thumbnail

By

Published : Mar 15, 2020, 8:07 PM IST

ETV Bharat / Videos

ಕೊರೊನಾ ಹರಡುವ ಭೀತಿ: ಸರಳವಾಗಿ ನಡೆಯಲಿದೆ ಗವಿಮಠ ಶ್ರೀಗಳ ಪುಣ್ಯಾರಾಧನೆ

ಮಾರ್ಚ್ 17 ರಂದು ಕೊಪ್ಪಳದ‌ ಶ್ರೀ ಗವಿಮಠದಲ್ಲಿ ನಡೆಯಲಿರುವ ಲಿಂಗೈಕ್ಯ ಶಿವಶಾಂತವೀರ ಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಕೊರೊನಾ ಭೀತಿ ಹಿನ್ನೆಲೆ ಸರಳವಾಗಿ ಆಚರಿಸಲು ಗವಿಮಠ ನಿರ್ಧರಿಸಿದೆ. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದು, ಅಂದು ನಡೆಯಬೇಕಾಗಿದ್ದ ಪಾದಯಾತ್ರೆ, ಗುರುವಂದನಾ‌ ಕಾರ್ಯಕ್ರಮ, ಕೃಷಿ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ರದ್ದುಪಡಿಸಲಾಗಿದೆ. ಇದಕ್ಕೆ ಶ್ರೀಮಠ ಭಕ್ತರು ಸಹಕರಿಸುವಂತೆ ಗವಿಮಠ ಕೋರಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.