thumbnail

ಕೆಸರು ಗದ್ದೆಯಂತಾದ ರಸ್ತೆ.. ಎದ್ದು-ಬಿದ್ದು ಸಂಚರಿಸುತ್ತಿರುವ ವಾಹನ ಸವಾರರು

By

Published : Oct 13, 2020, 1:50 PM IST

ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ ಬಸವೇಶ್ವರ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದ ಹಿನ್ನೆಲೆ ರಸ್ತೆ ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು ಎದ್ದು-ಬಿದ್ದು ಸಂಚರಿಸುತ್ತಿದ್ದಾರೆ. ಇದೇ ರಸ್ತೆ ನಗರದ ಪ್ರಮುಖ ಸರ್ಕಾರಿ ಕಚೇರಿಗಳೂ ಸೇರಿ, ರಾಷ್ಟ್ರೀಯ ಪಕ್ಷಗಳ ಕಚೇರಿಯನ್ನೂ ಸಂಪರ್ಕಿಸುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ನೀರು ನಿಂತು ವಾಹನಗಳು ಸಂಚರಿಸುವುದು ಅಸಾಧ್ಯ ಎಂಬಂತಾಗಿದೆ. ಈ ವೇಳೆ ಬೈಕ್ ಸವಾರನೊಬ್ಬ ರಸ್ತೆ ಮಧ್ಯೆ ಸಿಲುಕಿ ಹಿಂಬದಿ ಸವಾರ ಬೈಕ್​ನಿಂದ ಕೆಳಗೆ ಬಿದ್ದ ಘಟನೆ ಸಹ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.