ಕರ್ನಾಟಕ

karnataka

ದೆಹಲಿ ಮುಂದಿನ ಸಿಎಂ ಅತಿಶಿ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಸ್ವಾತಿ ಮಲಿವಾಲ್ - allegation on Delhi next CM Atishi

By ETV Bharat Karnataka Team

Published : Sep 18, 2024, 3:43 PM IST

ಸಂಸತ್ ದಾಳಿಯ ಆರೋಪಿ ಸೈಯದ್ ಅಬ್ದುಲ್ ರೆಹಮಾನ್ ಗಿಲಾನಿಯೊಂದಿಗೆ ಮುಂದಿನ ದೆಹಲಿ ಸಿಎಂ ಆಗುತ್ತಿರುವ ಅತಿಶಿಯ ಪೋಷಕರು ಆಳವಾದ ಸಂಬಂಧ ಹೊಂದಿದ್ದರು ಎಂದು ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

swati-maliwal-claims-aatishis-parents-had-relations-with-sar-geelani
ದೆಹಲಿ ಮುಂದಿನ ಸಿಎಂ ಅತಿಶಿ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಸ್ವಾತಿ ಮಲಿವಾಲ್ (ETV Bharat)

ನವದೆಹಲಿ:ಕೇಜ್ರಿವಾಲ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಅತಿಶಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗೆಗಿನ ಘೋಷಣೆಯ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಗಂಭೀರವಾದ ಮತ್ತೊಂದು ಆರೋಪ ಮಾಡಿದ್ದಾರೆ. ಇಂದು ಕೂಡ ಅತಿಶಿ ಪೋಷಕರ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ ಹ್ಯಾಂಡಲ್​​ನಲ್ಲಿ ಈ ಬಗ್ಗೆ ಪೋಸ್ಟ್​ ವೊಂದನ್ನು ಹಾಕಿದ್ದಾರೆ. 'ಅತಿಶಿ ಮರ್ಲೆನಾ ಅವರ ಪೋಷಕರು ಎಸ್‌ಎಆರ್ ಗಿಲಾನಿ ಅವರೊಂದಿಗೆ ಆಳವಾದ ಸಂಬಂಧ ಹೊಂದಿದ್ದರು. ಸಂಸತ್ತಿನ ಮೇಲಿನ ದಾಳಿಯಲ್ಲಿ ಗಿಲಾನಿ ಕೈವಾಡವಿದೆ ಎಂಬ ಆರೋಪಗಳಿದ್ದವು ಎಂಬ ಅಂಶವನ್ನು ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.

ಮಲಿವಾಲ್ ಎಕ್ಸ್​​ ಹ್ಯಾಂಡಲ್​ನಲ್ಲಿ ಹೇಳಿರುವುದಿಷ್ಟು:2016ರಲ್ಲಿ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಅಫ್ಜಲ್ ಗುರು ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಅತಿಶಿಯ ಪೋಷಕರು ಗಿಲಾನಿಯೊಂದಿಗೆ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದಲ್ಲಿ “ಒಬ್ಬ ಅಫ್ಜಲ್‌ನನ್ನು ಕೊಂದರೆ ಲಕ್ಷ ಜನ ಹುಟ್ಟುತ್ತಾರೆ, ಕಾಶ್ಮೀರ ಸ್ವಾತಂತ್ರ್ಯ ಬೇಡುತ್ತದೆ” ಎಂಬ ಘೋಷವಾಕ್ಯಗಳನ್ನು ಹಾಕಲಾಗಿತ್ತು ಎಂದು ಅವರು ತಮ್ಮ ಎಕ್ಸ್​​ ಹ್ಯಾಂಡಲ್​ ಬರಹದಲ್ಲಿ ಹೇಳಿದ್ದಾರೆ. ತಮ್ಮ ಟ್ವೀಟ್​ನ ಕೊನೆಯಲ್ಲಿ 'ದೇವರೇ ದೆಹಲಿಯನ್ನು ಕಾಪಾಡು!' ಎಂದು ಕೂಡಾ ಬರೆದುಕೊಂಡಿದ್ದಾರೆ.

"ಇಂದು ದೆಹಲಿಗೆ ಅತ್ಯಂತ ದುಃಖದ ದಿನ, ಮಹಿಳೆಯೊಬ್ಬರು ದೆಹಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಆದರೆ ಅವರ ಕುಟುಂಬವು ಭಯೋತ್ಪಾದಕ ಅಫ್ಜಲ್ ಗುರುವನ್ನು ನೇಣುಗಂಬದಿಂದ ರಕ್ಷಿಸಲು ಸುದೀರ್ಘ ಹೋರಾಟ ನಡೆಸಿತ್ತು. ಆಕೆಯ ಪೋಷಕರು ಭಯೋತ್ಪಾದಕ ಅಫ್ಜಲ್ ಗುರುವನ್ನು ರಕ್ಷಿಸುವಂತೆ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು. ಅತಿಶಿ ಪೋಷಕರ ಪ್ರಕಾರ, ಅಫ್ಜಲ್ ಗುರುವನ್ನು ರಾಜಕೀಯ ಪಿತೂರಿಯಲ್ಲಿ ಸಿಲುಕಿಸಲಾಗಿದೆ, ಆದರೆ ಈ ವಿಷಯವು ದೇಶದ ಭದ್ರತೆಗೆ ಸಂಬಂಧಿಸಿದೆ! ” ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಎಎಪಿ ಕೊಟ್ಟ ಕೌಂಟರ್​ ಹೀಗಿದೆ: ಮಲಿವಾಲ್​ ಈ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ಶಾಸಕ ದಿಲೀಪ್ ಪಾಂಡೆ, ಸ್ವಾತಿ ಮಲಿವಾಲ್ ಎಎಪಿಯಿಂದ ರಾಜ್ಯಸಭೆಗೆ ಆಯ್ಕೆ ಹೋಗಿದ್ದಾರೆ. ಆದರೆ ಬಿಜೆಪಿಯ ಸ್ಕ್ರಿಪ್ಟ್ ಓದುತ್ತಿದ್ದಾರೆ. ಅವರು ಈಗ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಪಡೆಯಲು ಪ್ರಯತ್ನಿಸಬೇಕಿದೆ. ಅವರಿಗೆ ಸ್ವಲ್ಪವಾದರೂ ನಾಚಿಕೆ ಮತ್ತು ನೈತಿಕತೆ ಅನ್ನುವುದು ಉಳಿದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ:ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತರಿರುವ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿಗೆ ಸ್ಥಾನ: ಬೆಂಗಳೂರಿಗೂ ಈ ಲಿಸ್ಟ್​​ನಲ್ಲಿದೆ ಮಾನ್ಯತೆ! - Mumbai Delhi Bangalore

ABOUT THE AUTHOR

...view details