thumbnail

ಹೂವು ಕೊಳ್ಳುವ ಗುಂಗಲ್ಲಿ ಕೋವಿಡ್ ನಿಯಮಾವಳಿ ಮರೆತ ಕುಂದಾನಗರಿ ಜನ

By

Published : Nov 14, 2020, 9:48 AM IST

ಬೆಳಗಾವಿ: ದೇಶದೆಲ್ಲೆಡೆ ದೀಪಗಳ ಹಬ್ಬದ ಸಂಭ್ರಮವಿದೆ. ಆದ್ರೆ, ಅಶೋಕ ನಗರದ ಹೂವಿನ ಮಾರುಕಟ್ಟೆ ಹರಾಜು ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಕೋವಿಡ್​​ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಮರೆತು ಹೂವು ಸೇರಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡು ಎಚ್ಚರಿಕೆ ವಹಿಸುವಂತೆ ಎಷ್ಟೇ ತಿಳಿಸಿದರೂ ಕೂಡ ಸಾರ್ವಜನಿಕರು ಮಾತ್ರ ಡೋಂಟ್​ ಕೇರ್​​. ಹೆಚ್ಚಿನವರು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸದೇ, ಜಿಲ್ಲಾಡಳಿತ ಹೈರಾಣಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.