ETV Bharat / international

ಜೋರ್ಡಾನ್ ಗಡಿ ಕ್ರಾಸಿಂಗ್​ನಲ್ಲಿ ಗುಂಡಿಕ್ಕಿ 3 ಇಸ್ರೇಲಿಗರ ಹತ್ಯೆ - Israelis Killed By Gunman

author img

By ETV Bharat Karnataka Team

Published : Sep 8, 2024, 7:48 PM IST

ಜೋರ್ಡಾನ್​ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರಿ ಇಸ್ರೇಲಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಟೆಲ್ ಅವಿವ್: ಜೋರ್ಡಾನ್​​ನಿಂದ ಗಡಿ ದಾಟಿ ಬರುತ್ತಿದ್ದ ಬಂದೂಕುಧಾರಿಯೊಬ್ಬ ಆಕ್ರಮಿತ ವೆಸ್ಟ್​ ಬ್ಯಾಂಕ್​ನ ಅಲೆನ್ಬಿ ಸೇತುವೆ ಗಡಿಯಲ್ಲಿ ಮೂವರು ಇಸ್ರೇಲಿ ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾಲೆಸ್ಟೈನ್​ ಇಸ್ಲಾಮಿಕ್ ಗುಂಪು ಹಮಾಸ್ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಜೋರ್ಡಾನ್ ಗಡಿಯಲ್ಲಿ ನಡೆದ ಈ ರೀತಿಯ ಮೊದಲ ದಾಳಿ ಇದಾಗಿದೆ.

ಜೋರ್ಡಾನ್​​ನಿಂದ ಸರಕುಗಳನ್ನು ಹೊತ್ತ ಟ್ರಕ್​ಗಳು ವೆಸ್ಟ್​ ಬ್ಯಾಂಕ್​ನ ಗಡಿಗೆ ಪ್ರವೇಶಿಸುವ, ಇಸ್ರೇಲ್ ನಿಯಂತ್ರಣದಲ್ಲಿರುವ ವಾಣಿಜ್ಯ ಸರಕು ಸಾಗಾಟ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಕಿಂಗ್ ಹುಸೇನ್ ಸೇತುವೆ ಎಂದೂ ಕರೆಯಲ್ಪಡುವ ಈ ಕ್ರಾಸಿಂಗ್ ಡೆಡ್​ ಸೀ ಸಮುದ್ರದ ಉತ್ತರಕ್ಕೆ ಅಮ್ಮನ್ ಮತ್ತು ಜೆರುಸಲೇಮ್ ಮಧ್ಯದಲ್ಲಿದೆ.

"ಭಯೋತ್ಪಾದಕನೊಬ್ಬ ಟ್ರಕ್ ಮೂಲಕ ಜೋರ್ಡಾನ್​ನಿಂದ ಅಲೆನ್ಬಿ ಸೇತುವೆಯ ಪ್ರದೇಶಕ್ಕೆ ಆಗಮಿಸಿ, ಟ್ರಕ್​ನಿಂದ ಹೊರಬಂದು ಸೇತುವೆಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಇಸ್ರೇಲಿ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾನೆ. ಭಯೋತ್ಪಾದಕನನ್ನು ಭದ್ರತಾ ಪಡೆಗಳು ಸ್ಥಳದಲ್ಲೇ ಕೊಂದು ಹಾಕಿವೆ. ದಾಳಿಯ ಪರಿಣಾಮವಾಗಿ ಮೂವರು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದಾರೆ" ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಇಸ್ರೇಲ್ ಅನ್ನು ಜೋರ್ಡಾನ್​​ನೊಂದಿಗೆ ಸಂಪರ್ಕಿಸುವ ಎಲ್ಲಾ ಮೂರು ಭೂ ಗಡಿ ಕ್ರಾಸಿಂಗ್​ಗಳನ್ನು ಮುಚ್ಚಲಾಗಿದೆ ಎಂದು ಈ ಮಾರ್ಗಗಳ ಮೇಲ್ವಿಚಾರಣೆ ನಡೆಸುವ ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಸರಕುಗಳನ್ನು ಇಳಿಸುವ ಪ್ರದೇಶದಲ್ಲಿ ಕನಿಷ್ಠ ಎರಡು ಡಜನ್ ಜೋರ್ಡಾನ್ ಟ್ರಕ್ ಚಾಲಕರನ್ನು ಇಸ್ರೇಲ್ ಮಿಲಿಟರಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ ಎಂದು ಜೋರ್ಡಾನ್ ಗಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಜೋರ್ಡಾನ್ 1994 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ನಿಕಟ ಭದ್ರತಾ ಸಂಬಂಧಗಳನ್ನು ಹೊಂದಿವೆ. ಜೋರ್ಡಾನ್​ನಿಂದ ಪ್ರತಿದಿನ ಡಜನ್​ಗಟ್ಟಲೆ ಟ್ರಕ್​ಗಳು ಇಸ್ರೇಲ್​ಗೆ ಬರುತ್ತವೆ. ಈ ಟ್ರಕ್​ಗಳು ಜೋರ್ಡಾನ್ ಮತ್ತು ಗಲ್ಫ್​ನಿಂದ ವೆಸ್ಟ್​ ಬ್ಯಾಂಕ್​ ಮತ್ತು ಇಸ್ರೇಲಿ ಮಾರುಕಟ್ಟೆಗಳಿಗೆ ಅಗತ್ಯವಾದ ಸರಕುಗಳನ್ನು ಪೂರೈಸುತ್ತವೆ.

