thumbnail

By ETV Bharat Karnataka Team

Published : Apr 20, 2024, 9:05 PM IST

ETV Bharat / Videos

ಕಣ್ಣೀರನ್ನು ನಾಟಕೀಯ ಎನ್ನುವಂತಹ ಪಾಪಿಗಳು ಈ ಭೂಮಿ ಮೇಲೆ ಬದುಕುತ್ತಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ - Dingaleshwar Swamiji

ಹುಬ್ಬಳ್ಳಿ: ನಿರಂಜನ್​ ಹಿರೇಮಠ ದಂಪತಿ ನನಗೆ ಬಹಳ ಬೇಕಾದವರು. ನನ್ನ ಜೀವನದಲ್ಲಿ ನನಗೆ ಕಣ್ಣೀರೇ ಬರುವುದಿಲ್ಲ, ಆದರೆ ನಿನ್ನೆ ಮೃತ ನೇಹಾಳನ್ನು ನೆನಪಿಸಿಕೊಂಡು ಬಹಳಷ್ಟು ಅತ್ತಿದ್ದೇನೆ. ಕಣ್ಣೀರನ್ನು ನಾಟಕೀಯ ಎನ್ನುವಂತಹ ಪಾಪಿಗಳು ಈ ಭೂಮಿ ಮೇಲೆ ಬದುಕುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದರು. ನಿರಂಜನ್​ ಹಿರೇಮಠ​​ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸನಗೌಡ ಯತ್ನಾಳ್​ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನೇಹಾ ಹಿರೇಮಠ್​ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಹಗುರವಾಗಿ ತೆಗೆದುಕೊಂಡಿದೆ. ಕೇಂದ್ರದ ಬಿಜೆಪಿ ನಾಯಕರು ಈ ಪ್ರಕರಣವನ್ನು ಚುನಾವಣೆಯ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ಇದು ರಾಜಕಾರಣಿಗಳ ಸ್ವಾರ್ಥಕ್ಕೆ ಹಿಡಿದ ಕನ್ನಡಿಯಾಗಿದೆ. ನೇಹಾಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಆಕೆಯ ಹೆಸರಿನಲ್ಲಿ ಮಹಿಳೆ ಸ್ವಾತಂತ್ರ್ಯವಾಗಿ ಹಗಲು - ರಾತ್ರಿ ಓಡಾಡುವಂತಹ ಕಾನೂನು ತರಬೇಕು. ಮಹಿಳೆ, ವಿದ್ಯಾರ್ಥಿನಿಯವರನ್ನು ಹತ್ಯೆ ಮಾಡಿದವರನ್ನು ಯಾವುದೇ ಕಾರಣ ಕೊಡದೇ ಪ್ರಾಣ ತೆಗೆಯುವ ಕಾನೂನು ಬಂದರೆ ಇಲ್ಲಿ ಸ್ತ್ರೀಯರು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್‌ ಬಂದಿದೆ, ಅದಕ್ಕೆ ಎಲೆಕ್ಷನ್​ಗೆ ಸ್ಪರ್ಧಿಸಿದ್ದಾರೆ: ಬಸನಗೌಡ ಪಾಟೀಲ್‌ ಯತ್ನಾಳ್‌ - basanagouda patil yatnal

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.