ETV Bharat / state

ರಾಜ್ಯದ ಕಾನೂನು ಸುವ್ಯವಸ್ಥೆ ಸದನದಲ್ಲಿ ಚರ್ಚೆ: ವಿಧಾನಸಭೆಯಲ್ಲಿ ಆಡಳಿತ- ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ

author img

By ETV Bharat Karnataka Team

Published : Feb 13, 2024, 4:58 PM IST

ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

argument-between-ruling-and-opposition-members-in-karnataka-assembly
ರಾಜ್ಯದ ಕಾನೂನು ಸುವ್ಯವಸ್ಥೆ ಸದನದಲ್ಲಿ ಚರ್ಚೆ: ವಿಧಾನಸಭೆಯಲ್ಲಿ ಆಡಳಿತ- ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಪ್ರತಿಪಕ್ಷಗಳು ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪದ ಆರಂಭದಲ್ಲಿ ಗದ್ದಲ, ಗಲಾಟೆ ವಾತಾವರಣ ನಿರ್ಮಾಣವಾಗಿತ್ತು.

ಇಂದು ಬೆಳಗ್ಗೆ 9.40ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಹಾವೇರಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಮಚ್ಚು-ಲಾಂಗ್‍ಗಳ ಬ್ಯಾನರ್ ಹಾಕುತ್ತಿದ್ದಾರೆ. ಭಗವಾಧ್ವಜ ಅಳವಡಿಸಲು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸೈಬರ್ ಕ್ರೈಮ್‍ಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಪ್ರಶ್ನೋತ್ತರವನ್ನು ಬದಿಗಿರಿಸಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸಭಾಧ್ಯಕ್ಷರು ನೇರವಾಗಿಯೇ ನೋಡಲಿ - ಪರಮೇಶ್ವರ್​: ಈ ಹಿಂದೆ ಬೆಳಗಾವಿಯ ಅಧಿವೇಶನದಲ್ಲೂ ನಿಲುವಳಿ ಸೂಚನೆ ನೀಡಿದ್ದೆವು. ಆದರೆ ನೀವು ಆಡಳಿತ ಪಕ್ಷದ ಸದಸ್ಯರು ಇರುವ ಬಲಗಡೆ ಮಾತ್ರ ನೋಡುತ್ತಿದ್ದೀರಾ, ಪ್ರತಿಪಕ್ಷಗಳ ಸದಸ್ಯರು ಇರುವ ಎಡಗಡೆಯೂ ಸ್ವಲ್ಪ ನೋಡಿ ಎಂದು ಮನವಿ ಮಾಡಿದರು. ಆಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಭಾಧ್ಯಕ್ಷರು ಎಡಗಡೆ ಅಥವಾ ಬಲಗಡೆ ನೋಡುವುದು ಬೇಡ, ನೇರವಾಗಿಯೇ ನೋಡಲಿ. ಪ್ರತಿಪಕ್ಷಗಳ ಬೇಡಿಕೆಯಂತೆ ಚರ್ಚೆ ಮಾಡಲು ನಮ್ಮ ಅಭ್ಯಂತರ ಇಲ್ಲ. ಅವರ ಕಾಲದಲ್ಲಿ ಬೆಂಗಳೂರಿನಲ್ಲಿ ಹೇಗೆ ಕೊಲೆಗಳಾಗುತ್ತಿದ್ದವು ಎಂದು ನಾನು ಹೇಳುತ್ತೇನೆ. ಅವರು ಹೇಳಲಿ, ಆದರೆ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಲಿ ಎಂದು ಹೇಳಿದರು.

