ಕತ್ತಲಲ್ಲಿ ಸಂಕ್ರಾತಿ ಹಬ್ಬ....ನೆರೆ ಸಂತ್ರಸ್ಥರ ಕಣ್ಣೀರ ಕತೆ ಈಟಿವಿ ಭಾರತ್ನೊಂದಿಗೆ - Natural disaster
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5700315-thumbnail-3x2-ckd.jpg)
ಹಿಂದೆಂದೂ ಕಂಡರಿಯದ ಪ್ರಕೃತಿ ವಿಕೋಪಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ 80ಕ್ಕೂ ಹೆಚ್ಚು ಹಳ್ಳಿಗಳು ಮುಳಗಡೆಯಾಗಿದ್ದು, ಇನ್ನು ಕೆಲ ಕುಟುಂಬಗಳು ಬೀದಿಗಳಲ್ಲಿಯೆ ಜೀವನ ಕಳೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ಕಳೆದ ದಸರಾ, ದೀಪವಾಳಿ ಹಬ್ಬವನ್ನು ಕತ್ತಲಲ್ಲಿ ಕಳೆದ ನೆರೆ ಸಂತ್ರಸ್ಥರು ಈಗ ಸಂಕ್ರಾತಿ ಹಬ್ಬವನ್ನು ಕೂಡ ಬೀದಿಗಳಲ್ಲಿ, ಸಮುದಾಯ ಭವನಗಳಲ್ಲಿ, ಶೆಡ್ಡ್ಗಳಲ್ಲಿ ಕಳೆಯುವಂತಹ ಪರಿಸ್ಥಿತಿ ನೆರೆ ಸಂತ್ರಸ್ಥರಿಗೆ ಚಿಕ್ಕೋಡಿಯಲ್ಲಿ ಬಂದೊದಗಿದೆ.