ಕರ್ನಾಟಕ

karnataka

ETV Bharat / bharat

ವಿವಾಹದ ಬಳಿಕ ಹಣ, ಆಭರಣದೊಂದಿಗೆ ವಧು ನಾಪತ್ತೆ: ಮಧ್ಯವರ್ತಿಯಿಂದಲೂ ಮೋಸ ಆರೋಪ - MARRIAGE FRAUD

ಇತ್ತೀಚೆಗೆ ವಿವಾಹ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಹಿಮಾಚಲಪ್ರದೇಶದಲ್ಲಿ ಮದುವೆಯಾದ ನಾಲ್ಕು ದಿನಗಳಲ್ಲೇ ತನ್ನ ಮನೆಯಿಂದ ಹಣ, ಚಿನ್ನದೊಂದಿಗೆ ವಧು ನಾಪತ್ತೆಯಾಗಿದ್ದಾಳೆ.

bride-disappears-with-money-and-jewellery-within-hours-of-wedding-in-himachal-pradesh
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Feb 6, 2025, 4:25 PM IST

ಹಮೀರ್​ಪುರ (ಹಿಮಾಚಲಪ್ರದೇಶ) :ವಿವಾಹ ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ನಾಲ್ಕು ದಿನಗಳಲ್ಲೇ ನವವಧು ಹಣ ಮತ್ತು ಆಭರಣಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಮೋಸ ಹೋದ ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಹಿಮಾಚಲಪ್ರದೇಶದ ಹಮೀರ್​ಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಜಿಲ್ಲೆಯ ಸಾಹಿ ಗ್ರಾಮದ ಯುವಕನೊಬ್ಬ ತನಗೆ ವಧು ಮತ್ತು ಮದುವೆ ನಿಶ್ಚಯ ಮಾಡಿಕೊಟ್ಟ ಮಧ್ಯವರ್ತಿಯೇ ಮೋಸ ಮಾಡಿದ್ದಾರೆ. ತನಗೆ ಸೇರಿದ ಹಣ ಮತ್ತು ಚಿನ್ನಾಭರಣವನ್ನು ಎಗರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯುವಕನ ಆರೋಪವೇನು?:ಪೊಲೀಸರ ಮಾಹಿತಿ ಪ್ರಕಾರ, ದೂರುದಾರ ಯುವಕ ಮದುವೆ ನಿಶ್ಚಯಕ್ಕೆ ವ್ಯಕ್ತಿಯೊಬ್ಬರಿಗೆ 1.50 ಲಕ್ಷ ರೂಪಾಯಿ ನೀಡಿದ್ದರು. ಮಾತಿನಂತೆ, 2024ರ ಡಿಸೆಂಬರ್ 13ರಂದು, ಯುವಕ ಯುವತಿಯೊಂದಿಗೆ ಮದುವೆಯಾಗಲು ಭೋರಂಜಿ ನ್ಯಾಯಾಲಯಕ್ಕೆ ಬಂದಿದ್ದ. ಆದರೆ ನ್ಯಾಯಾಲಯದಲ್ಲಿ ದಾಖಲೆ ಪರಿಶೀಲನೆ ವೇಳೆ ಯುವತಿಯ ಜನನ ಪ್ರಮಾಣಪತ್ರ ಇರಲಿಲ್ಲ. ಆಗ ಯುವತಿ ಮತ್ತು ಮಧ್ಯವರ್ತಿ ಶೀಘ್ರದಲ್ಲೇ ಜನನ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ವಕೀಲರು ಅಫಿಡವಿಟ್ ಮೂಲಕ ಅವರಿಬ್ಬರ ಮದುವೆಯನ್ನೂ ಮಾಡಿದ್ದರು ಎಂದು ದೂರಿನಲ್ಲಿ ಯುವಕ ವಿವರಿಸಿದ್ದಾರೆ.

ನ್ಯಾಯಾಲಯದಲ್ಲಿ ಮದುವೆಯಾದ ನಂತರ, ತನ್ನ ಕುಟುಂಬ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸ್ವಗ್ರಾಮದ ದೇವಸ್ಥಾನದಲ್ಲಿ ಯುವತಿಯೊಂದಿಗೆ ಸಪ್ತಪದಿ ತುಳಿದಿರುವಾಗಿ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ವಿವಾಹವಾದ ನಾಲ್ಕು ದಿನಗಳಲ್ಲಿ ವಧು ತನ್ನ ತಾಯಿಗೆ ಅನಾರೋಗ್ಯ ಉಂಟಾಗಿದೆ. ಎರಡು ದಿನಗಳಲ್ಲಿ ವಾಪಸ್​ ಬರುವುದಾಗಿ ಹೇಳಿ ಹಣ ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ಇದಾದ ಬಳಿಕ ಫೋನ್​ ಕರೆಗೂ ಸಿಗುತ್ತಿಲ್ಲ. ಆಕೆಯೂ ವಾಪಸ್​ ಬಂದಿಲ್ಲ ಎಂದು ದೂರು ನೀಡಿದ್ದಾಗಿ ಪೊಲೀಸರು ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಮದುವೆ ನಿಶ್ಚಯ ಮಾಡಿಕೊಟ್ಟ ಮಧ್ಯವರ್ತಿಯೂ ವಧುವನ್ನು ವಾಪಸ್​​ ಕರೆತರುವ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಅವರೂ ಕೂಡ ಯಾವುದೇ ಫೋನ್​ ಕರೆಗಳಿಗೆ ಉತ್ತರಿಸುತ್ತಿಲ್ಲ. ಆಭರಣ ಮತ್ತು ಹಣ ವಾಪಸ್​ ಕೊಡಿಸುವಂತೆ ಕೇಳಿದರೂ, ನಿರಾಕರಿಸುತ್ತಿದ್ದಾರೆ. ತನಗೆ ಮೋಸವಾಗಿದೆ ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿ ತನಿಖೆ :ವಧು ಮತ್ತು ಮಧ್ಯವರ್ತಿ ವ್ಯಕ್ತಿ ಇಬ್ಬರೂ ನಾಪತ್ತೆಯಾದ ಬಳಿಕ ಯುವಕ ತಾನು ಮೋಸ ಹೋದ ಬಗ್ಗೆ ಅರಿತುಕೊಂಡಿದ್ದಾರೆ. ವಿವಾಹ ನಿಶ್ಚಯಕ್ಕಾಗಿ ಮಧ್ಯವರ್ತಿ ವ್ಯಕ್ತಿಗೆ 1.50 ಲಕ್ಷ ರೂಪಾಯಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಮೀರ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಗತ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ : 2 ಮದ್ವೆ ಆಗಿರೋ ಮಹಿಳೆಯೊಂದಿಗೆ ವಿವಾಹ ಮಾಡಿಸಿ ₹4 ಲಕ್ಷ ವಂಚನೆ, 7 ಮಂದಿ ವಿರುದ್ಧ ಕೇಸ್​

ABOUT THE AUTHOR

...view details