ಬಿಜೆಪಿ ಸದಸ್ಯರಾದ ಟಿ. ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ ಅವರು ಮಧ್ಯ ಪ್ರವೇಶ ಮಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚರ್ಚೆಗೆ ಮೊದಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಡಿಸುವವರು ನೀವೆ, ಇಲ್ಲಿ ಚರ್ಚೆ ಮಾಡುವವರು ನೀವೆ. ರಾಜ್ಯದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಅದರ ಬಗ್ಗೆಯೂ ಚರ್ಚೆ ಮಾಡೋಣ, ಪಿಎಸ್‍ಐ ನೇಮಕಾತಿ ಹಗರಣದ ಕುರಿತು ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗದ ಕುರಿತು ಚರ್ಚೆಯಾಗಲಿ, ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿ ಭಗವಾಧ್ವಜ ಏರಿಸಿದರ ಬಗ್ಗೆ ಚರ್ಚೆಯಾಗಲಿ, ಪ್ರಸ್ತಾಪ ಮಾಡಿ ಎಂದು ಸವಾಲು ಹಾಕಿದರು.

ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ - ಆರಗ ಜ್ಞಾನೇಂದ್ರ: ನಾವು ಏನು ಪ್ರಸ್ತಾಪ ಮಾಡಬೇಕು ಎಂದು ನೀವು ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸುನೀಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. ನೀವು ನಮಗೆ ನಿರ್ದೇಶನ ನೀಡುವುದು ಬೇಡ. ನೀವು ಹೇಳಿದ್ದನ್ನು ನಾವು ಕೇಳಬೇಕು, ನಾವು ಹೇಳಕ್ಕೂ ನಿಮ್ಮ ವಿರೋಧ, ಹೇಗಿದೆ ನಿಮ್ಮ ಧೋರಣೆ ಎಂದು ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದರು. ಡಾ.ಜಿ.ಪರಮೇಶ್ವರ್ ಹಾಗೂ ಆರಗ ಜ್ಞಾನೇಂದ್ರ ಅವರ ನಡುವೆಯೇ ಕಾವೇರಿದ ಚರ್ಚೆಗಳಾದವು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

ಆಗ ಆರ್.ಅಶೋಕ್ ಮಾತನಾಡಿ, ನಮಗೆ ಬುದ್ಧಿ ಹೇಳಲು ಬರಬೇಡಿ. ನಿಮ್ಮ ಇಂಡಿಯಾ ಮಿತ್ರಕೂಟಕ್ಕೆ ಹೇಳಿಕೊಳ್ಳಿ ಎಂದು ತಿರುಗೇಟು ನೀಡಿದರು. ಕೆಲಕಾಲ ಕಾವೇರಿದ ಚರ್ಚೆ ನಡೆಯಿತು. ಬಳಿಕ ಸ್ಪೀಕರ್ ಯು.ಟಿ.ಖಾದರ್, ಸದಸ್ಯರು ಆರಂಭದ ಹುಮ್ಮಸ್ಸಿನಲ್ಲಿರುತ್ತಾರೆ. ಅದು ನಿಧಾನಕ್ಕೆ ಸಮಪ್ರಮಾಣಕ್ಕೆ ಬರಲಿ ಎಂದು ಸಲಹೆ ನೀಡಿದರು.

ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು ಎಂಬ ವಿಚಾರ ಚರ್ಚೆ ಮಾಡಲು ಜೆಡಿಎಸ್‍ನ ಹೆಚ್.ಡಿ.ರೇವಣ್ಣ, ಬಾಲಕೃಷ್ಣ ಅವರು ಮೊದಲು ನಿಲುವಳಿ ಸೂಚನೆ ನೀಡಿದ್ದಾರೆ. ಆನಂತರ ಬಿಜೆಪಿ ಸದಸ್ಯರು ಕಾನೂನು ಸುವ್ಯವಸ್ಥೆ ಕುರಿತು ಚರ್ಚೆಗೆ ಸೂಚನೆ ನೀಡಿದ್ದಾರೆ. ನಿಯಮದ ಪ್ರಕಾರ ಮೊದಲು ಸೂಚನಾ ಪತ್ರ ಕೊಟ್ಟವರಿಗೆ ಅವಕಾಶ ಮಾಡಿಕೊಡಲಾಗುವುದು. ಬಿಜೆಪಿ ಸದಸ್ಯರು ನಾಳೆ ಹೊಸದಾಗಿ ಸೂಚನಾ ಪತ್ರ ಕಳುಹಿಸಿ, ಪರಿಶೀಲಿಸುತ್ತೇನೆ ಎಂದು ಸ್ಪೀಕರ್ ಹೇಳಿದರು.

