thumbnail

By

Published : Jul 1, 2020, 10:03 AM IST

Updated : Jul 1, 2020, 11:51 AM IST

ETV Bharat / Videos

ಸಾಮಾಜಿಕ ಅಂತರ ಮರೆತು ಟಗರು ಕಾಳಗ: ಸಾರ್ವಜನಿಕರ ಆಕ್ರೋಶ

ಎಲ್ಲೆಡೆ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಆದರೆ, ತಾಲೂಕಿನ ವೀರೇಶ ನಗರದಲ್ಲಿ ಗ್ರಾಮಸ್ಥರು, ಟಗರಿನ ಕಾಳಗ ನಡೆಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಟಗರಿನ ಕಾಳಗ ನಡೆಸಲು ಯಾರು ಅನುಮತಿ ಕೊಟ್ಟರು, ಸಂಬಂಧಿಸಿದ ಗ್ರಾ.ಪಂ ಅಧಿಕಾರಿ ಏನು ಮಾಡುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಳ್ಳಿಯ ಜನರು ಟಗರಿನ ಕಾಳಗ ನೋಡುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡದಿರುವುದು ಟೀಕೆಗೆ ಕಾರಣವಾಗಿದೆ. ಓರ್ವ ಪೊಲೀಸ್ ಪೇದೆ ಕೂಡಾ ಟಗರಿನ ಕಾಳಗ ಬಂದೋಬಸ್ತ್​​​​ನಲ್ಲಿ ಇರುವುದು ಕಂಡು ಬಂದಿದೆ. ಮೇಲಧಿಕಾರಿಗಳು ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated : Jul 1, 2020, 11:51 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.