"ದುಷ್ಟ ಭಯೋತ್ಪಾದಕನೊಬ್ಬ ನಮ್ಮ ಮೂವರು ನಾಗರಿಕರನ್ನು ಕೊಂದಿದ್ದಾನೆ. ಇಸ್ರೇಲ್ ಪಾಲಿಗೆ ಇದೊಂದು ದುಃಖದ ದಿನ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ಅಧಿಕಾರಿ ಸಮಿ ಅಬು ಜುಹ್ರಿ ಈ ದಾಳಿಯನ್ನು ಶ್ಲಾಘಿಸಿದ್ದು, ಇದು ಗಾಜಾದಲ್ಲಿ ಇಸ್ರೇಲ್ ಆಕ್ರಮಣಕ್ಕೆ ಪ್ರತಿಕ್ರಿಯೆ ಎಂದಿದ್ದಾನೆ. ಇದೇ ರೀತಿಯ ಇನ್ನೂ ಅನೇಕ ದಾಳಿಗಳು ನಡೆಯಲಿವೆ ಎಂದು ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ಎನ್​​ಎಸ್​ಎ ಅಜಿತ್​ ದೋವಲ್ ಇದೇ ವಾರ ಮಾಸ್ಕೋಗೆ ಭೇಟಿ: ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಚರ್ಚೆ ಸಾಧ್ಯತೆ - Ajit Doval to visit Moscow

ಟೆಲ್ ಅವಿವ್: ಜೋರ್ಡಾನ್​​ನಿಂದ ಗಡಿ ದಾಟಿ ಬರುತ್ತಿದ್ದ ಬಂದೂಕುಧಾರಿಯೊಬ್ಬ ಆಕ್ರಮಿತ ವೆಸ್ಟ್​ ಬ್ಯಾಂಕ್​ನ ಅಲೆನ್ಬಿ ಸೇತುವೆ ಗಡಿಯಲ್ಲಿ ಮೂವರು ಇಸ್ರೇಲಿ ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾಲೆಸ್ಟೈನ್​ ಇಸ್ಲಾಮಿಕ್ ಗುಂಪು ಹಮಾಸ್ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಜೋರ್ಡಾನ್ ಗಡಿಯಲ್ಲಿ ನಡೆದ ಈ ರೀತಿಯ ಮೊದಲ ದಾಳಿ ಇದಾಗಿದೆ.

ಜೋರ್ಡಾನ್​​ನಿಂದ ಸರಕುಗಳನ್ನು ಹೊತ್ತ ಟ್ರಕ್​ಗಳು ವೆಸ್ಟ್​ ಬ್ಯಾಂಕ್​ನ ಗಡಿಗೆ ಪ್ರವೇಶಿಸುವ, ಇಸ್ರೇಲ್ ನಿಯಂತ್ರಣದಲ್ಲಿರುವ ವಾಣಿಜ್ಯ ಸರಕು ಸಾಗಾಟ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಕಿಂಗ್ ಹುಸೇನ್ ಸೇತುವೆ ಎಂದೂ ಕರೆಯಲ್ಪಡುವ ಈ ಕ್ರಾಸಿಂಗ್ ಡೆಡ್​ ಸೀ ಸಮುದ್ರದ ಉತ್ತರಕ್ಕೆ ಅಮ್ಮನ್ ಮತ್ತು ಜೆರುಸಲೇಮ್ ಮಧ್ಯದಲ್ಲಿದೆ.

