ಒಂದೇ ರಾತ್ರಿ ಎರಡು ನಾಯಿಗಳನ್ನು ಕೊಂದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - LEOPARD KILLS DOGS

🎬 Watch Now: Feature Video

thumbnail

By ETV Bharat Karnataka Team

Published : Feb 7, 2025, 5:39 PM IST

ಸುಳ್ಯ/ದಕ್ಷಿಣ ಕನ್ನಡ: ಇಲ್ಲಿನ ಅಜ್ಜಾವರ ಗ್ರಾಮದ ಮನೆಯೊಂದರ ಅಂಗಳಕ್ಕೆ ಚಿರತೆಯೊಂದು ಬಂದು ಎರಡು ನಾಯಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.  

ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಪಡ್ಡಂಬೈಲು ಶಂಕರ ಪಾಟಾಳಿ ಅವರ ಮನೆ ಅಂಗಳದಲ್ಲಿ ರಾತ್ರಿ ಸುಮಾರು 1 ಗಂಟೆ 40 ನಿಮಿಷದಿಂದ 1 ಗಂಟೆ 42 ನಿಮಿಷದೊಳಗೆ ಚಿರತೆ ಬಂದಿದೆ. ನಂತರ ಅಲ್ಲಿದ್ದ ನಾಯಿಯನ್ನು ಹಿಡಿದು ಅಂಗಳದಲ್ಲೇ ಕೊಂದು ತಿನ್ನಲು ಮುಂದಾಗಿದೆ. ಈ ವೇಳೆ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ನಿದ್ರೆಯಿಂದ ಎದ್ದು ಹೊರಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ.  

ಮುಂಜಾನೆ ಸುಮಾರು 5 ಗಂಟೆ 25 ನಿಮಿಷಕ್ಕೆ ಮತ್ತೆ ಬಂದು ಎರಡನೇ ನಾಯಿಯನ್ನೂ ಕೊಂದು ಹಾಕಿದೆ. ಆ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡು ಲೈಟ್ ಹಾಕುವ ಸಂದರ್ಭದಲ್ಲಿ ಅಲ್ಲಿಂದ ಮತ್ತೆ ಪರಾರಿಯಾಗಿದೆ. 

ಒಂದೇ ರಾತ್ರಿ ಬೇರೆ ಬೇರೆ ಸಮಯಗಳಲ್ಲಿ ಎರಡು ಬಾರಿ ಅಂಗಳಕ್ಕೆ ಬಂದು ಚಿರತೆ ಸಂಚರಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಚಿರತೆ ಹಾವಳಿ: ಮೈಸೂರು ಇನ್ಫೋಸಿಸ್ ಟ್ರೈನಿ ಉದ್ಯೋಗಿಗಳಿಗೆ ಜ.26ರವರೆಗೆ ರಜೆ ಘೋಷಣೆ - LEOPARD SPOTTED IN INFOSYS CAMPUS

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.