ETV Bharat / bharat

ಬದ್ಲಾಪುರದಲ್ಲಿ ಇಂಟರ್ನೆಟ್​ ಸ್ಥಗಿತ; ಶಾಲೆಗೆ ಆಡಳಿತಗಾರರ ನೇಮಿಸಿದ ಮಹಾರಾಷ್ಟ್ರ ಸರ್ಕಾರ - Badlapur Sexual Abuse Case

author img

By PTI

Published : Aug 21, 2024, 6:10 PM IST

ಬದ್ಲಾಪುರದಲ್ಲಿ ಪ್ರತಿಭಟನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬುಧವಾರದಿಂದ ಇಂಟರ್ನೆಟ್​ ಸ್ಥಗಿತಗೊಳಿಸಲಾಗಿದೆ. ಜೊತೆಗೆ, ಪ್ರತಿಭಟನೆಗಳ ಸಮಯದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 72 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

maha-govt-appoints-administrator-for-badlapur-school
ಬದ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಜನರ ಪ್ರತಿಭಟನೆ (IANS)

ಮುಂಬೈ(ಮಹಾರಾಷ್ಟ್ರ): ಬದ್ಲಾಪುರದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ನರ್ಸರಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆ ನಿರ್ವಹಣೆಯ ಉಸ್ತುವಾರಿಗೆ ಮಹಾರಾಷ್ಟ್ರ ಸರ್ಕಾರ ಇಂದು ಆಡಳಿತಗಾರರನ್ನು ನೇಮಿಸಿದೆ ಎಂದು ಕೇಂದ್ರ ಸಚಿವ ದೀಪಕ್​ ಕೆಸರ್ಕರ್​ ತಿಳಿಸಿದ್ದಾರೆ.

ಶಾಲಾ ನಿರ್ವಹಣೆಯನ್ನು ನಾವು ಪ್ರತ್ಯೇಕ ಆಡಳಿತಕ್ಕೆ ವಹಿಸಿದ್ದೇವೆ. ಆಡಳಿತಗಾರರು ಇಂದು ಅಥವಾ ನಾಳೆಯೊಳಗೆ ಅಧಿಕಾರ ವಹಿಸಿಕೊಳ್ಳುವರು ಎಂದು ಅವರು ಮಾಹಿತಿ ನೀಡಿದ್ದಾರೆ.

ಬದ್ಲಾಪುರ ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ನಡೆದ ಪ್ರತಿಭಟನೆಯ ವೇಳೆ ಕಲ್ಲು ತೂರಾಟದಲ್ಲಿ 17 ನಗರ ಪೊಲೀಸ್​ ಸಿಬ್ಬಂದಿ ಮತ್ತು 8 ರೈಲ್ವೆ ಪೊಲೀಸರು ಗಾಯಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತ್​​ಗೆ ನಿಯೋಜಿಸಲಾಗಿದೆ. ಸದ್ಯ ನಗರ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಸಿಸಿಟಿವಿ ಪರಿಶೀಲಿಸಿದ ಬಳಿಕ ಕಲ್ಲು ತೂರಾಟ ಸೇರಿದಂತೆ ಇತರೆ ಅಪರಾಧಗಳಲ್ಲಿ ಭಾಗಿಯಾದ 40 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಶಾಲಾ ಗೇಟ್​, ಕಿಟಕಿ, ಬೆಂಚ್​ ಮತ್ತು ಬಾಗಿಲುಗಳನ್ನು ಮುರಿದು ಭಾರೀ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: 'ಲಡ್ಕಿ ಬೆಹನ್​ ಯೋಜನೆಯ ₹1,500 ಬೇಡ, ಸುರಕ್ಷತೆ ಬೇಕು': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ

ಮುಂಬೈ(ಮಹಾರಾಷ್ಟ್ರ): ಬದ್ಲಾಪುರದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ನರ್ಸರಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆ ನಿರ್ವಹಣೆಯ ಉಸ್ತುವಾರಿಗೆ ಮಹಾರಾಷ್ಟ್ರ ಸರ್ಕಾರ ಇಂದು ಆಡಳಿತಗಾರರನ್ನು ನೇಮಿಸಿದೆ ಎಂದು ಕೇಂದ್ರ ಸಚಿವ ದೀಪಕ್​ ಕೆಸರ್ಕರ್​ ತಿಳಿಸಿದ್ದಾರೆ.

ಶಾಲಾ ನಿರ್ವಹಣೆಯನ್ನು ನಾವು ಪ್ರತ್ಯೇಕ ಆಡಳಿತಕ್ಕೆ ವಹಿಸಿದ್ದೇವೆ. ಆಡಳಿತಗಾರರು ಇಂದು ಅಥವಾ ನಾಳೆಯೊಳಗೆ ಅಧಿಕಾರ ವಹಿಸಿಕೊಳ್ಳುವರು ಎಂದು ಅವರು ಮಾಹಿತಿ ನೀಡಿದ್ದಾರೆ.

ಬದ್ಲಾಪುರ ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ನಡೆದ ಪ್ರತಿಭಟನೆಯ ವೇಳೆ ಕಲ್ಲು ತೂರಾಟದಲ್ಲಿ 17 ನಗರ ಪೊಲೀಸ್​ ಸಿಬ್ಬಂದಿ ಮತ್ತು 8 ರೈಲ್ವೆ ಪೊಲೀಸರು ಗಾಯಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತ್​​ಗೆ ನಿಯೋಜಿಸಲಾಗಿದೆ. ಸದ್ಯ ನಗರ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಸಿಸಿಟಿವಿ ಪರಿಶೀಲಿಸಿದ ಬಳಿಕ ಕಲ್ಲು ತೂರಾಟ ಸೇರಿದಂತೆ ಇತರೆ ಅಪರಾಧಗಳಲ್ಲಿ ಭಾಗಿಯಾದ 40 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಶಾಲಾ ಗೇಟ್​, ಕಿಟಕಿ, ಬೆಂಚ್​ ಮತ್ತು ಬಾಗಿಲುಗಳನ್ನು ಮುರಿದು ಭಾರೀ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: 'ಲಡ್ಕಿ ಬೆಹನ್​ ಯೋಜನೆಯ ₹1,500 ಬೇಡ, ಸುರಕ್ಷತೆ ಬೇಕು': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.