ETV Bharat / state

ಶಿವಮೊಗ್ಗ ಮರ್ಡರ್​ ಕೇಸ್​: ಗಾಯಗೊಂಡಿದ್ದ ಯಾಸೀನ್ ಖುರೇಷಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ - Shivamogga Murder case

author img

By ETV Bharat Karnataka Team

Published : May 10, 2024, 7:35 AM IST

ಶಿವಮೊಗ್ಗ ಗಲಾಟೆಯಲ್ಲಿ ಗಾಯಗೊಂಡಿದ್ದ ಯಾಸೀನ್ ಖುರೇಷಿ ಸಾವನಪ್ಪಿದ್ದಾನೆ.

Yasin Qureshi died
ಯಾಸೀನ್ ಖುರೇಷಿ ಸಾವು (ETV Bharat)

ಶಿವಮೊಗ್ಗ: ನಗರದಲ್ಲಿ ಬುಧವಾರದಂದು ನಡೆದಿದ್ದ ಗ್ಯಾಂಗ್​ ವಾರ್​ನಲ್ಲಿ ಗಾಯಗೊಂಡಿದ್ದ ರೌಡಿ ಶೀಟರ್ ಯಾಸೀನ್ ಖುರೇಷಿ (30) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುರಿಸಿರೆಳೆದಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಮೊನ್ನೆ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯ ಜನತಾ ಮಟನ್ ಸ್ಟಾಲ್ ಮುಂಭಾಗ ಯಾಸೀನ್ ಖುರೇಷಿ ಮೇಲೆ ಆದಿಲ್ ಗುಂಪು ಹಾಗೂ ಇತರೆ ಎರಡು ಗುಂಪುಗಳು ಮೇಲೆ ದಾಳಿ ನಡೆಸಿದ್ದವು. ಈ ವೇಳೆ ಯಾಸೀನ್ ಕಡೆಯವರು ಹಲ್ಲೆ ನಡೆಸಲು ಬಂದವರ ಮೇಲೆ ಮನಸ್ಸಿಗೆ ಬಂದಂತೆ ಹಲ್ಲೆ ನಡೆಸಿದ್ದರು. ಈ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಸುಹೇಲ್ ಅಲಿಯಾಸ್ ಸೇಬು ಹಾಗೂ ಗೌಸ್ ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೇ, ಚಪ್ಪಡಿ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ಈ ಗ್ಯಾಂಗ್ ವಾರ್​​ಗೆ ಸಂಬಂಧಿಸಿದಂತೆ ಸೆಕ್ಷನ್​​ 302ರ ಅಡಿ 10 ಜನರನ್ನು ಹಾಗೂ 307ರ ಅಡಿ 8 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದರು.

ಏನಿದು ಪ್ರಕರಣ? ಹಳೇ ವೈಷಮ್ಯದ ಹಿನ್ನೆಲೆ ಗುಂಪುಗಳ ನಡುವೆ ಬುಧವಾರ ಮಾರಾಮಾರಿ ನಡೆದಿತ್ತು. ಈ ವೇಳೆ ಗಾಯಗೊಂಡಿದ್ದ ಸೇಬು (32) ಹಾಗೂ ಗೌಸ್ (30) ಮೃತಪಟ್ಟಿದ್ದರು. ಈ ಪೈಕಿ ಓರ್ವ ಕೆ.ಆರ್.ಪುರಂ ಹಾಗೂ ಇನ್ನೋರ್ವ ಅಣ್ಣಾ ನಗರದ ನಿವಾಸಿಗಳೆಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಖುರೇಷಿಯ ಗುಂಪು ಹಾಗೂ ಸುಹೇಲ್​ ಗುಂಪುಗಳ ನಡುವೆ ಮೊದಲು ಅಣ್ಣಾ ನಗರದಲ್ಲಿ ಗಲಾಟೆ ಪ್ರಾರಂಭವಾಗಿದೆ. ಬಳಿಕ‌ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ಗಲಾಟೆ ಮುಂದುವರಿಸಿದ್ದಾರೆ. ಖುರೇಷಿ ಗುಂಪು ಸೇಬು ಹಾಗೂ ಗೌಸ್​​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸ್​ ಮೂಲಗಳು ಘಟನೆ ನಡೆದ ದಿನ ಮಾಹಿತಿ ನೀಡಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಡಬಲ್ ಮರ್ಡರ್: ಕೊಲೆ ಮಾಡಲು ಬಂದವರೇ ಕೊಲೆಯಾದ್ರಾ? - Double Murder