ಜೆಡಿಎಸ್‍ನವರು ನಮ್ಮ ಪಾಲುದಾರರಾಗಿದ್ದಾರೆ. ಆದರೆ, ಅಧಿಕೃತ ಪ್ರತಿ ಪಕ್ಷದ ನಿಲುವಳಿ ಸೂಚನೆಯನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು. ವಿಚಾರ ಗಂಭೀರವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದಾಗ, ನಿಲುವಳಿ ಸೂಚನೆ ನೀಡುವಾಗ ಗಂಭೀರ ವಿಚಾರ ಎಂದು ಗೊತ್ತಿರಲಿಲ್ಲವೇ, ಮೊದಲು ಸಭಾಧ್ಯಕ್ಷರ ಕಚೇರಿಗೆ ಸೂಚನಾ ಪತ್ರ ನೀಡಬೇಕಲ್ಲವೇ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು. ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳ ಸದಸ್ಯರು ಧ್ವನಿ ಏರಿಸಿದಾಗ ಆಡಳಿತ ಪಕ್ಷದ ಶಾಸಕರಿಂದಲೂ ಪ್ರತಿ ಗದ್ದಲವಾಯಿತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊಬ್ಬರಿ ಬೆಲೆ ಕುರಿತು ಇಂದು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಕಾನೂನು ಸುವ್ಯವಸ್ಥೆ ಕುರಿತು ಹೊಸ ಸೂಚನೆ ಕೊಟ್ಟರೆ ನಾಳೆ ಪರಿಶೀಲಿಸುತ್ತೇನೆ ಎಂದು ಸಭಾಧ್ಯಕ್ಷರು ಪ್ರತಿಪಕ್ಷದ ನಾಯಕರ ಒತ್ತಾಯಕ್ಕೆ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಸೇವೆ ಖಾಯಂಗೆ ಕಾನೂನಿನಲ್ಲಿ ಅವಕಾಶವಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಪ್ರತಿಪಕ್ಷಗಳು ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪದ ಆರಂಭದಲ್ಲಿ ಗದ್ದಲ, ಗಲಾಟೆ ವಾತಾವರಣ ನಿರ್ಮಾಣವಾಗಿತ್ತು.

ಇಂದು ಬೆಳಗ್ಗೆ 9.40ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಹಾವೇರಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಮಚ್ಚು-ಲಾಂಗ್‍ಗಳ ಬ್ಯಾನರ್ ಹಾಕುತ್ತಿದ್ದಾರೆ. ಭಗವಾಧ್ವಜ ಅಳವಡಿಸಲು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸೈಬರ್ ಕ್ರೈಮ್‍ಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಪ್ರಶ್ನೋತ್ತರವನ್ನು ಬದಿಗಿರಿಸಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸಭಾಧ್ಯಕ್ಷರು ನೇರವಾಗಿಯೇ ನೋಡಲಿ - ಪರಮೇಶ್ವರ್​: ಈ ಹಿಂದೆ ಬೆಳಗಾವಿಯ ಅಧಿವೇಶನದಲ್ಲೂ ನಿಲುವಳಿ ಸೂಚನೆ ನೀಡಿದ್ದೆವು. ಆದರೆ ನೀವು ಆಡಳಿತ ಪಕ್ಷದ ಸದಸ್ಯರು ಇರುವ ಬಲಗಡೆ ಮಾತ್ರ ನೋಡುತ್ತಿದ್ದೀರಾ, ಪ್ರತಿಪಕ್ಷಗಳ ಸದಸ್ಯರು ಇರುವ ಎಡಗಡೆಯೂ ಸ್ವಲ್ಪ ನೋಡಿ ಎಂದು ಮನವಿ ಮಾಡಿದರು. ಆಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಭಾಧ್ಯಕ್ಷರು ಎಡಗಡೆ ಅಥವಾ ಬಲಗಡೆ ನೋಡುವುದು ಬೇಡ, ನೇರವಾಗಿಯೇ ನೋಡಲಿ. ಪ್ರತಿಪಕ್ಷಗಳ ಬೇಡಿಕೆಯಂತೆ ಚರ್ಚೆ ಮಾಡಲು ನಮ್ಮ ಅಭ್ಯಂತರ ಇಲ್ಲ. ಅವರ ಕಾಲದಲ್ಲಿ ಬೆಂಗಳೂರಿನಲ್ಲಿ ಹೇಗೆ ಕೊಲೆಗಳಾಗುತ್ತಿದ್ದವು ಎಂದು ನಾನು ಹೇಳುತ್ತೇನೆ. ಅವರು ಹೇಳಲಿ, ಆದರೆ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಲಿ ಎಂದು ಹೇಳಿದರು.

