ಸಿಎಂಗೆ ಸಂಜೆ 4 ಗಂಟೆಯ ಡೆಡ್​​ಲೈನ್​: ಯೋಗೇಶ್ವರ್​​​ ಅಭಿಮಾನಿಯಿಂದ ಬಿಎಸ್​ವೈಗೆ ಬಹಿರಂಗ ಎಚ್ಚರಿಕೆ! - ಚಿತ್ರ ನಿರ್ದೇಶಕರಾದ ಚಂದ್ರಶೇಖರ ಮಾವಿನಕುಂಟೆ

🎬 Watch Now: Feature Video

thumbnail

By

Published : Feb 6, 2020, 1:35 PM IST

Updated : Feb 6, 2020, 1:43 PM IST

ದೊಡ್ಡಬಳ್ಳಾಪುರ: ಮಾಜಿ ಸಚಿವರಾದ ಸಿ.ಪಿ. ಯೋಗೇಶ್ವರ್​​ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಅವರ ಅಭಿಮಾನಿಯೋರ್ವ ಸಿಎಂಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ದೊಡ್ಡಬಳ್ಳಾಪುರದ ಚಿತ್ರ ನಿರ್ದೇಶಕ ಚಂದ್ರಶೇಖರ ಮಾವಿನಕುಂಟೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​​​​ ಅವರ ನಿಕಟವರ್ತಿಯಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್​​ಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಈ ಎಚ್ಚರಿಕೆ ರವಾನಿಸಿದ್ದಾರೆ. ಯಡಿಯೂರಪ್ಪನವರೇ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವೆ. ಇಂದು ಸಂಜೆ ನಾಲ್ಕು ಗಂಟೆಯೊಳಗೆ ಗುಡ್ ನ್ಯೂಸ್ ಕೊಡ್ಬೇಕು. ಇಲ್ಲವಾದರೆ ನಿಮಗೆ ನಿದ್ದೆ ಮಾಡಲು ಬಿಡದೆ, ನಿಮ್ಮನ್ನು ಕಾಡುತ್ತೇನೆ ಎಂದು ಚಂದ್ರಶೇಖರ್​ ಹೇಳಿದ್ದಾರೆ.
Last Updated : Feb 6, 2020, 1:43 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.