ETV Bharat / state

ಬಂಡೀಪುರದಲ್ಲಿ ಕಾಡಾನೆ ಸಾವು: ಉನ್ನತ ಮಟ್ಟದ ಸಮಿತಿಯಿಂದ ತನಿಖೆ

author img

By ETV Bharat Karnataka Team

Published : Feb 3, 2024, 12:44 PM IST

Updated : Feb 3, 2024, 2:41 PM IST

ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಕರೆತಂದ ಕಾಡಾನೆ ಬಂಡೀಪುರದಲ್ಲಿ ಕಾಡಾನೆ ಸಾವನ್ನಪ್ಪಿದೆ. ಈ ಬೆನ್ನಲ್ಲೇ ಉನ್ನತ ಮಟ್ಟದ ತನಿಖೆಗೆ ಕೇರಳ ಸಚಿವರು ಆದೇಶಿಸಿದ್ದಾರೆ.

ಬಂಡೀಪುರದಲ್ಲಿ ಕಾಡಾನೆ ಸಾವು
ಬಂಡೀಪುರದಲ್ಲಿ ಕಾಡಾನೆ ಸಾವು
ಬಂಡೀಪುರದಲ್ಲಿ ಕಾಡಾನೆ ಸಾವು

ಚಾಮರಾಜನಗರ/ಕೊಯಿಕ್ಕೋಡ್​: ಬಂಡೀಪುರದ ಮೂಲೆಹೊಳೆ ಅರಣ್ಯದಿಂದ ಆಹಾರ ಅರಸಿ ಕೇರಳದತ್ತ ತೆರಳಿ ಮಾನಂತವಾಡಿಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಾವನ್ನಪ್ಪಿದೆ. ಆನೆ ಸಾವಿನ ಬಗ್ಗೆ ಪರಿಸರ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೇರಳದ ಮಾನಂತವಾಡಿಗೆ ಕಾಡಾನೆ ನುಗ್ಗಿದ್ದರಿಂದ ಜನರು ಆತಂಕಗೊಂಡಿದ್ದರು. ಬಳಿಕ ಕರ್ನಾಟಕ ಮತ್ತು ಕೇರಳ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಾಡಾನೆಗೆ ಅರವಳಿಕೆ ಮದ್ದು ನೀಡಿದ್ದರು. ಆ ಬಳಿಕ ಆನೆಯನ್ನು ಸೆರೆ ಹಿಡಿದು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಶನಿವಾರ ನಸುಕಿನ ಜಾವ ಕರೆತರಲಾಗಿತ್ತು. ನಂತರ ಕಾಡಾನೆ ಸಾವನ್ನಪ್ಪಿದೆ.

ಇನ್ನು ಕಾಡಾನೆ ಸಾವಿನ ಬೆನ್ನಲ್ಲೇ ಉನ್ನತ ಮಟ್ಟದ ಸಮಿತಿಯಿಮದ ತನಿಖೆ ನಡೆಸುವುದಾಗಿ ಕೇರಳ ಅರಣ್ಯ ಸಚಿವ ಎ ಕೆ ಶಶೀಂದ್ರನ್ ಹೇಳಿದ್ದಾರೆ. ತಜ್ಞರು ಪರೀಕ್ಷೆ ಮಾಡುವ ಮುನ್ನವೇ ಆನೆ ಕುಸಿದು ಬಿದ್ದಿದೆ. ಕೇರಳ ಮತ್ತು ಕರ್ನಾಟಕ ಜಂಟಿಯಾಗಿ ಮರಣೋತ್ತರ ಪರೀಕ್ಷೆ ನಡೆಸಲಿವೆ. ಅರಣ್ಯ ಇಲಾಖೆಯಲ್ಲಿ ಯಾವುದೇ ಲೋಪವಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಆನೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಕೇರಳ ಸಚಿವರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹಾಸನದ ಬೇಲೂರು ಸಮೀಪ ಸೆರೆ ಹಿಡಿದು ಬಂಡೀಪುರದ ಮೂಲೆಹೊಳೆ ಅರಣ್ಯಕ್ಕೆ ಆನೆಯನ್ನು ಕರೆತಂದು ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗಿತ್ತು. ಆದರೆ, ಅದು ಆಹಾರ ಅರಸಿಕೊಂಡು ಕೇರಳದತ್ತ ಮುಖ ಮಾಡಿ ವೈನಾಡು ಭಾಗದಲ್ಲಿ ಓಡಾಡಿಕೊಂಡಿತ್ತು.

ಈ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಗೆ ಕೇರಳ ಅಧಿಕಾರಿಗಳು ಆನೆ ವಿಚಾರ ಗಮನಕ್ಕೆ ತಂದಿದ್ದರು. ಬಳಿಕ ಶುಕ್ರವಾರ ಕುಂಕಿ ಆನೆಗಳಿಂದ ಕಾರ್ಯಾಚರಣೆ ಕೈಗೊಂಡು, ಅರವಳಿಕೆ ಮದ್ದು ನೀಡಿ ಆನೆಯನ್ನು ಸೆರೆ ಹಿಡಿದು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಕರೆತರಲಾಗಿತ್ತು. ಆದರೆ, ದಿಢೀರನೇ ಆನೆ ಅಸುನೀಗಿದ್ದು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಆನೆ ಸಾವಾಗಿದೆ. ಸಮರ್ಪಕ ಮೂಲಸೌಕರ್ಯಗಳು, ಎಲ್ಲ ವ್ಯವಸ್ಥೆಗಳು ಲಭ್ಯವಾಗುವ ತನಕ ಆನೆಯನ್ನು ಸೆರೆ ಹಿಡಿಯಬಾರದು ಎಂದು ಪರಿಸರ ಹೋರಾಟಗಾರ ಹೂವರ್ ಆಗ್ರಹಿಸಿದ್ದಾರೆ.