ಬಿಜೆಪಿ ಸದಸ್ಯರಾದ ಟಿ. ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ ಅವರು ಮಧ್ಯ ಪ್ರವೇಶ ಮಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚರ್ಚೆಗೆ ಮೊದಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಡಿಸುವವರು ನೀವೆ, ಇಲ್ಲಿ ಚರ್ಚೆ ಮಾಡುವವರು ನೀವೆ. ರಾಜ್ಯದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಅದರ ಬಗ್ಗೆಯೂ ಚರ್ಚೆ ಮಾಡೋಣ, ಪಿಎಸ್‍ಐ ನೇಮಕಾತಿ ಹಗರಣದ ಕುರಿತು ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗದ ಕುರಿತು ಚರ್ಚೆಯಾಗಲಿ, ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿ ಭಗವಾಧ್ವಜ ಏರಿಸಿದರ ಬಗ್ಗೆ ಚರ್ಚೆಯಾಗಲಿ, ಪ್ರಸ್ತಾಪ ಮಾಡಿ ಎಂದು ಸವಾಲು ಹಾಕಿದರು.

ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ - ಆರಗ ಜ್ಞಾನೇಂದ್ರ: ನಾವು ಏನು ಪ್ರಸ್ತಾಪ ಮಾಡಬೇಕು ಎಂದು ನೀವು ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸುನೀಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. ನೀವು ನಮಗೆ ನಿರ್ದೇಶನ ನೀಡುವುದು ಬೇಡ. ನೀವು ಹೇಳಿದ್ದನ್ನು ನಾವು ಕೇಳಬೇಕು, ನಾವು ಹೇಳಕ್ಕೂ ನಿಮ್ಮ ವಿರೋಧ, ಹೇಗಿದೆ ನಿಮ್ಮ ಧೋರಣೆ ಎಂದು ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದರು. ಡಾ.ಜಿ.ಪರಮೇಶ್ವರ್ ಹಾಗೂ ಆರಗ ಜ್ಞಾನೇಂದ್ರ ಅವರ ನಡುವೆಯೇ ಕಾವೇರಿದ ಚರ್ಚೆಗಳಾದವು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