ಘಟನೆ ಬಳಿಕ ಮಾತನಾಡಿದ್ದ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್, ''ಹಳೇ ವೈಷಮ್ಯದಿಂದ ಗಲಾಟೆ ನಡೆದಿದ್ದು, ಡಬಲ್ ಮರ್ಡರ್ ಆಗಿದೆ‌. ಸೇಬು, ಗೌಸ್ ಕೊಲೆಯಾದವರು. ಈ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ. ಕೇಸ್​​ ದಾಖಲಾಗಿದ್ದು, ತನಿಖೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಹಾಸನ: ಮನೆಯಲ್ಲೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ - lecturer suicide

ಶಿವಮೊಗ್ಗ: ನಗರದಲ್ಲಿ ಬುಧವಾರದಂದು ನಡೆದಿದ್ದ ಗ್ಯಾಂಗ್​ ವಾರ್​ನಲ್ಲಿ ಗಾಯಗೊಂಡಿದ್ದ ರೌಡಿ ಶೀಟರ್ ಯಾಸೀನ್ ಖುರೇಷಿ (30) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುರಿಸಿರೆಳೆದಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಮೊನ್ನೆ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯ ಜನತಾ ಮಟನ್ ಸ್ಟಾಲ್ ಮುಂಭಾಗ ಯಾಸೀನ್ ಖುರೇಷಿ ಮೇಲೆ ಆದಿಲ್ ಗುಂಪು ಹಾಗೂ ಇತರೆ ಎರಡು ಗುಂಪುಗಳು ಮೇಲೆ ದಾಳಿ ನಡೆಸಿದ್ದವು. ಈ ವೇಳೆ ಯಾಸೀನ್ ಕಡೆಯವರು ಹಲ್ಲೆ ನಡೆಸಲು ಬಂದವರ ಮೇಲೆ ಮನಸ್ಸಿಗೆ ಬಂದಂತೆ ಹಲ್ಲೆ ನಡೆಸಿದ್ದರು. ಈ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಸುಹೇಲ್ ಅಲಿಯಾಸ್ ಸೇಬು ಹಾಗೂ ಗೌಸ್ ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೇ, ಚಪ್ಪಡಿ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ಈ ಗ್ಯಾಂಗ್ ವಾರ್​​ಗೆ ಸಂಬಂಧಿಸಿದಂತೆ ಸೆಕ್ಷನ್​​ 302ರ ಅಡಿ 10 ಜನರನ್ನು ಹಾಗೂ 307ರ ಅಡಿ 8 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದರು.

ಏನಿದು ಪ್ರಕರಣ? ಹಳೇ ವೈಷಮ್ಯದ ಹಿನ್ನೆಲೆ ಗುಂಪುಗಳ ನಡುವೆ ಬುಧವಾರ ಮಾರಾಮಾರಿ ನಡೆದಿತ್ತು. ಈ ವೇಳೆ ಗಾಯಗೊಂಡಿದ್ದ ಸೇಬು (32) ಹಾಗೂ ಗೌಸ್ (30) ಮೃತಪಟ್ಟಿದ್ದರು. ಈ ಪೈಕಿ ಓರ್ವ ಕೆ.ಆರ್.ಪುರಂ ಹಾಗೂ ಇನ್ನೋರ್ವ ಅಣ್ಣಾ ನಗರದ ನಿವಾಸಿಗಳೆಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಖುರೇಷಿಯ ಗುಂಪು ಹಾಗೂ ಸುಹೇಲ್​ ಗುಂಪುಗಳ ನಡುವೆ ಮೊದಲು ಅಣ್ಣಾ ನಗರದಲ್ಲಿ ಗಲಾಟೆ ಪ್ರಾರಂಭವಾಗಿದೆ. ಬಳಿಕ‌ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ಗಲಾಟೆ ಮುಂದುವರಿಸಿದ್ದಾರೆ. ಖುರೇಷಿ ಗುಂಪು ಸೇಬು ಹಾಗೂ ಗೌಸ್​​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸ್​ ಮೂಲಗಳು ಘಟನೆ ನಡೆದ ದಿನ ಮಾಹಿತಿ ನೀಡಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಡಬಲ್ ಮರ್ಡರ್: ಕೊಲೆ ಮಾಡಲು ಬಂದವರೇ ಕೊಲೆಯಾದ್ರಾ? - Double Murder

ಘಟನೆ ಬಳಿಕ ಮಾತನಾಡಿದ್ದ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್, ''ಹಳೇ ವೈಷಮ್ಯದಿಂದ ಗಲಾಟೆ ನಡೆದಿದ್ದು, ಡಬಲ್ ಮರ್ಡರ್ ಆಗಿದೆ‌. ಸೇಬು, ಗೌಸ್ ಕೊಲೆಯಾದವರು. ಈ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ. ಕೇಸ್​​ ದಾಖಲಾಗಿದ್ದು, ತನಿಖೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಹಾಸನ: ಮನೆಯಲ್ಲೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ - lecturer suicide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.