ಆನೆ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ: ವಯನಾಡಿನ ಜನನಿಬಿಡ ವಾಸಸ್ಥಳಕ್ಕೆ ನುಗ್ಗಿದ ಕಾಡಾನೆ.. ಶಾಂತಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಬಂಡೀಪುರದಲ್ಲಿ ಕಾಡಾನೆ ಸಾವು

ಚಾಮರಾಜನಗರ/ಕೊಯಿಕ್ಕೋಡ್​: ಬಂಡೀಪುರದ ಮೂಲೆಹೊಳೆ ಅರಣ್ಯದಿಂದ ಆಹಾರ ಅರಸಿ ಕೇರಳದತ್ತ ತೆರಳಿ ಮಾನಂತವಾಡಿಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಾವನ್ನಪ್ಪಿದೆ. ಆನೆ ಸಾವಿನ ಬಗ್ಗೆ ಪರಿಸರ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೇರಳದ ಮಾನಂತವಾಡಿಗೆ ಕಾಡಾನೆ ನುಗ್ಗಿದ್ದರಿಂದ ಜನರು ಆತಂಕಗೊಂಡಿದ್ದರು. ಬಳಿಕ ಕರ್ನಾಟಕ ಮತ್ತು ಕೇರಳ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಾಡಾನೆಗೆ ಅರವಳಿಕೆ ಮದ್ದು ನೀಡಿದ್ದರು. ಆ ಬಳಿಕ ಆನೆಯನ್ನು ಸೆರೆ ಹಿಡಿದು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಶನಿವಾರ ನಸುಕಿನ ಜಾವ ಕರೆತರಲಾಗಿತ್ತು. ನಂತರ ಕಾಡಾನೆ ಸಾವನ್ನಪ್ಪಿದೆ.

ಇನ್ನು ಕಾಡಾನೆ ಸಾವಿನ ಬೆನ್ನಲ್ಲೇ ಉನ್ನತ ಮಟ್ಟದ ಸಮಿತಿಯಿಮದ ತನಿಖೆ ನಡೆಸುವುದಾಗಿ ಕೇರಳ ಅರಣ್ಯ ಸಚಿವ ಎ ಕೆ ಶಶೀಂದ್ರನ್ ಹೇಳಿದ್ದಾರೆ. ತಜ್ಞರು ಪರೀಕ್ಷೆ ಮಾಡುವ ಮುನ್ನವೇ ಆನೆ ಕುಸಿದು ಬಿದ್ದಿದೆ. ಕೇರಳ ಮತ್ತು ಕರ್ನಾಟಕ ಜಂಟಿಯಾಗಿ ಮರಣೋತ್ತರ ಪರೀಕ್ಷೆ ನಡೆಸಲಿವೆ. ಅರಣ್ಯ ಇಲಾಖೆಯಲ್ಲಿ ಯಾವುದೇ ಲೋಪವಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಆನೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಕೇರಳ ಸಚಿವರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹಾಸನದ ಬೇಲೂರು ಸಮೀಪ ಸೆರೆ ಹಿಡಿದು ಬಂಡೀಪುರದ ಮೂಲೆಹೊಳೆ ಅರಣ್ಯಕ್ಕೆ ಆನೆಯನ್ನು ಕರೆತಂದು ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗಿತ್ತು. ಆದರೆ, ಅದು ಆಹಾರ ಅರಸಿಕೊಂಡು ಕೇರಳದತ್ತ ಮುಖ ಮಾಡಿ ವೈನಾಡು ಭಾಗದಲ್ಲಿ ಓಡಾಡಿಕೊಂಡಿತ್ತು.

ಈ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಗೆ ಕೇರಳ ಅಧಿಕಾರಿಗಳು ಆನೆ ವಿಚಾರ ಗಮನಕ್ಕೆ ತಂದಿದ್ದರು. ಬಳಿಕ ಶುಕ್ರವಾರ ಕುಂಕಿ ಆನೆಗಳಿಂದ ಕಾರ್ಯಾಚರಣೆ ಕೈಗೊಂಡು, ಅರವಳಿಕೆ ಮದ್ದು ನೀಡಿ ಆನೆಯನ್ನು ಸೆರೆ ಹಿಡಿದು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಕರೆತರಲಾಗಿತ್ತು. ಆದರೆ, ದಿಢೀರನೇ ಆನೆ ಅಸುನೀಗಿದ್ದು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಆನೆ ಸಾವಾಗಿದೆ. ಸಮರ್ಪಕ ಮೂಲಸೌಕರ್ಯಗಳು, ಎಲ್ಲ ವ್ಯವಸ್ಥೆಗಳು ಲಭ್ಯವಾಗುವ ತನಕ ಆನೆಯನ್ನು ಸೆರೆ ಹಿಡಿಯಬಾರದು ಎಂದು ಪರಿಸರ ಹೋರಾಟಗಾರ ಹೂವರ್ ಆಗ್ರಹಿಸಿದ್ದಾರೆ.

ಆನೆ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ: ವಯನಾಡಿನ ಜನನಿಬಿಡ ವಾಸಸ್ಥಳಕ್ಕೆ ನುಗ್ಗಿದ ಕಾಡಾನೆ.. ಶಾಂತಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ

Last Updated : Feb 3, 2024, 2:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.