ಟಾಗೋರ್ ಕಡಲತೀರದಲ್ಲಿ ಕಾಂಪೌಂಡ್ ಗೊಂದಲ: ಸುರಕ್ಷತೆ ದೃಷ್ಟಿಯಿಂದ ಕ್ರಮ ಎಂದ ಜಿಲ್ಲಾಡಳಿತ - ಟಾಗೋರ್ ಕಡಲತೀರ ಕಾಂಪೌಂಡ್
🎬 Watch Now: Feature Video
ಕಾರವಾರ: ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಕಾಂಪೌಂಡ್ ನಿರ್ಮಾಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೆ ಶಂಕು ಸ್ಥಾಪನೆ ನಡೆಸಿ ಯೂ- ಟರ್ನ್ ಹೊಡೆದಿದ್ದ ಶಾಸಕಿ ರೂಪಾಲಿ ನಾಯ್ಕ ನಡೆ ಇದೀಗ ಹಾಸ್ಯಾಸ್ಪದಕ್ಕೆ ಕಾರಣವಾಗಿದೆ. ಈ ನಡುವೆ ಲಕ್ಷಾಂತರ ರೂ. ವೆಚ್ಚದ ಕಾಮಗಾರಿ ಹಣ ಪೋಲಾಗದಂತೆ ಮತ್ತು ಕಡಲ ತೀರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಕಾಮಗಾರಿ ನಡೆಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದ್ದು, ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.