thumbnail

By

Published : Oct 7, 2019, 12:07 PM IST

ETV Bharat / Videos

ಕಾವಾಡಿಗಳಿಗೆ ಅನ್ನಾಹಾರ ನೀಡುವುದೇ ನನಗೆ ಸಂಭ್ರಮ: ಶೋಭಾ ಕರಂದ್ಲಾಜೆ

ಮೈಸೂರು: ಮೈಸೂರು ದಸರಾದ ಸಮಯದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮೈಸೂರಿಗೆ ಆಗಮಿಸುವ ಕಾವಾಡಿಗರಿಗೆ, ಮಾವುತರಿಗೆ ಹಾಗೂ ಅವರ ಪತ್ನಿಯರಿಗೆ ಊಟ, ಉಪಹಾರ ಸೇರಿದಂತೆ ಬಾಗಿನ ನೀಡುತ್ತಾ ಬಂದಿದ್ದು, ಇಂದು ಕೂಡ ಸಂಸದೆ ಕಾವಡಿಗರಿಗೆ ಉಪಹಾರ ಕೂಟ ಏರ್ಪಡಿಸಿದ್ದರು. ಈ ವೇಳೆ ಈಟಿವಿ ಭಾರತ್​​ನೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, 2018ರಿಂದ ನಾನು ಈ ಕೂಟವನ್ನು ಮಾಡುತ್ತಾ ಬಂದಿದ್ದು, ದಸರಾದ ವೇಳೆ ಆಗಮಿಸುವ ಆನೆ ಹಾಗೂ ಅದರ ಕಾವಾಡಿಗರಿಗೆ ಉಪಹಾರ ಕೂಟ ಏರ್ಪಡಿಸಿ ಅವರ ಪತ್ನಿಯರಿಗೆ ಬಾಗಿನ ಅರ್ಪಿಸುವುದು ನನಗೆ ಅತ್ಯಂತ ಪ್ರಿಯವಾದ ಕಾರ್ಯ. ಎಷ್ಟೇ ಒತ್ತಡವಿದ್ದರೂ ಈ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ಮೈಸೂರಿಗೆ ಬಂದು ಈ ಸಂಭ್ರಮದಲ್ಲಿ ಭಾಗಿಯಾಗುತ್ತೇನೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.