ ಯಶಸ್ಸಿಗೆ ಕಾರಣರಾದರು.

ಇನ್ನು ರೋಹಿತ್​ ಶರ್ಮಾ ಹಾಗೂ ರಾಹುಲ್​ ದ್ರಾವಿಡ್​ ತಂಡವನ್ನು ಅತ್ಯುತ್ತಮವಾಗಿ ನಿರ್ವಹಿಸಿ ಈ ಬಾರಿ ಕಪ್​ ಕೈ ತಪ್ಪದಂತೆ ಯೋಜನೆ ರೂಪಿಸಿ ಅಂತಿಮವಾಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಇದರ ಹೊರತಾಗಿ ವಿಶ್ವದಲ್ಲೇ ಅತ್ಯುತ್ತಮವಾಗಿ ಹೊರಹೊಮ್ಮಿದ ಬೌಲಿಂಗ್ ಪಡೆಯನ್ನು ಟೀಂ ಇಂಡಿಯಾ ಇದೀಗ ಹೊಂದಿದೆ. ಬುಮ್ರಾ ಅವರಂತಹ ವೇಗಿಗಳನ್ನು ಸೃಷ್ಟಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಪಿಚ್​​​​​​ ಗಳಲ್ಲೂ ಭಾರತ ತಂಡ ಶ್ರೇಷ್ಠ ಆಟವನ್ನು ಆಡಿದೆ. ಅಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳುವಂತೆ ತಂಡವನ್ನು ರೂಪಿಸಿಕೊಂಡಿದ್ದು ಟೀಂ ಇಂಡಿಯಾಕ್ಕೆ ಪ್ಲಸ್​ ಪಾಯಿಂಟ್​ ಆಯಿತು.

ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಕಠಿಣ ಪರಿಶ್ರಮ, ಬದ್ಧತೆ,ಶಿಸ್ತು ಹಾಗೂ ಪಂದ್ಯ ಬಿಟ್ಟುಕೊಡದಿರುವ ಛಲ ಭಾರತೀಯ ತಂಡದಲ್ಲಿ ಕಂಡು ಬಂತು.

ಗಮನ ಸೆಳೆದ ಸೂರ್ಯಕುಮಾರ್ ಯಾದವ್​ ಕ್ಯಾಚ್​: ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ಇವತ್ತು ಸಂಭ್ರಮದ ಹೊನಲು ಕಂಡು ಬಂತು.ಸೂರ್ಯ ಕುಮಾರ್ ಯಾದವ್ ಅವರು ನಿರ್ಣಾಯಕ ಸಮಯದಲ್ಲಿ ಡೇವಿಡ್ ಮಿಲ್ಲರ್ ಅವರ ಕ್ಯಾಚ್​ ಪಡೆದುಕೊಂಡಿದ್ದು ಮರೆಯಲಾದ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಕ್ಯಾಚ್​ ಪಂದ್ಯದ ದಿಕ್ಕನ್ನೇ ಬದಲಾಗುವಂತೆ ಮಾಡಿದ್ದು ಸುಳ್ಳಲ್ಲ.

ಫೈನಲ್‌ನ ಕೊನೆಯ ಓವರ್​ ನಲ್ಲಿ ಶರ್ಮಾ ಹಾಗೂ ರಾಹುಲ್​ ದ್ರಾವಿಡ್​ ಅವರ ಸಂಯೋಜನೆಯ ಪ್ಲಾನಿಂಗ್​ ವರ್ಕೌಟ್​ ಆದಂತೆ ಕಂಡು ಬಂತು. ಎಂದಿಗೂ ಆತ್ಮ ವಿಶ್ವಾಸ ಮತ್ತು ನಿರಂತರ ಪ್ರಯತ್ನಕ್ಕೆ ವಿರಾಮ ನೀಡಬೇಡಿ. ಹಾರ್ದಿಕ್ ಅವರ ಕೊನೆಯ ಓವರ್​ ಬೌಲಿಂಗ್​​ ಗೆ ಸೆಲ್ಯೂಟ್, ಸೂರ್ಯ ಅವರ ಹಾಪ್, ಸ್ಕಿಪ್ ಮತ್ತು ಜಂಪ್ ಕ್ಯಾಚ್, ಶರ್ಮಾ ಅವರ ನಿಸ್ವಾರ್ಥ ನಾಯಕತ್ವ, ಕೋಹ್ಲಿ ಮೋಸ್ಟ್ ವಾಂಟೆಡ್ ಫಿಫ್ಟಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಇದನ್ನು ಓದಿ:ಐಸಿಸಿ ಟ್ರೋಪಿ ಬರ ನೀಗಿಸಿಕೊಂಡ ಟೀಂ ಇಂಡಿಯಾ: ಕೊಹ್ಲಿ ಪಂದ್ಯ ಪುರುಷ, ಬುಮ್ರಾಗೆ ಸರಣಿ ಶ್ರೇಷ್ಠ ಪುರಸ್ಕಾರ - INDIA WIN T20 World Cup 2024

ABOUT THE AUTHOR

...view details