ಕೊಯಿಮತ್ತೂರು (ತಮಿಳುನಾಡು): ವಾಲ್ಪಾರೈ ಬಳಿಯ ಟೈಗರ್ ವ್ಯಾಲಿ ಹಿಲ್ ರೋಡ್ನಲ್ಲಿ ದ್ವಿಚಕ್ರವಾಹನದ ಮೂಲಕ ಸಾಗುತ್ತಿದ್ದ ಜರ್ಮನ್ ಪ್ರವಾಸಿಗನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಪ್ರವಾಸಿಗ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯನ್ನು ಮೈಕೆಲ್ ಜುರ್ಸೆನ್ ಎಂದು ಗುರುತಿಸಲಾಗಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆ ವಿದೇಶಿ ಪ್ರಜೆಯನ್ನು ಮೊದಲು ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶ ವಾಲ್ಪಪಾರೈನಲ್ಲಿನ ವಾಟರ್ಫಾಲ್ ಗಾರ್ಡನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಪೊಲಚಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸಿ ಪ್ರವಾಸಿಗ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
77 ವರ್ಷದ ಜರ್ಮನ್ ಪ್ರವಾಸಿಗ ಮೈಕೆಲ್ ಜುರ್ಸೆನ್ ಭಾರತದ ಪ್ರವಾಸದಲ್ಲಿರುವಾಗ ಈ ದುರ್ಘಟನೆ ನಡೆದಿದೆ. ಅವರು ಹಿಲ್ ರೋಡ್ನಲ್ಲಿ ಸಾಗುವಾಗ ಕಾಡಾನೆ ಇರುವುದನ್ನು ಗಮನಿಸದೆ ಈ ಅನಾಹುತವಾಗಿದೆ ಎಂದು ವರದಿಯಾಗಿದೆ.
ಇನ್ನು ಈ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಲ್ಲಿ ಜರ್ಮನ್ ಪ್ರವಾಸಿಗ ಆನೆ ಇರುವುದನ್ನು ಅರಿತು ವಾಹನಗಳು ನಿಂತಿದ್ದನ್ನು ಕಂಡಿದ್ದಾರೆ. ರಸ್ತೆ ಬದಿಯಲ್ಲಿದ್ದ ಆನೆ ಏನು ಮಾಡುವುದಿಲ್ಲ ಎಂದು ವಾಹನವನ್ನು ಓವರ್ಟೇಕ್ ಮಾಡಿ ಮುಂದೆ ಸಾಗಿರುವುದು ದಾಖಲಾಗಿದೆ.
ಪ್ರವಾಸಿಗ ಬಲಭಾಗದಲ್ಲಿ ಸಾಗುತ್ತಿದ್ದಂತೆ ಕ್ರೋಧಗೊಂಡಿದ್ದ ಆನೆ ದಾಳಿ ಮಾಡಿ ಕೆಳಗೆ ಬೀಳಿಸಿದೆ. ಈ ವೇಳೆ ಆತ ಮತ್ತೆ ಮೇಲೆ ಏಳಲು ಪ್ರಯತ್ನಿಸಿದರೂ ಆತನ ಮೇಲೆ ಮತ್ತೆ ಆನೆ ದಾಳಿ ಮಾಡಿದೆ. ತನ್ನ ಪ್ರಾಣ ರಕ್ಷಿಸಿಕೊಳ್ಳಲು ಮೈಕೆಲ್ ಕಾಡಿನೊಳಗೆ ಹೋದರು ಪ್ರಯೋಜನವಾಗಿಲ್ಲ. ಅಲ್ಲೂ ಕೂಡ ಆನೆ ಹಿಂಬಾಲಿಸಿದೆ. ಈ ವೇಳೆ ಆತ ಓಡಿ ಹೋಗಲು ಹರಸಾಹಸ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಹೊತ್ತಿಗೆ ರಸ್ತೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಮಿರಾಜ್ 2000 ಫೈಟರ್ ಜೆಟ್ ಅಪಘಾತ; ಪೈಲಟ್ಗಳು ಪಾರು
ಇದನ್ನೂ ಓದಿ: ವಿವಾಹವಾದ ಕೆಲವೇ ಗಂಟೆಗಳಲ್ಲಿ ಹಣ, ಆಭರಣದೊಂದಿಗೆ ವಧು ನಾಪತ್ತೆ: ವರ ಮಾಡಿದ್ದೇನು ಗೊತ್ತಾ?