"ಭಯೋತ್ಪಾದಕನೊಬ್ಬ ಟ್ರಕ್ ಮೂಲಕ ಜೋರ್ಡಾನ್​ನಿಂದ ಅಲೆನ್ಬಿ ಸೇತುವೆಯ ಪ್ರದೇಶಕ್ಕೆ ಆಗಮಿಸಿ, ಟ್ರಕ್​ನಿಂದ ಹೊರಬಂದು ಸೇತುವೆಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಇಸ್ರೇಲಿ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾನೆ. ಭಯೋತ್ಪಾದಕನನ್ನು ಭದ್ರತಾ ಪಡೆಗಳು ಸ್ಥಳದಲ್ಲೇ ಕೊಂದು ಹಾಕಿವೆ. ದಾಳಿಯ ಪರಿಣಾಮವಾಗಿ ಮೂವರು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದಾರೆ" ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಇಸ್ರೇಲ್ ಅನ್ನು ಜೋರ್ಡಾನ್​​ನೊಂದಿಗೆ ಸಂಪರ್ಕಿಸುವ ಎಲ್ಲಾ ಮೂರು ಭೂ ಗಡಿ ಕ್ರಾಸಿಂಗ್​ಗಳನ್ನು ಮುಚ್ಚಲಾಗಿದೆ ಎಂದು ಈ ಮಾರ್ಗಗಳ ಮೇಲ್ವಿಚಾರಣೆ ನಡೆಸುವ ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಸರಕುಗಳನ್ನು ಇಳಿಸುವ ಪ್ರದೇಶದಲ್ಲಿ ಕನಿಷ್ಠ ಎರಡು ಡಜನ್ ಜೋರ್ಡಾನ್ ಟ್ರಕ್ ಚಾಲಕರನ್ನು ಇಸ್ರೇಲ್ ಮಿಲಿಟರಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ ಎಂದು ಜೋರ್ಡಾನ್ ಗಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಜೋರ್ಡಾನ್ 1994 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ನಿಕಟ ಭದ್ರತಾ ಸಂಬಂಧಗಳನ್ನು ಹೊಂದಿವೆ. ಜೋರ್ಡಾನ್​ನಿಂದ ಪ್ರತಿದಿನ ಡಜನ್​ಗಟ್ಟಲೆ ಟ್ರಕ್​ಗಳು ಇಸ್ರೇಲ್​ಗೆ ಬರುತ್ತವೆ. ಈ ಟ್ರಕ್​ಗಳು ಜೋರ್ಡಾನ್ ಮತ್ತು ಗಲ್ಫ್​ನಿಂದ ವೆಸ್ಟ್​ ಬ್ಯಾಂಕ್​ ಮತ್ತು ಇಸ್ರೇಲಿ ಮಾರುಕಟ್ಟೆಗಳಿಗೆ ಅಗತ್ಯವಾದ ಸರಕುಗಳನ್ನು ಪೂರೈಸುತ್ತವೆ.

"ದುಷ್ಟ ಭಯೋತ್ಪಾದಕನೊಬ್ಬ ನಮ್ಮ ಮೂವರು ನಾಗರಿಕರನ್ನು ಕೊಂದಿದ್ದಾನೆ. ಇಸ್ರೇಲ್ ಪಾಲಿಗೆ ಇದೊಂದು ದುಃಖದ ದಿನ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ಅಧಿಕಾರಿ ಸಮಿ ಅಬು ಜುಹ್ರಿ ಈ ದಾಳಿಯನ್ನು ಶ್ಲಾಘಿಸಿದ್ದು, ಇದು ಗಾಜಾದಲ್ಲಿ ಇಸ್ರೇಲ್ ಆಕ್ರಮಣಕ್ಕೆ ಪ್ರತಿಕ್ರಿಯೆ ಎಂದಿದ್ದಾನೆ. ಇದೇ ರೀತಿಯ ಇನ್ನೂ ಅನೇಕ ದಾಳಿಗಳು ನಡೆಯಲಿವೆ ಎಂದು ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ಎನ್​​ಎಸ್​ಎ ಅಜಿತ್​ ದೋವಲ್ ಇದೇ ವಾರ ಮಾಸ್ಕೋಗೆ ಭೇಟಿ: ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಚರ್ಚೆ ಸಾಧ್ಯತೆ - Ajit Doval to visit Moscow

ETV Bharat Logo

Copyright © 2024 Ushodaya Enterprises Pvt. Ltd., All Rights Reserved.