ಆಗ ಆರ್.ಅಶೋಕ್ ಮಾತನಾಡಿ, ನಮಗೆ ಬುದ್ಧಿ ಹೇಳಲು ಬರಬೇಡಿ. ನಿಮ್ಮ ಇಂಡಿಯಾ ಮಿತ್ರಕೂಟಕ್ಕೆ ಹೇಳಿಕೊಳ್ಳಿ ಎಂದು ತಿರುಗೇಟು ನೀಡಿದರು. ಕೆಲಕಾಲ ಕಾವೇರಿದ ಚರ್ಚೆ ನಡೆಯಿತು. ಬಳಿಕ ಸ್ಪೀಕರ್ ಯು.ಟಿ.ಖಾದರ್, ಸದಸ್ಯರು ಆರಂಭದ ಹುಮ್ಮಸ್ಸಿನಲ್ಲಿರುತ್ತಾರೆ. ಅದು ನಿಧಾನಕ್ಕೆ ಸಮಪ್ರಮಾಣಕ್ಕೆ ಬರಲಿ ಎಂದು ಸಲಹೆ ನೀಡಿದರು.

ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು ಎಂಬ ವಿಚಾರ ಚರ್ಚೆ ಮಾಡಲು ಜೆಡಿಎಸ್‍ನ ಹೆಚ್.ಡಿ.ರೇವಣ್ಣ, ಬಾಲಕೃಷ್ಣ ಅವರು ಮೊದಲು ನಿಲುವಳಿ ಸೂಚನೆ ನೀಡಿದ್ದಾರೆ. ಆನಂತರ ಬಿಜೆಪಿ ಸದಸ್ಯರು ಕಾನೂನು ಸುವ್ಯವಸ್ಥೆ ಕುರಿತು ಚರ್ಚೆಗೆ ಸೂಚನೆ ನೀಡಿದ್ದಾರೆ. ನಿಯಮದ ಪ್ರಕಾರ ಮೊದಲು ಸೂಚನಾ ಪತ್ರ ಕೊಟ್ಟವರಿಗೆ ಅವಕಾಶ ಮಾಡಿಕೊಡಲಾಗುವುದು. ಬಿಜೆಪಿ ಸದಸ್ಯರು ನಾಳೆ ಹೊಸದಾಗಿ ಸೂಚನಾ ಪತ್ರ ಕಳುಹಿಸಿ, ಪರಿಶೀಲಿಸುತ್ತೇನೆ ಎಂದು ಸ್ಪೀಕರ್ ಹೇಳಿದರು.

ಜೆಡಿಎಸ್‍ನವರು ನಮ್ಮ ಪಾಲುದಾರರಾಗಿದ್ದಾರೆ. ಆದರೆ, ಅಧಿಕೃತ ಪ್ರತಿ ಪಕ್ಷದ ನಿಲುವಳಿ ಸೂಚನೆಯನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು. ವಿಚಾರ ಗಂಭೀರವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದಾಗ, ನಿಲುವಳಿ ಸೂಚನೆ ನೀಡುವಾಗ ಗಂಭೀರ ವಿಚಾರ ಎಂದು ಗೊತ್ತಿರಲಿಲ್ಲವೇ, ಮೊದಲು ಸಭಾಧ್ಯಕ್ಷರ ಕಚೇರಿಗೆ ಸೂಚನಾ ಪತ್ರ ನೀಡಬೇಕಲ್ಲವೇ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು. ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳ ಸದಸ್ಯರು ಧ್ವನಿ ಏರಿಸಿದಾಗ ಆಡಳಿತ ಪಕ್ಷದ ಶಾಸಕರಿಂದಲೂ ಪ್ರತಿ ಗದ್ದಲವಾಯಿತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊಬ್ಬರಿ ಬೆಲೆ ಕುರಿತು ಇಂದು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಕಾನೂನು ಸುವ್ಯವಸ್ಥೆ ಕುರಿತು ಹೊಸ ಸೂಚನೆ ಕೊಟ್ಟರೆ ನಾಳೆ ಪರಿಶೀಲಿಸುತ್ತೇನೆ ಎಂದು ಸಭಾಧ್ಯಕ್ಷರು ಪ್ರತಿಪಕ್ಷದ ನಾಯಕರ ಒತ್ತಾಯಕ್ಕೆ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಸೇವೆ ಖಾಯಂಗೆ ಕಾನೂನಿನಲ್ಲಿ ಅವಕಾಶವಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.