ಪ್ರವಾಹದಲ್ಲಿ ಸಿಲುಕಿದ್ದ ವೃದ್ಧ... ಸ್ಥಳೀಯರ ಸಾಹಸದಿಂದ ಪಾರಾದ
ಬೆಳಗಾವಿ: ಪ್ರವಾಹದಲ್ಲಿ ಸಿಲುಕಿದ್ದ ಅನಾರೋಗ್ಯ ಪೀಡಿತ ವೃದ್ಧನನ್ನು ಸ್ಥಳೀಯರೇ ರಕ್ಷಿಸಿದ ಘಟನೆ ಜಿಲ್ಲೆಯ ಶಿವಾಜಿನಗರದಲ್ಲಿ ನಡೆದಿದೆ. ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಒಳಗಿದ್ದ ಹಲವರು ಹೊರಬಂದರೂ ವೃದ್ಧನಿಗೆ ಸಾಧ್ಯವಾಗಿರಲಿಲ್ಲ. ಈ ವೇಳೆ 15 ಜನರ ತಂಡ ಮನೆಯಲ್ಲಿ ಸಿಲುಕಿದ್ದ ಅನಾರೋಗ್ಯ ಪೀಡಿತ ವೃದ್ಧನನ್ನು ಟ್ರೇನಲ್ಲಿ ಮಲಗಿಸಿಕೊಂಡು ಹೊರ ತಂದಿದ್ದಾರೆ. ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Aug 9, 2019, 6:04 PM IST